ನಿನ್ನೆ ನಡೆದ ಸಣ್ಣ ರಸ್ತೆ ಜಗಳವೊಂದನ್ನು ಭಾಷಾ ಸಂಘರ್ಷವೆಂಬಂತೆ ಬಿಂಬಿಸುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಯತ್ನ ನಿಜಕ್ಕೂ ನಾಚಿಕೆಗೇಡು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
ಕನ್ನಡ ಭಾಷೆ ಹಾಗೂ ಕನ್ನಡಿಗರ ಮೇಲೆ ಈ ರಾಷ್ಟ್ರೀಯ ಮಾಧ್ಯಮಗಳಿಗ್ಯಾಕೆ ಇಷ್ಟೊಂದು ದ್ವೇಷ? ಘಟನೆಯ ಪೂರ್ವಾಪರ ತಿಳಿಯದೇ ಅತಿರೇಕದ ವರದಿ ಮಾಡಿದ್ದು ಯಾವ ಸೀಮೆ ವೃತ್ತಿ ಧರ್ಮ? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಹಲ್ಲೆಗೊಳಗಾದ ಕನ್ನಡಿಗ ವಿಕಾಸ್ ಕುಮಾರ್ ಒಬ್ಬ ಸಾಮಾನ್ಯ ಗಿಗ್ ಕಾರ್ಮಿಕ. ಜಗಳಕ್ಕೆ ಕಾರಣ ಏನೇ ಇರಲಿ, ಬಡಪಾಯಿ ಗಿಗ್ ಕಾರ್ಮಿಕನ ಮೇಲೆ ಶಿಲಾದಿತ್ಯ ಬೋಸ್ ಎರಗಿ ದಾಳಿ ಮಾಡಿದ ರೀತಿ ಮಾತ್ರ ಅಕ್ಷಮ್ಯ ಎಂದು ಹೇಳಿದ್ದಾರೆ.
ಕನ್ನಡಿಗ ಗಿಗ್ ಕಾರ್ಮಿಕ ವಿಕಾಸ್ ಕುಮಾರ್ ಗೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. ತಪ್ಪಿತಸ್ಥ ಶಿಲಾದಿತ್ಯ ಬೋಸ್ ಹಾಗೂ ಅವರ ಪತ್ನಿ ಎಂಥದ್ದೇ ಹುದ್ದೆಯಲ್ಲಿರಲಿ, ಸೂಕ್ತ ಕಾನೂನು ಕ್ರಮ ಜರುಗಿಸದೇ ಬಿಡುವುದಿಲ್ಲ ಎಂದಿದ್ದಾರೆ.
ಹಾಗೆಯೇ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಸಗಿದ ಇಂತಹ ಕೃತ್ಯದಿಂದ ನಮ್ಮೆಲ್ಲರ ಹೆಮ್ಮೆಯ ಭಾರತೀಯ ವಾಯುಪಡೆಯ ಘನತೆ ಕುಗ್ಗದಿರಲಿ. ಪೂರ್ವಾಪರ ತಿಳಿದು ವರದಿ ಮಾಡುವ ವಿವೇಚನೆ ರಾಷ್ಟ್ರೀಯ ಮಾಧ್ಯಮಗಳಿಗೂ ಬರಲಿ ಎಂದು ತಿಳಿಸಿದ್ದಾರೆ.
ಹೊಂಗೆ ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ತಲೆ ಬುರುಡೆ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್…
ಸಿದ್ದಾಪುರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿನ್ ಮಠ ಕ್ರಾಸ್ ಬಳಿ ಜಲ್ಲಿ ತುಂಬಿದ ಲಾರಿಯೊಂದು ರಸ್ತೆಗೆ ಉರುಳಿದ ಪರಿಣಾಮ,…
ದೇವರಹಿಪ್ಪರಗಿ: ಪತ್ನಿಯನ್ನು ತಾನೇ ಕೊಂ*ದು ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ…
ಬೈಕ್ ನಲ್ಲಿ ಪತ್ನಿಯೊಂದಿಗೆ ಸಂಬಂಧಿಕರ ಮನೆಯ ಸಾವಿಗೆ ತೆರಳುತ್ತಿದ್ದ ಬೈಕ್ ಸವಾರನೊಬ್ಬ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೋಲೀಸರನ್ನು ಕಂಡು…
ಸ್ವಾಮಿಯೇ........ ಶರಣಂ ಅಯ್ಯಪ್ಪ......... ಮಹಿಳೆಯರಿಗೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆ ? ಬೇಡವೇ ? ಎಂಬ ಬಗ್ಗೆ…
ಕರ್ತವ್ಯದ ವೇಳೆ ಮಡಿದ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬಸ್ಥರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್ ತಲಾ ಒಂದು ಕೋಟಿ ರೂ.…