ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮ ಪಂಚಾಯತಿ ಹೆಸರಿಗೆ ಮಾತ್ರ. 2014-15 ರಲ್ಲಿ ಮರುವಿಂಗಡಣೆ ಪ್ರಕಾರ ಶಾವಂತಗೇರಾ ಗ್ರಾಮ ಪಂಚಾಯತಿಯಾಗಿದೆ.
ಈ ಪಂಚಾಯಿತಿಯಲ್ಲಿ ಆಡಳಿತ ಅಧಿಕಾರಿಯಾದ ಬಸವರಾಜ ಹಟ್ಟಿ, ಎಡಿ ಅಣ್ಣರಾವ್, ಮತ್ತು ಪ್ರಭಾರಿ ಪಿಡಿಓ ಶಂಶುದ್ದೀನ್ ಇನ್ನೂಳಿದ ಅಧಿಕಾರಿಳದ್ದೇ ದರ್ಬಾರ್ ಆಗಿದೆ ಎಂದು ಇಲ್ಲಿನ ಸ್ಥಳೀಯರು ಹಾಗೂ ಬಹುಜನ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ನರಸಣ್ಣಗೌಡ ಬಿ.ಗಣೇಕಲ್ ಆರೋಪಿಸಿದ್ದಾರೆ…
ಮೊದಲು ಹಿರೇಬೂದುರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಯಾಗಿತ್ತು, ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದ್ದ ಮದರಕಲ್ ಗ್ರಾಮವೂ ಶಾವಂತಗೇರಾ ಗ್ರಾಮ ಪಂಚಾಯತಿಗೆ ಸೇರಿಸಿಕೊಂಡಿರುವ ಸಮಸ್ಯೆಯಿಂದ ಮದರಕಲ್ ಗ್ರಾಮದ ಪ್ರಭಾವಿ ಮುಖಂಡರು ಕೋರ್ಟ್ ಮೊರೆ ಹೋಗಿದ್ದರಿಂದ ಹೇಮನಾಳ ಮತ್ತು ಶಾವಂತಗೇರಾ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದಿರುವುದಿಲ್ಲ.
ಸದ್ಯ ಶಾವಂತಗೇರಾ ಗ್ರಾಮ ಪಂಚಾಯತಿ ಸಮಸ್ಯೆಗಳ ಆಗರವಾಗಿದೆ. ಅದರಲ್ಲಿ ಗ್ರಾಮ ಪಂಚಾಯತಿ ಇರುವುದು ಮೂಲಭೂತ ಸಮಸ್ಯೆಗಳಾದ ಬೆಳಕು, ನೀರು, ವಸತಿ ಪೂರೈಸಲು. ಆದರೆ, ಶಾವಂತಗೇರಾ ಗ್ರಾಮ ಪಂಚಾಯತಿಯಲ್ಲಿ ಚುನಾಯಿತ ಸದಸ್ಯರು ಇರಲಾರದಿಂದ “ಬೆಕ್ಕು ಇಲ್ಲದ ಮನೆಯಲ್ಲಿ ಇಲಿಚಾಮಟ ಲಾಗ ಹೊಡೆದಂತೆ” ಎಂಬ ಗಾದೆಯಂತೆ ಇಒ ಮತ್ತು ಪಿಡಿಒಗಳ ಚೆಲ್ಲಾಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2023-24ನೇ ಸಾಲಿನಲ್ಲಿ ವಸತಿ ಯೋಜನೆ ಅಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 30, ಬಸವ 80, ಪಿಎಮ್ಆರ್ ವೈಯ್ 372 ಸಮೀಕ್ಷೆ ಪಟ್ಟಿಯಲ್ಲಿ ವಸತಿಗಳು ಮಂಜೂರಾಗಿವೆ. ಆದರೆ, ಅಭಿವೃದ್ಧಿ ಅಧಿಕಾರಿ ಶಂಶುದ್ಧೀನ್ ಅವರು ರಾಜಕೀಯ ವ್ಯಕ್ತಿಗಳ ಗುಲಾಮ ಅಥವಾ ಗುಮಾಸ್ತರಾಗಿ ಕೆಲಸ ಮಾಡಿ, ರಾಜಕೀಯ ಪ್ರಭಾವಿಗಳ ಸಂಬಂಧಕರಿಗೆ ಮನೆಗಳು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಆಡಳಿತಾಧಿಕಾರಿಯಾದ ಬಸವರಾಜ ಹಟ್ಟಿ ಮತ್ತು ಪಿಡಿಓ ಶಂಶುದ್ಧೀನ್ ಅವರು ಮನೆಗಳು ಹಾಕುತ್ತೇವೆಂದು 20 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ಹಣ ವಸೂಲಿ ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಪಿಡಿಓ ಮತ್ತು ಇಓ ರವರು ಪಂಚಾಯತ್ ರಾಜ್ಯ ಕಾಯ್ದೆ 111 ಆಕ್ಟ್ ಪ್ರಕಾರ ಕಾರ್ಯನಿರ್ವಹಸುತ್ತಿಲ್ಲ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…
ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…
ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…
ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…
ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…