ವಾಲ್ಮೀಕಿ ಸಮಾಜದ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳದ ಆರೋಪ

ಆಕೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆ ಆಗಿದ್ದಳು. ಗಂಡನ ಜೊತೆಗೆ ನೆಮ್ಮದಿಯಾಗಿ ಇರಬೇಕು ಎಂದು ಒಂದು ಸೈಟ್ ಕೊಂಡುಕೊಳ್ಳಲು‌ ಮುಂದಾಗಿದ್ದಾಳೆ. ಈ ವೇಳೆ ಸೈಟ್ ಕೊಳ್ಳಲು ಓರ್ವ ಸ್ವಾಮೀಜಿಯನ್ನ ಮಧ್ಯಸ್ಥಿಕೆಗೆ ಕರೆದಿದ್ದಾಳೆ. ಇವರಿಬ್ಬರ ಮಧ್ಯೆ ಹಣದ ವಿಚಾರಕ್ಕೆ ಮನಃಸ್ತಾಪ ಉಂಟಾಗಿ ಈಗ ಸ್ವಾಮೀಜಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ ಓದಿ……………

ಹೌದು ಹೀಗೆ ದಾಖಲೆಗಳನ್ನ ತೋರಿಸುತ್ತಿರುವ ಸ್ವಾಮೀಜಿ, ನಮ್ಮ ಸ್ವಾಮೀಜಿ ಅಂಥವರಲ್ಲ ಎಂದು ಆಕ್ರೋಶ ಹೊರ ಹಾಕುತ್ತಿರುವ ಭಕ್ತಾಧಿಗಳು, ನನ್ನ ಹೆಂಡತಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡುತ್ತಿರುವ ಗಂಡ ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಬಳಿ.

ಹೌದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು, ತನಗೆ ಲೈಗಿಂಕ‌ ಕಿರುಕುಳ‌ ನೀಡುತ್ತಿದ್ದಾರೆ ಎಂದು ಸೆಲ್ಫಿ ವಿಡಿಯೋ ಮಾಡಿ ಆರೋಪ ಮಾಡಿದ್ದಾಳೆ‌. ಐದು ಸಾವಿರ ಹಣ ಕೇಳಿದರೆ ರೂಂ ಗೆ ಬಾ, ಆಮೇಲೆ ಹಣ ಕೊಡುತ್ತೇನೆ ಎಂದು ಸ್ವಾಮೀಜಿ ಕರೆಯುತ್ತಿದ್ದಾನೆ, ಪ್ರತಿನಿತ್ಯ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಾನೆ. ಮಹಿಳೆ ಒಂಟಿಯಾಗಿದ್ದಾಗ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದಾನೆ ಹಾಗಾಗಿ ನನಗೆ ಆದ ರೀತಿ ಯಾವ ಮಹಿಳೆಗೂ ಆಗುವುದು ಬೇಡ, ನನಗೆ ನ್ಯಾಯ ಬೇಕು ಎಂದು ಮಹಿಳೆ ಆರೋಪಿಸಿ ವಿಡಿಯೋ ಹರಿ ಬಿಟ್ಟಿದ್ದಾಳೆ.

ಇನ್ನೂ ಈ ರೀತಿ ಗಂಭೀರ ಆರೋಪ ಎದುರಿಸುತ್ತಿರುವ ಸ್ವಾಮೀಜಿಯ ಹೆಸರು ಬ್ರಹ್ಮಾನಂದ ಗುರೂಜಿ ಅಂತ. ಈ ವಿಚಾರವಾಗಿ ಈತ ಹೇಳುವ ಮಾತೇ ಬೇರೆ. ಮಹಿಳೆ ಗಂಡ ನನಗೆ ಬಹಳ ಪರಿಚಯ. ಹಾಗಾಗಿ ಅವರು ನಮ್ಮ ಬಳಿ ಬಂದು ಒಂದು ಸೈಟ್ ಕೊಡಿಸುವುದಾಗಿ ಕೇಳಿಕೊಂಡರು. ಆಗ ನನಗೆ ಪರಿಚಯ ಇದ್ದ ಒಬ್ಬರ ಬಳಿ 11 ಲಕ್ಷಕ್ಕೆ ಸೈಟ್ ಕೊಡಿಸಿದ್ದ. ಅದು ಕೆಲವೇ ದಿನಗಳಲ್ಲಿ ಸೈಟ್ ಇ ಖಾತೆ ಮಾಡುವುದನ್ನ ಸರಕಾರ ನಿಲ್ಲಿಸಿತು. ಆಗ ಅವರ ಹಣವನ್ನ ವಾಪಸ್ ನೀಡಿದ್ದೇವೆ. ಈ ವೇಳೆ ಮಹಿಳೆ ನನ್ನ ಜೊತೆ ಸಲುಗೆಯಿಂದ ಮಾತ‌ನಾಡಲು ಮುಂದಾದಳು. ಆಗ ನಾನು ಅವರ ನಂಬರ್ ಬ್ಲಾಕ್ ಮಾಡಿದೆ. ನಂತರ ಕೂಡ ಬೇರೆ ಬೇರೆ ನಂಬರ್ ಗಳಿಂದ ನನಗೆ ಫೋನ್ ಮತ್ತು ಮೆಸೇಜ್ ಮಾಡಿದರು. ಆದರೆ ಈಗ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರು ಮತ್ತು ನಮ್ಮ‌ಊರಿನಲ್ಲಿ ನನಗೆ ಆಗದವರು ನಮ್ಮ ವಿರುದ್ಧ ಷಡ್ಯಂತರ ಮಾಡಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ.ಇನ್ನೂ ಮಹಿಳೆಯ ಗಂಡ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಇತ್ತ ಸ್ವಾಮೀಜಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.

ಒಟ್ಟಾರೆ ಸೈಟ್ ನ ವಿಚಾರಕ್ಕೆ ಆರಂಭವಾದ ಮನಸ್ಥಾಪ ಈಗ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ವರೆಗೆ ತಲುಪಿದೆ. ಈಗಾಗಲೇ ದೂರು ಪ್ರತಿ ದೂರು ದಾಖಲಾಗಿದ್ದು ಪೊಲೀಸ್ ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಬೇಕಿದೆ.

Ramesh Babu

Journalist

Recent Posts

ಅರಣ್ಯದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಿ ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್ ಅಮರೇಶ್ ಗೌಡ

ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.…

1 hour ago

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ‌ ವಿಚಾರ: ಬೆಲೆ ಏರಿಕೆ ಹಿಂಪಡೆಯಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಒತ್ತಾಯ

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದನ್ನು ರಾಜ್ಯ ಸರ್ಕಾರ ಖಂಡಿಸಲಿದ್ದು, ಬೆಲೆ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸುತ್ತೇವೆ ಎಂದು ಸಿಎಂ…

2 hours ago

ಬೆಂ ಗ್ರಾ ಜಿಲ್ಲೆಯಲ್ಲಿ 24 ಬಾಲ್ಯ ವಿವಾಹ ತಡೆ: ಜಿಲ್ಲಾಧಿಕಾರಿ ಡಾ. ಅನುರಾಧ

ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿದ್ದು, ಕಳೆದ ಆರ್ಥಿಕ ವರ್ಷ ಜಿಲ್ಲೆಯಲ್ಲಿ 24 ಬಾಲ್ಯ ವಿವಾಹ ಪ್ರಕರಣಗಳನ್ನು…

3 hours ago

ಸಾರ್ವಜನಿಕ ಆಡಳಿತದ ದಕ್ಷತೆ ಹೆಚ್ಚಿಸಲು ಕೆಜಿಐಎಸ್-2.0 ಸಹಕಾರಿ- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧಾ

ಸರ್ಕಾರಿ ಸಂಸ್ಥೆಗಳು ಹಾಗೂ ಸರ್ಕಾರಿ ಕೆಲಸಗಳ ಸೇವೆಯಲ್ಲಿ ಕೆ-ಜಿಐಎಸ್ 2.0 ಪೋರ್ಟಲ್ ಬಳಕೆಯಿಂದ ಆಡಳಿತದ ದಕ್ಷತೆ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ…

5 hours ago

ಗೃಹರಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ 349 ಗೃಹರಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳು ಮೇ…

10 hours ago

ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ….

ನೀಟ್ ಪ್ರಶ್ನೆ ಪತ್ರಿಕೆ ಬಯಲು.... ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ. ನನಗೆ ಇದೇನು ದೊಡ್ಡ ಆಶ್ಚರ್ಯವಲ್ಲ. ಇಡೀ ಸಮಾಜದ ನಡೆಯುತ್ತಿರುವುದೇ…

13 hours ago