ತೊಂಡೆಬಾವಿ ಮತ್ತು ಮಾಕಳಿ ದುರ್ಗ ರೈಲು ನಿಲ್ದಾಣಗಳ ಮಾರ್ಗ ಮಧ್ಯೆ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಯಸ್ಸು: ಸುಮಾರು 25 ರಿಂದ 30 ವರ್ಷ ವಯಸ್ಸು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತನ ಹೆಸರು ಮತ್ತು ವಾರಸುದಾರರು ಯಾರು ಪತ್ತೆ ಆಗಿರುವುದಿಲ್ಲ.
ಮೃತನ ಚಹರೆ:
ಮೃತರು ಸುಮಾರು 5.5ಅಡಿ ಎತ್ತರ, ಸಾಧಾರಣ ಗೋಧಿ ಮೈ ಬಣ್ಣ, ಕೋಲು ಮುಖ, ಗಿಡ್ಡನೆಯ ಮೂಗು, ತಲೆಯಲ್ಲಿ ಅರ್ಧ ಇಂಚು ಉದ್ದದ ಕಪ್ಪನೆಯ ತಲೆ ಕೂದಲು, ಸಣ್ಣನೆಯ ಗಡ್ಡ ಮೀಸೆ, ಸಾಧಾರಣ ಶರೀರವನ್ನು ಹೊಂದಿರುತ್ತಾರೆ.
ಶವದ ಮೈಮೇಲೆ ಕಡು ಆಕಾಶ ನೀಲಿ ತಿಳಿ ಕೆಂಪು ಬಣ್ಣದ ಉದ್ದ ಮತ್ತು ಅಡ್ಡನೆಯ ಗೆರೆಗಳಿರುವ ಚೌಕಳಿ ಶರ್ಟ್, ಬಿಳಿ ಬಣ್ಣದ ಉದ್ದನೆಯ ಗೆರೆಗಳಿರುವ ಶರ್ಟ್, ಕಂದು ಬಣ್ಣದ ಒಳಚಡ್ಡಿ, ಕಡು ಕಂದು ಬಣ್ಣದ ಬನಿಯನ್, ತಿಳಿಹಸಿರು ಬಣ್ಣದ ಬರ್ಮುಡಾ ನಿಕ್ಕರ್, ಸೊಂಟದಲ್ಲಿ ಎರಡು ಎಳೆ ಕೆಂಪನೆಯ ಉಡದಾರ ಇದ್ದು, ಅದರಲ್ಲಿ ಒಂದು ತಾಯತವಿರುತ್ತದೆ.
ಕೊರಳಲ್ಲಿ ಒಂದು ಎಳೆ ಕಪ್ಪನೆಯ ದಾರವಿದ್ದು, ಅದರಲ್ಲಿ ಒಂದು ತಾಯತವಿದ್ದು, ಗಾಜಿನ ಮಣಿಗಳ ರೀತಿಯಲ್ಲಿರುವ ಒಂದು ಸರ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಜಗದೀಶ್.ಆರ್ ಪಿ ಎಸ್ ಐ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ಬೆಂಗಳೂರು ಮೊಬೈಲ್ ಸಂಖ್ಯೆ 948080211 ಹಾಗೂ ಅಶ್ವತ್ಥ್. ಜಿ.ಎನ್ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಹೊರಉಪ ಠಾಣೆ Ph no. 9480802143 ಇವರುಗಳನ್ನು ಸಂಪರ್ಕಿಸಬೇಕಾಗಿ ಕೋರಿದೆ.
ದೊಡ್ಡಬಳ್ಳಾಪುರ: ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದ ಗೂಡ್ಸ್ ವಾಹನವು ಅರಳುಮಲ್ಲಿಗೆ ಗ್ರಾಮದ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…
ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್, ಸಿಹಿ,…
ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…
ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಟುವಟಿಕೆಗಳು ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿವೆ. ಸಾಮಾನ್ಯಕ್ಕಿಂತ…