
ದೊಡ್ಡಬಳ್ಳಾಪುರ: 2024=2025ನೇ ಸಾಲಿನ ಹಣಬೆ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶ್ರವಣೂರಿನಲ್ಲಿ ಏರ್ಪಡಿಸಲಾಗಿತ್ತು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕಂಠಪಾಠ, ಅಭಿನಯ ಗೀತೆ, ದೇಶಭಕ್ತಿ ಗೀತೆ, ಛದ್ಮ ವೇಷ, ಕವನ ವಾಚನ, ಪ್ರಬಂಧ, ಚಿತ್ರಕಲೆ, ಕ್ಲೇ ಮಾಡ್ಲಿಂಗ್ ಮುಂತಾದ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಬಹುಮಾನ ಪಡೆದು ಖಷಿಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್. ಶ್ರವಣೂರು ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಮ್ಮ ಬೈರೇಗೌಡರು. S.C.D.M.C ಅಧ್ಯಕ್ಷರಾದ ರಾಮಕೃಷ್ಣ.T. ನಿವೃತ್ತ ಶಿಕ್ಷಕರಾದ ಕೆಂಪಣ್ಣ.G. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಚನ್ನೇಗೌಡರು. ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರಾದ ರಾಜೇಶ್. ನಿವೃತ್ತ ಶಿಕ್ಷಕರಾದ ನಾರಾಯಣ.ಎಂ. ಅಜಯ್ ಕುಮಾರ್. ನಂಜೇಗೌಡರು. ಮುಖ್ಯ ಶಿಕ್ಷಕರು C.R.Pಗಳು ಹಣಬೆ ಕ್ಲಸ್ಟರ್ ನ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.