ಆಕೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆ ಆಗಿದ್ದಳು. ಗಂಡನ ಜೊತೆಗೆ ನೆಮ್ಮದಿಯಾಗಿ ಇರಬೇಕು ಎಂದು ಒಂದು ಸೈಟ್ ಕೊಂಡುಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಸೈಟ್ ಕೊಳ್ಳಲು ಓರ್ವ ಸ್ವಾಮೀಜಿಯನ್ನ ಮಧ್ಯಸ್ಥಿಕೆಗೆ ಕರೆದಿದ್ದಾಳೆ. ಇವರಿಬ್ಬರ ಮಧ್ಯೆ ಹಣದ ವಿಚಾರಕ್ಕೆ ಮನಃಸ್ತಾಪ ಉಂಟಾಗಿ ಈಗ ಸ್ವಾಮೀಜಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ ಓದಿ……………
ಹೌದು ಹೀಗೆ ದಾಖಲೆಗಳನ್ನ ತೋರಿಸುತ್ತಿರುವ ಸ್ವಾಮೀಜಿ, ನಮ್ಮ ಸ್ವಾಮೀಜಿ ಅಂಥವರಲ್ಲ ಎಂದು ಆಕ್ರೋಶ ಹೊರ ಹಾಕುತ್ತಿರುವ ಭಕ್ತಾಧಿಗಳು, ನನ್ನ ಹೆಂಡತಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡುತ್ತಿರುವ ಗಂಡ ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಬಳಿ.
ಹೌದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು, ತನಗೆ ಲೈಗಿಂಕ ಕಿರುಕುಳ ನೀಡುತ್ತಿದ್ದಾರೆ ಎಂದು ಸೆಲ್ಫಿ ವಿಡಿಯೋ ಮಾಡಿ ಆರೋಪ ಮಾಡಿದ್ದಾಳೆ. ಐದು ಸಾವಿರ ಹಣ ಕೇಳಿದರೆ ರೂಂ ಗೆ ಬಾ, ಆಮೇಲೆ ಹಣ ಕೊಡುತ್ತೇನೆ ಎಂದು ಸ್ವಾಮೀಜಿ ಕರೆಯುತ್ತಿದ್ದಾನೆ, ಪ್ರತಿನಿತ್ಯ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಾನೆ. ಮಹಿಳೆ ಒಂಟಿಯಾಗಿದ್ದಾಗ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದಾನೆ ಹಾಗಾಗಿ ನನಗೆ ಆದ ರೀತಿ ಯಾವ ಮಹಿಳೆಗೂ ಆಗುವುದು ಬೇಡ, ನನಗೆ ನ್ಯಾಯ ಬೇಕು ಎಂದು ಮಹಿಳೆ ಆರೋಪಿಸಿ ವಿಡಿಯೋ ಹರಿ ಬಿಟ್ಟಿದ್ದಾಳೆ.
ಇನ್ನೂ ಈ ರೀತಿ ಗಂಭೀರ ಆರೋಪ ಎದುರಿಸುತ್ತಿರುವ ಸ್ವಾಮೀಜಿಯ ಹೆಸರು ಬ್ರಹ್ಮಾನಂದ ಗುರೂಜಿ ಅಂತ. ಈ ವಿಚಾರವಾಗಿ ಈತ ಹೇಳುವ ಮಾತೇ ಬೇರೆ. ಮಹಿಳೆ ಗಂಡ ನನಗೆ ಬಹಳ ಪರಿಚಯ. ಹಾಗಾಗಿ ಅವರು ನಮ್ಮ ಬಳಿ ಬಂದು ಒಂದು ಸೈಟ್ ಕೊಡಿಸುವುದಾಗಿ ಕೇಳಿಕೊಂಡರು. ಆಗ ನನಗೆ ಪರಿಚಯ ಇದ್ದ ಒಬ್ಬರ ಬಳಿ 11 ಲಕ್ಷಕ್ಕೆ ಸೈಟ್ ಕೊಡಿಸಿದ್ದ. ಅದು ಕೆಲವೇ ದಿನಗಳಲ್ಲಿ ಸೈಟ್ ಇ ಖಾತೆ ಮಾಡುವುದನ್ನ ಸರಕಾರ ನಿಲ್ಲಿಸಿತು. ಆಗ ಅವರ ಹಣವನ್ನ ವಾಪಸ್ ನೀಡಿದ್ದೇವೆ. ಈ ವೇಳೆ ಮಹಿಳೆ ನನ್ನ ಜೊತೆ ಸಲುಗೆಯಿಂದ ಮಾತನಾಡಲು ಮುಂದಾದಳು. ಆಗ ನಾನು ಅವರ ನಂಬರ್ ಬ್ಲಾಕ್ ಮಾಡಿದೆ. ನಂತರ ಕೂಡ ಬೇರೆ ಬೇರೆ ನಂಬರ್ ಗಳಿಂದ ನನಗೆ ಫೋನ್ ಮತ್ತು ಮೆಸೇಜ್ ಮಾಡಿದರು. ಆದರೆ ಈಗ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರು ಮತ್ತು ನಮ್ಮಊರಿನಲ್ಲಿ ನನಗೆ ಆಗದವರು ನಮ್ಮ ವಿರುದ್ಧ ಷಡ್ಯಂತರ ಮಾಡಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ.ಇನ್ನೂ ಮಹಿಳೆಯ ಗಂಡ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಇತ್ತ ಸ್ವಾಮೀಜಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
ಒಟ್ಟಾರೆ ಸೈಟ್ ನ ವಿಚಾರಕ್ಕೆ ಆರಂಭವಾದ ಮನಸ್ಥಾಪ ಈಗ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ವರೆಗೆ ತಲುಪಿದೆ. ಈಗಾಗಲೇ ದೂರು ಪ್ರತಿ ದೂರು ದಾಖಲಾಗಿದ್ದು ಪೊಲೀಸ್ ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಬೇಕಿದೆ.
ದೊಡ್ಡಬಳ್ಳಾಪುರ: ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದ ಗೂಡ್ಸ್ ವಾಹನವು ಅರಳುಮಲ್ಲಿಗೆ ಗ್ರಾಮದ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…
ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್, ಸಿಹಿ,…
ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…
ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಟುವಟಿಕೆಗಳು ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿವೆ. ಸಾಮಾನ್ಯಕ್ಕಿಂತ…