ಮೊಹಲಿ: ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆದ ಪಂದ್ಯ ಅತ್ಯಂತ ಪೈಪೋಟಿಯಿಂದ ಕೂಡಿದ್ದರೂ ಸಹ ಕಿಂಗ್ಸ್ ಇಲೆವೆನ್ ಪಂಜಾಬ್ ವರುಣನ ಕೃಪೆಯಿಂದ ಟೂರ್ನಿಯ ಮೊದಲ ಗೆಲುವು ಪಡೆದರು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣ ಎದುರಾಳಿಗಳನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು, ಇದರ ಲಾಭ ಪಡೆದ ಶಿಖರ್ ಧವನ್ ಪಡೆ ಉತ್ತಮ ಪ್ರದರ್ಶನ ನೀಡಿದರು.
ಆರಂಭಿಕ ಜೋಡಿ ಶಿಖರ್ ಧವನ್ (40) ಹಾಗೂ ಪ್ರಬಾ ಸಿಮ್ರಾನ್ (23) ರನ್ ಗಳಿಸಿ ಭದ್ರ ಬುನಾದಿ ಹಾಕಿದರು, ನಂತರ ಬಂದ ಭಾನುಕಾ ರಾಜಪಕ್ಷ (50) ಬಿರುಸಿನ ಬ್ಯಾಟಿಂಗ್ ನೆರವಿನಿಂದ ತಂಡದ ಮೊತ್ತ 191 ರನ್ ಗಳಿಸಿದರು, ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರನ್(26) ಹಾಗೂ ಜಿತೇಶ್ ಶರ್ಮಾ(21) ರನ್ ಕಲೆಹಾಕಿ ತಂಡಕ್ಕೆ ನೆರವಾದರು.
ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಮಂದಿಪ್ ಸಿಂಗ್ (2) ಗಳಿಸಿದ್ದಾಗ ವೇಗದ ಬೌಲರ್ ಅಶ೯ದೀಪ್ ಸಿಂಗ್ ಅವರಿಗೆ ವಿಕೆಟ್ ಒಪ್ಪಿಸಿದರು, ನಂತರ ಬಂದ ಅಂಕುಲ್ ರಾಯ್ (4) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು.
ನಂತರ ಜೊತೆಯಾದ ಗುಬಾ೯ಜ್(22) ಹಾಗೂ ವೆಂಕಟೇಶ್ ಅಯ್ಯರ್ (34) ಮತ್ತು ನಾಯಕ ನಿತೀಶ್ ರಾಣ (24) ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು, ನಂತರ ಬಂದ ಸ್ಟಾರ್ ಆಲ್ ರೌಂಡರ್ ರಸೇಲ್ ಭರ್ಜರಿ ಬ್ಯಾಟಿಂಗ್ (35) ರನ್ ಗಳಿಸಿ ಗೆಲುವಿನ ದಡ ಸೇರಿಸುವ ಸಮಯದಲ್ಲಿ ಸ್ಯಾಮ್ ಕರನ್ ಅವರಿಗೆ ವಿಕೆಟ್ ಒಪ್ಪಿಸಿದರು.
ಈ ಸಂದರ್ಭದಲ್ಲಿ ವರುಣನ ಆರ್ಭಟದಿಂದಾಗಿ ಪಂದ್ಯವನ್ನು ಮುಂದುವರಿಸಲು ಅಂಪೈರ್ ಗಳು ನಿರಾಕರಿಸಿದಾಗ ಡಕ್ವಥ್೯ ಲೂಯಿಸ್ ನಿಯಮದ ಪ್ರಕಾರ ಕಿಂಗ್ಸ್ ಇಲೆವೆನ್ ಪಂಜಾಬ್ 7 ರನ್ ಗೆಲುವು ಪಡೆದರು, ಪಂಜಾಬ್ ಪರವಾಗಿ ಅಶ೯ದೀಪ್ ಸಿಂಗ್ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.