
ನಗರ: ಶಾಲಾ ಮಕ್ಕಳಿಗೆ ತಮ್ಮ ಕೈಲಾದ ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟ ಹಬ್ಬವನ್ನು ಆಚರಣೆ ಮಾಡಿ ಕೊಂಡ ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಹರೀಶ್ ಗೌಡ ರವರ ಧರ್ಮಪತ್ನಿ ಕಾಂತಾಮಣಿ ರವರಿಗೆ ಶಾಲಾ ಮಕ್ಕಳು ಶುಭ ಕೋರಿದರು.
ನಗರದ ವ್ಯಾಪ್ತಿಯ ವಿದ್ಯಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಪೆನ್, ಪೆನ್ಸಿಲ್ ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಅರ್ಥ ಪೂರ್ಣ ವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಧೈಯವಾಗಿದೆ. ಸದಾ ಜನಗಳ ನಡುವೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ನಗರ ಸಭಾ ಸದಸ್ಯ ನಾಗವೇಣಿ, ಜೆಡಿಎಸ್ ಮುಖಂಡ ನಾಗರಾಜ್, ಪ್ರಭಾಕರ್, ಕರೇನಹಳ್ಳಿ ಮಲ್ಲೇಶ್, ಪ್ರವೀಣ್ ಶಾಂತಿನಗರ, ಪಾದ್ರಿಪುರ ಮಹೇಶ್, ಉಜ್ಜನಿ ನರಸಿಂಹ ಗೌಡ, ರಾಮಕೃಷ್ಣ, ಸಂಜೀವ, ಗೌರಮ್ಮ, ಮುನಿರತ್ನಮ್ಮ, ಮುಖ್ಯೋಪಾಧ್ಯರು, ಶಾಲಾ ಶಿಕ್ಷಕರು, ಮಕ್ಕಳು ಹಾಜರಿದ್ದರು.