ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

ರಾಷ್ಟ್ರೀಯ ಗಣಿತ ದಿನಾಚರಣೆಯ ಪ್ರಯುಕ್ತ ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಆಚರಣೆ ಮಾಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಎನ್. ಆನಂದಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಕ್ರಿಯಾಶೀಲತೆಯನ್ನು ಹೊಂದಿರಲೇಬೇಕು. ಬದುಕಿನ ಪ್ರತಿಯೊಬ್ಬರಿಗೂ ಅಂಕಿ ಸಂಖ್ಯೆಗಳ ಪರಿಚಯ ಇರಲೇ ಬೇಕು. ನಿತ್ಯದ ಜೀವನಕ್ಕೆ ಎಲ್ಲರಿಗೂ ಗಣಿತ ಬೇಕು ಎಂದರು.

ಉಪಪ್ರಾಂಶುಪಾಲ ಎಸ್.ಎಸ್ ಶಿವಶಂಕರ್ ಮಾತನಾಡಿ, ರಾಮನುಜನ್ ಅವರ ಬದುಕು ಬವಣೆಗಳನ್ನು ಮೆಟ್ಟಿ ನಿಂತು ಗಣಿತಕ್ಕೆ ಅಪಾರ ಕೊಡಿಗೆ ಕೊಟ್ಟಿದ್ದಾರೆ. ಜ್ಞಾನದಿಂದ ಬಡತನವನ್ನು ಮೆಟ್ಟಿನಿಂತವರು..2520 (7×12×30), 1279 ಸಂಖ್ಯೆಗಳನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎ.ಎನ್.ಲೀಲಾವತಿ, ಎನ್.ರವಿಕುಮಾರ್, ಮುನಿಶೇಖರ್, ಮೋಹನ್ ಹಾಗೂ ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *