ಶಾಸಕಿಯ ಪುತ್ರನಿಗೆ ಬಂಧನದ ಭೀತಿ…

ದೇವದುರ್ಗ: ಶಾಸಕಿಯ ಪುತ್ರ ಸಂತೋಷ ನಾಯಕ ಮತ್ತು ಸಹೋದರ ಬೆಂಬಲಿಗರು ಸೇರಿದಂತೆ ಒಟ್ಟು 16 ಜನರಿಗೆ ಜಿಲ್ಲಾ ನ್ಯಾಯಾಲಯದ ನಾಯದೀಶರು ಬಂಧನದ ಭೀತಿಯ ನೋಟಿಸ್ ಜಾರಿ ಮಾಡಿದ್ದಾರೆ.

ತಾಲೂಕಿನ ಕಾಕರಗಲ್ ಸಮೀಪದ ರಾಜ್ಯ ಹೆದ್ದಾರಿಗೆ ನಿರ್ಮಿಸಿರುವ ಟೋಲ್ ಗೇಟ್ ಬಂದ್ ಮಾಡಿ, ಅಲ್ಲಿನ 19,56,300 ಲಕ್ಷಗಟ್ಟಲೆ ಬೆಲೆ ಬಾಳುವ ಸಾಮಗ್ರಿಗಳನ್ನು ಧ್ವಂಸ ಮಾಡಿದ ಜೆಡಿಎಸ್ ಶಾಸಕಿಯ ಪುತ್ರನಾದ ಸಂತೋಷ ನಾಯಕ ಮತ್ತು ಸಹೋದರ, ಬೆಂಬಲಿಗರು ಗುಂಡಾವರ್ತನೆಗೆ ಸಾಕ್ಷಿಯಾಗಿದ್ದನ್ನು ಪರಿಗಣಿಸಿ ದಿನಾಂಕ:-23-4-25ರಂದು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಶಾಸಕಿಯ ಪುತ್ರ ಸಂತೋಷ ನಾಯಕ, ಸಹೋದರ ಮತ್ತು ಬೆಂಬಲಿಗರು ಕೋರ್ಟ್ ಗೆ ಹಾಜರಾಗುವಂತೆ 5-6 ನೋಟಿಸ್ ಗಳಿಗೆ ಗೌರವ ನೀಡದೆ, ತಲೆಮರಿಸಿಕೊಂಡು ರಾಜರೋಷವಾಗಿ ಓಡಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಅರೆಸ್ಟ್ ವಾರೆಂಟ್ ಮಾಡಿದರೂ ಕೂಡಾ, ಜಿಲ್ಲಾ ವರಿಷ್ಠಾಧಿಕಾರಿಗಳು ಪ್ರಭಾವಿ ಶಾಸಕಿಯ ಪುತ್ರನೆಂಬ ಕಾರಣಕ್ಕೆ ಬಂಧಿಸುತ್ತಿಲ್ವ..? ಶಾಸಕರ ಮಕ್ಕಳಿಗೆ ಒಂದು ಕಾನೂನು, ಜನ ಸಾಮಾನ್ಯರಿಗೆ ಒಂದು ಕಾನೂನು ಮಾಡಲಾಗಿದೆಯಾ, ಕೂಡಲೇ ಶಾಸಕಿಯ ಪುತ್ರ ಸಂತೋಷ ನಾಯಕ ಮತ್ತು ಬೆಂಬಲಿಗರನ್ನು ಬಂಧಿಸದಿದ್ದರೆ ಪೊಲೀಸ್ ಇಲಾಖೆ ಮಾಡಿದ ಕರ್ತವ್ಯಲೋಪವನ್ನು ಖಂಡಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ವಿಶ್ವನಾಥ ಬಲ್ಲಿದವ ಆಗ್ರಹಿಸಿದರು.

Leave a Reply

Your email address will not be published. Required fields are marked *