ವೈಸಿಪಿಗೆ ಮತ ಹಾಕಿದ್ದಕ್ಕೆ ಕೋಪಗೊಂಡ ಟಿಡಿಪಿ ಕಾರ್ಯಕರ್ತ ತನ್ನ ತಾಯಿಯನ್ನೇ ಕೊಲೆ..?

ಅನಂತಪುರ ಜಿಲ್ಲೆಯಲ್ಲಿ ಕಂಬದೂರು ಮಂಡಲದಲ್ಲಿ ವೈಸಿಪಿಗೆ ಮತ ಹಾಕಿದ್ದಕ್ಕೆ ಹೆತ್ತ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಟಿಡಿಪಿ ಕಾರ್ಯಕರ್ತ.

ವಡ್ಡೆ ವೆಂಕಟೇಶುಲು ಎಂಬ ವ್ಯಕ್ತಿ ತೆಲುಗು ದೇಶಂ ಪಕ್ಷದಲ್ಲಿ ತಿರುಗಾಡುತ್ತಿದ್ದಾಗ ಆತನ ತಾಯಿ ವಡ್ಡೆ ಸುಂಕಮ್ಮ (45) ತನ್ನ ಮಗನಿಗೆ ತಾನು ವೈಎಸ್‌ಆರ್‌ಸಿಪಿ ಪಕ್ಷಕ್ಕೆ ಮತ ಹಾಕಿರುವುದಾಗಿ ಹೇಳಿದ್ದರಿಂದ ಕೋಪಗೊಂಡು ಮದ್ಯ ಸೇವಿಸಿ ಮನೆಗೆ ಬಂದು ಜಗಳವಾಡಿದ್ದಾನೆ. ನಂತರ ಕಬ್ಬಿಣದ ಸುತ್ತಿಗೆಯಿಂದ ಬಡಿದು ತಾಯಿಯನ್ನು ಕೊಂದಿದ್ದಾನೆ.

ಈ ಕುರಿತು ಮಾಹಿತಿ ಪಡೆದ ಕಂಬದೂರು ಪೊಲೀಸರು, ಕೊಲೆ ನಡೆದ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ವಡ್ಡೆ ವೆಂಕಟೇಶಲುಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *