Categories: ಸಿನಿಮಾ

ವೇಗದ ಸಿನಿಮಾ ಸೆಟ್ ನಿರ್ಮಾಣ ಮಾಡಿ ಗಿನ್ನಿಸ್‌ಗೆ ಶ್ರಮಿಸಿದ ಕ್ಷಣ ಹಂಚಿಕೊಂಡ “ದೇವರ ಆಟ ಬಲ್ಲವಾರು” ಚಿತ್ರತಂಡ

ಕನ್ನಡ ಸಿನಿರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಅದೇ ಸಾಲಿನಲ್ಲಿ “ದೇವರ ಆಟ ಬಲ್ಲವರಾರು ” ಸಿನಿಮಾ ನಿಲ್ಲುವಂತೆ ಭರವಸೆ ಮೂಡಿಸಿದೆ.

ಜನಾರ್ದನ್ ಪಿ ಜಾನಿ ನಿರ್ದೇಶಿಸಿ, ನಿರ್ಮಾಣ ಮಾಡಿತ್ತಿದ್ದು, ಹನುಮಂತ್‌ ರಾಜು, ಲತಾ ರಾಗ, ಆರ್ ಹೆಚ್ ಎಂಟರ್ಪ್ರೈಸಸ್ ಮತ್ತು ಪ್ರಿಸ್ವಾಸ್ ಸ್ಟುಡಿಯೋಸ್ ಬ್ಯಾನರ್ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿರುವ, ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೆ ಹೊಸ ದಾಖಲೆಯನ್ನು ಬರೆಯಲು ಸಜ್ಜಾಗಿದೆ.

ಮೊದಲ ಹಂತದ ಗಿನ್ನಿಸ್ ದಾಖಲಿಸಿ. ಕೇವಲ 22 ಗಂಟೆ 24 ನಿಮಿಷ 58 ಸೆಕೆಂಡ್‌ಗಳಲ್ಲಿ ನಿರ್ಮಾಣ ಮಾಡಿ ಅಚ್ಚರಿ ಮೂಡಿಸಿತ್ತು. ಅದರ ಕುರಿತಾದಂತೆ ಮೇಕಿಂಗ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದೆ. ವೇಗದ ಸೆಟ್ ನಿರ್ಮಾಣದ ಆ ಪರಿಶ್ರಮದ ಕ್ಷಣ ಹಂಚಿಕೊಳ್ಳಲು ಮಡಿಕೇರಿಯಲ್ಲೇ ಕಂಪ್ಲೇಟ್ ಚಿತ್ರೀಕರಣದ ಸ್ಥಳದಲ್ಲೇ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು.

ಈ ವೇಳೆ ಮಾತನಾಡಿದ ನಿರ್ದೇಶಕ ಜನಾರ್ಧನ್ ಪಿ ಜಾನಿ ಸೆಟ್ ನಿರ್ಮಾಣಕ್ಕಾಗಿ ಆರು ತಿಂಗಳ ಪರಿಶ್ರಮ ಇದೆ. ಪ್ರತಿಯೊಂದು ಪ್ಲಾನ್ ಮಾಡಿ ಎಕ್ಸಿಕ್ಯೂಟ್ ಮಾಡಲಾಯಿತು.

ಈ ವೇಗದ ಸೆಟ್ ನಿರ್ಮಾಣಕ್ಕೆ ನನಗೆ ಸಾತ್ ಕೊಟ್ಟಿದ್ದು ಆರ್ಟ್ ಡೈರೆಕ್ಟರ್ ಬಾಲ ಸರ್ ಜಗತ್ತಿನಲ್ಲಿ ಯಾರು ಮಾಡಲಾಗದ ಒಂದು ಪ್ರಯೋಗಾತ್ಮಕ ಕನ್ನಡದಲ್ಲಿ ಆಗ್ಬೇಕು ಅನ್ನೋ ಉದ್ದೇಶ ಇಟ್ಕೊಂಡು ಎರಡು ಹಂತದ ಗಿನ್ನಿಸ್ ಯೋಚನೆಯನ್ನು ಹೊತ್ತು ಮೊದಲ ಹಂತದ ಗಿನ್ನಿಸ್ ಗಾಗಿ ವೇಗದ ಸೆಟ್ ನಿರ್ಮಾಣ ಮಾಡಿ ಮೊದಲ ಹಂತದ ಜಯ ನಮಗೆ ಗಳಿಸಿದೆ. ಕನ್ನಡಿಗರು ಮತ್ತು ಮಾಧ್ಯಮ ಮಿತ್ರರ ಸಹಕಾರ ನಮಗೆ ಅತಿ ಮುಖ್ಯ ಎರಡನೇ ಹಂತದ ಗಿನ್ನಿಸ್ ಸಾಹಸಕ್ಕೆ ಕೈ ಹಾಕಿದ್ದೇವೆ. 30 ದಿನಗಳಲ್ಲಿ ಚಿತ್ರೀಕರಣ ಮುಗಿಸಿ ತೆರೆ ಮೇಲೆ ತರುವ ಈ ಸಾಹಸಕ್ಕೆ ಸಕಲ ಸಿದ್ಧತೆಯೊಂದಿಗೆ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ ಎಂದರು.

ಇದೆ ವೇಳೆಯಲ್ಲಿ ನಾಯಕನಟ ಅರ್ಜುನ್ ರಮೇಶ್ ಮಾತನಾಡಿ ಬಿಗ್ ಬಾಸ್ ಮುಗಿದ ಬಳಿಕ ಕಳೆದ ಒಂದುವರೆ ವರ್ಷದಿಂದಲೂ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿತ್ತು, ಕಳೆದ ಆರು ತಿಂಗಳಿನಿಂದ ಸಿನಿಮಾದ ತಯಾರಿಯಲ್ಲಿದ್ದೇವೆ ಸಿನಿಮಾ ಸ್ಕ್ರಿಪ್ಟ್ ನನಗೆ ತುಂಬಾ ಇಷ್ಟ ಆಗಿ ಅದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಈ ಸಿನಿಮಾಕ್ಕಾಗಿ 50 ದಿನಗಳಲ್ಲಿ 14 ಕೆಜಿ ತೂಕ ಇಳಿಸಿಕೊಂಡಿದ್ದೇನೆ.

ಕನ್ನಡ ಸಿನಿಮಾ ರಂಗದಲ್ಲೇ ದೇವರ ಆಟ ಬಲ್ಲವರಾರು ಸಿನಿಮಾ ಉತ್ತಮ ಸಿನಿಮಾಗಳ ಸಾಲಿನಲ್ಲಿ ನಿಂತುಕೊಳ್ಳಲಿದೆ. ಮೊದಲ ಹಂತದ ಗಿನ್ನಿಸ್ ಗಳಿಸಿ ಈಗ ಎರಡನೇ ಹಂತಕ್ಕೆ ಕಾಲಿಟ್ಟಿದ್ದೇವೆ. 30 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆ ಮೇಲೆ ತರುವ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇವೆ.

ದಿನದ 24 ಗಂಟೆಯೂ ಚಿತ್ರೀಕರಣ ನಡೆಯಲಿದೆ ಚಿತ್ರೀಕರಣ ಜಾಗದಲ್ಲಿ ಸ್ಟುಡಿಯೋ ಸೆಟ್ ಅಪ್ ಎಡಿಟಿಂಗ್ ಸೆನ್ಸರ್ ಎಲ್ಲವೂ ಚಿತ್ರೀಕರಣ ಜಾಗದಲ್ಲಿಯೇ ಯೋಜನಾಬದ್ಧವಾಗಿ ವ್ಯವಸ್ಥೆ ಮಾಡಿಕೊಂಡಿದ್ದೇವೆ‌. ಸಿನಿಮಾದ ಎಲ್ಲ ಪ್ರಕ್ರಿಯೆಯು ಮಡಿಕೇರಿಯಲ್ಲಿ ನಡೆಯಲಿದ್ದು ಎಲ್ಲಾ ಪ್ರಕ್ರಿಯೆ ಇಲ್ಲಿಯೇ ಮುಗಿಸಿ ತೆರೆ ಮೇಲೆ ತರುವ ಎಲ್ಲಾ ಯೋಜನೆಯನ್ನು ಹಾಕಿಕೊಂಡಿದ್ದೇವೆ‌.

ಅದರಂತೆಯೇ ಪ್ರಕ್ರಿಯೆ ನಡೆಯುತ್ತಿದೆ ಈ ಚಿತ್ರದಲ್ಲಿ ನಾನು ಸೂರಿ ಅನ್ನೋ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಸೂರಿ ಅನ್ನೋ ಪಾತ್ರದ ಮೂಲಕ ಈ ಅರ್ಜುನ್ ರಮೇಶ್ ಎಲ್ಲರ ಮನದಲ್ಲಿ ಉಳಿಯುವ ಉತ್ತಮ ಕ್ಯಾರೆಕ್ಟರ್ ನನಗೆ ಕೊಟ್ಟಿದ್ದಾರೆ. ಇದೊಂದು 1975ರ ಕಾಲಘಟ್ಟದ ಸಿನಿಮಾ. ನನ್ನ ಮತ್ತು ಸಿಂಧು ಲೋಕನಾಥ್ ನಡುವೆ ಒಂದು ಅದ್ಭುತ ಫೈಟ್ ಸೀನ್ ಇದೆ. ನೋಡುಗರನ್ನ ರೋಮಾಂಚನಗೊಳಿಸುವುದಂತು ಪಕ್ಕ ಎಂದರು.

ಪತ್ರಿಕಾಗೋಷ್ಠಿ ವೇಳೆ ನಿರ್ದೇಶಕ ಜನಾರ್ಧನ್ ಪಿ ಜಾನಿ ನಾಯಕ ನಟ ಅರ್ಜುನ್ ರಮೇಶ್ ನಿರ್ಮಾಪಕ ಆರ್ ಹೆಚ್ ಎಂಟರ್ಪ್ರೈಸಸ್ ಹನುಮಂತ್ ರಾಜು, ಆರ್ಟ್ ಡೈರೆಕ್ಟರ್ ಬಾಲ ಚಂದಿರ್ ಭಾಗಿಯಾಗಿದ್ದರು.

ಈ ಸಿನಿಮಾದಲ್ಲಿ ನಾಯಕನಟಿಯಾಗಿ ಸಿಂಧು ಲೋಕನಾಥ್ ಅಭಿನಯಿಸುತ್ತಿದ್ದು ನಾಗಾರ್ಜುನ, ಸಂಪತ್ ರಾಮ್, ವರ್ಷ ವಿಶ್ವನಾಥ್, ಮತ್ತಿತರರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಅತಿ ದೊಡ್ಡ ತಾರಾ ಬಳಗವನ್ನೇ ಹೊಂದಿದೆ.

ಗಿನ್ನಿಸ್ ತಂಡ ಚಿತ್ರೀಕರಣ ಜಾಗದಲ್ಲಿ ವಾಸ್ತವ್ಯ ಹೂಡಿದ್ದು ಚಿತ್ರೀಕರಣದ ಎಲ್ಲಾ ಪ್ರಕ್ರಿಯೆಯನ್ನು ಗಮನಿಸುತ್ತಿದೆ ಮತ್ತು ಚಿತ್ರೀಕರಣದ ಆರಂಭದಿಂದ ಅಂತ್ಯದವರೆಗೂ ಸಿಸಿಟಿವಿಯಲ್ಲಿ ದೃಶ್ಯಾವಳಿಗಳನ್ನ ದಾಖಲಿಸಿಕೊಳ್ಳುತ್ತಿದೆ. ಒಟ್ಟಿನಲ್ಲಿ ಅಂದುಕೊಂಡಂತೆ ಆದರೆ 30 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆ ಮೇಲೆತ್ತಿರುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

Ramesh Babu

Journalist

Recent Posts

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

2 hours ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

10 hours ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

10 hours ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

1 day ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

1 day ago

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಿರುಸು: 15,721 ಮೃತರ ಹೆಸರು ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ…

2 days ago