ತೊಂಡೆಬಾವಿ ಮತ್ತು ಮಾಕಳಿ ದುರ್ಗ ರೈಲು ನಿಲ್ದಾಣಗಳ ಮಾರ್ಗ ಮಧ್ಯೆ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಯಸ್ಸು: ಸುಮಾರು 25 ರಿಂದ 30 ವರ್ಷ ವಯಸ್ಸು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತನ ಹೆಸರು ಮತ್ತು ವಾರಸುದಾರರು ಯಾರು ಪತ್ತೆ ಆಗಿರುವುದಿಲ್ಲ.
ಮೃತನ ಚಹರೆ:
ಮೃತರು ಸುಮಾರು 5.5ಅಡಿ ಎತ್ತರ, ಸಾಧಾರಣ ಗೋಧಿ ಮೈ ಬಣ್ಣ, ಕೋಲು ಮುಖ, ಗಿಡ್ಡನೆಯ ಮೂಗು, ತಲೆಯಲ್ಲಿ ಅರ್ಧ ಇಂಚು ಉದ್ದದ ಕಪ್ಪನೆಯ ತಲೆ ಕೂದಲು, ಸಣ್ಣನೆಯ ಗಡ್ಡ ಮೀಸೆ, ಸಾಧಾರಣ ಶರೀರವನ್ನು ಹೊಂದಿರುತ್ತಾರೆ.
ಶವದ ಮೈಮೇಲೆ ಕಡು ಆಕಾಶ ನೀಲಿ ತಿಳಿ ಕೆಂಪು ಬಣ್ಣದ ಉದ್ದ ಮತ್ತು ಅಡ್ಡನೆಯ ಗೆರೆಗಳಿರುವ ಚೌಕಳಿ ಶರ್ಟ್, ಬಿಳಿ ಬಣ್ಣದ ಉದ್ದನೆಯ ಗೆರೆಗಳಿರುವ ಶರ್ಟ್, ಕಂದು ಬಣ್ಣದ ಒಳಚಡ್ಡಿ, ಕಡು ಕಂದು ಬಣ್ಣದ ಬನಿಯನ್, ತಿಳಿಹಸಿರು ಬಣ್ಣದ ಬರ್ಮುಡಾ ನಿಕ್ಕರ್, ಸೊಂಟದಲ್ಲಿ ಎರಡು ಎಳೆ ಕೆಂಪನೆಯ ಉಡದಾರ ಇದ್ದು, ಅದರಲ್ಲಿ ಒಂದು ತಾಯತವಿರುತ್ತದೆ.
ಕೊರಳಲ್ಲಿ ಒಂದು ಎಳೆ ಕಪ್ಪನೆಯ ದಾರವಿದ್ದು, ಅದರಲ್ಲಿ ಒಂದು ತಾಯತವಿದ್ದು, ಗಾಜಿನ ಮಣಿಗಳ ರೀತಿಯಲ್ಲಿರುವ ಒಂದು ಸರ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಜಗದೀಶ್.ಆರ್ ಪಿ ಎಸ್ ಐ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ಬೆಂಗಳೂರು ಮೊಬೈಲ್ ಸಂಖ್ಯೆ 948080211 ಹಾಗೂ ಅಶ್ವತ್ಥ್. ಜಿ.ಎನ್ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಹೊರಉಪ ಠಾಣೆ Ph no. 9480802143 ಇವರುಗಳನ್ನು ಸಂಪರ್ಕಿಸಬೇಕಾಗಿ ಕೋರಿದೆ.
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…
ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…
ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…
ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…