ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಗೆ ನಯವಂಚಕ ವೈದ್ಯನೊಬ್ಬ ಮರಳುಮಾತನಾಡಿ 10.50 ಲಕ್ಷ ಹಣ,500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ಗೆ ಉಂಡೆನಾಮ ಇಟ್ಟಿದ್ದಾನೆ.ವಂಚನೆಗೆ ಒಳಗಾದ ಮಹಿಳೆ ವೈದ್ಯನ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ವೇತಾ ಮಹಂತೇಶ್(46) ವಂಚನೆಗೆ ಒಳಗಾದವರು. ಡಾ.ಶಿವಕುಮಾರ್ ವಂಚಿಸಿದ ವೈದ್ಯ.
ಕರೊನಾ ಸಂಧರ್ಭದಲ್ಲಿ ಶ್ವೇತಾ ತಮ್ಮ ಪತಿ ಮಹಂತೇಶ್ ಹಾಗೂ ಮಗ ಇಕ್ಷುಧನ್ವ ಇಬ್ಬರನ್ನೂ ಕಳೆದುಕೊಂಡಿದ್ದರು. ಮಹಂತೇಶ್ ಲೋಕೋಪಯೋಗಿ ಇಲಾಖೆಯಲ್ಲಿ ಎಫ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತಿಯ ಸಾವಿನ ನಂತೆ ಅನುಕಂಪದ ಆಧಾರದ ಮೇಲೆ ಪತ್ನಿ ಶ್ವೇತಾ ರವರಿಗೆ ಕೆಲಸ ದೊರೆತಿತ್ತು. ಪತಿಯ ಕೆಲಸ ಧಕ್ಕಿಸಿಕೊಂಡ ಶ್ವೇತಾ ರವರ ಬಾಳಿಗೆ ಎಂಟ್ರಿ ಕೊಟ್ಟವನು ಡಾ.ಶಿವಕುಮಾರ್.
ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಮನೆಗೆ ಬಂದ ಡಾ.ಶಿವಕುಮಾರ್ ನಯವಾದ ಮಾತುಗಳಿಂದ ನಂಬಿಸಿ ಶ್ವೇತಾ ರವರ ಬಳಿ ಇದ್ದ 500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ತೂಕದ 110 ಬೆಳ್ಳಿ ನಾಣ್ಯಗಳನ್ನ ತನ್ನ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್ ಲಾಕರ್ ಓಪನ್ ಮಾಡಿಸಿದರು. ಸುರಕ್ಷತೆ ಹೆಸರ ಹೇಳಿ ಲಾಕರ್ ಕೀ ಗಳನ್ನ ಶ್ವೇತಾ ಬಳಿ ಇರಿಸಿದ್ದರು. ನಂತರ ಹೆಚ್ಚಿನ ಲಾಭದ ಆಮಿಷ ತೋರಿಸಿ ಶ್ವೇತಾ ಬಳಿ ಇದ್ದ 10.50 ಲಕ್ಷ ಹಣವನ್ನ ಡಾ.ಶಿವಕುಮಾರ್ ವರ್ಗಾವಣೆ ಮಾಡಿಸಿಕೊಂಡರು.
ಇದಾದ ಕೆಲವೇ ದಿನಗಳಲ್ಲಿ ಲಾಕರ್ ನಲ್ಲಿದ್ದ ವಜ್ರದ ಉಂಗುರ ಡಾ.ಶಿವಕುಮಾರ್ ಬೆರಳಿನಲ್ಲಿ ಕಾಣಿಸಿದೆ. ಲಾಕರ್ ಕೀ ನನ್ನ ಬಳಿ ಇರುವಾಗ ವಜ್ರದ ಉಂಗುರ ಹೇಗೆ ಬಂತು ಎಂದು ಪ್ರಶ್ನಿಸಿದಾಗ ಸಮಂಜಸ ಉತ್ತರ ಬಂದಿಲ್ಲ. ನಂತರ ಪರಿಶೀಲಿಸಿದಾಗ ಲಾಕರ್ ನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳು ಡಾ.ಶಿವಕುಮಾರ್ ಪಾಲಾಗಿತ್ತು.
ತನ್ನ ಚಿನ್ನಾಭರಣ ಬೆಳ್ಳಿ ಹಾಗೂ ನಗದು ಹಣವನ್ನ ಹಿಂದಿರುಗಿಸುವಂತೆ ಕೇಳಿದಾಗ ಡಾ.ಶಿವಕುಮಾರ್ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಿರುವ ಶ್ವೇತಾ ರವರು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ…
ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…
ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…
ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…