ಸಂಜೆಯಾಗುತ್ತಿದ್ದಂತೆ ಪ್ರಾರಂಭವಾದ ಮಳೆ: ಬಿಟ್ಟೂ‌ಬಿಡದೆ ಸುರಿದ ಮಳೆಗೆ ಸಾರ್ವಜನಿಕರ ಪಾರದಾಟ

ದೊಡ್ಡಬಳ್ಳಾಪುರ‌ ನಗರದಲ್ಲಿ ಕಳೆದ ಒಂದು ಗಂಟೆಯಿಂದ ಸುರಿದ ಮಳೆಯಿಂದಾಗಿ‌ ಸಾರ್ವಜನಿಕರು‌, ವಾಹನ‌ ಸವಾರರು ಪರದಾಡುವಂತಾಗಿತ್ತು.

ಮಳೆಯಿಂದಾಗಿ ಕೆಲಸ ಮುಗಿಸಿ ವಾಪಸ್ ತೆರಳುತ್ತಿದ್ದ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹ ಪರದಾಟದಾಡುವಂತಾಗಿತ್ತು. ಬೀದಿ ಬದಿ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಮಳೆಯಿಂದ ಆಶ್ರಯ ಪಡೆದರು.

ಇದಲ್ಲದೇ ತುಂಬಿದ್ದ ಮೋರಿಗಳಲ್ಲಿ ಸಾರಾಗವಾಗಿ ನೀರು ಹರಿಯದೇ ರಸ್ತೆಗೆ ಬಂದಿದ್ದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು.

Leave a Reply

Your email address will not be published. Required fields are marked *