ವಿಧಾನ‌ಸಭಾ ಚುನಾವಣೆ ಹಿನ್ನೆಲೆ: ಅರೆಸೇನಾ ಭದ್ರತಾ ಪಡೆ ಪಥಸಂಚಲನ: ಜಿಲ್ಲಾಧಿಕಾರಿ ಆರ್.ಲತಾ ಭಾಗಿ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ಇಂದು 178-ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಅರೆಸೇನಾ ಭದ್ರತಾ ಪಡೆಯಿಂದ ಹೊಸಕೋಟೆ ಟೌನಿನಲ್ಲಿ ನಡೆದ ಪಥ ಸಂಚಲನ ನಡೆಸಿದರು. ಈ ಪಥಸಂಚನದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಪಾಲ್ಗೊಂಡು ಭದ್ರತಾ ಪಡೆಯೊಂದಿಗೆ ಹೆಜ್ಜೆ ಹಾಕಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಸೇರಿದಂತೆ ಅರೆಸೇನಾ ಭದ್ರತಾ ಪಡೆಯ ಎರಡು ತುಕಡಿಗಳಿಂದ ಸುಮಾರು 250ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹೊಸಕೋಟೆ ನಗರದಲ್ಲಿ ಆರು ಕಿಲೋ ಮೀಟರ್‌ವರೆಗೆ ಪಥ ಸಂಚಲನ ನಡೆಸಿ ನಿರ್ಭೀತ ಹಾಗೂ ಶಾಂತಿಯುತ ಮತದಾನಕ್ಕೆ ಕರೆಕೊಟ್ಟರು.

Leave a Reply

Your email address will not be published. Required fields are marked *