ವೃದ್ಧನ ತಲೆ ಕಡಿದು ಕಸಕ್ಕೆ ಎಸೆದ ದುರುಳರು

ಚಿಂತಾಮಣಿ:ತಲೆ ಕಡಿದು ಕಸಕ್ಕೆ ಎಸಿದಿರುವ ಘಟನೆ ಚಿಂತಾಮಣಿ ನಗರ ಠಾಣಾ ವ್ಯಾಪ್ತಿಯ ಎನ್ ಆರ್ ಬಡವಣೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಯಾಜ್ಞವಲ್ಕ್ಯ ದೇವಸ್ಥಾನದ ಬಳಿ ರಸ್ತೆಯ ಪಕ್ಕದಲ್ಲಿ ಕಸ ಹಾಕುವ ಜಾಗದಲ್ಲಿ ವ್ಯಕ್ತಿಯ ತಲೆ ಕಡಿದು ಭೀಕರ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

65 ವರ್ಷದ ಮುನಿಯಪ್ಪ ಮೃತ ದುರ್ದೈವಿ ಎಂದು ಗೊತ್ತಾಗಿದೆ. ಆತ ಶ್ರೀನಿವಾಸಪುರ ತಾಲೂಕಿನ ಗೌಡನತಾತಗಡ್ಡ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.

ರುಂಡ ಮುಂಡ ಬೇರ್ಪಡಿಸಿ ಭೀಕರ ಕೊಲೆ ಮಾಡಿರುವ ಕಿರಾತಕರು ತಲೆಯನ್ನು ನಾಯಿಗಳು ಎಳೆದಾಡುವ ವೇಳೆ ಸಾರ್ವಜನಿಕರು ನೋಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದು.

ಸ್ಥಳಕ್ಕೆ ಡಿವೈಎಸ್ಪಿ ಮುರುಳಿಧರ್ ನಗರಠಾಣೆ ಇನ್ಸ್ಪೆಕ್ಟರ್ ವಿಜಿ ಕುಮಾರ,ಬೆರಳಚ್ಚು ತಜ್ಞರ ಭೇಟಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇನ್ನೂ ಮುನಿಯಪ್ಪಗೆ ಇಬ್ಬರು ಹೆಂಡತಿಯರಿದ್ದು ಕಳೆದ ರಾತ್ರಿ ಜಗಳವಾಗಿ ಅವರೇ ಕೊಲೆ ಮಾಡಿರಬಹುದು ಎಂದು ಅವರ ಪುತ್ರ ಮಾಧ್ಯಮದವರಿಗೆ ಹೇಳಿಕೆ ಕೊಟ್ಟಿದ್ದಾನೆ.

Leave a Reply

Your email address will not be published. Required fields are marked *