ರಾತ್ರಿ ಅಂಗಡಿ ಮುಚ್ಚುವ ವೇಳೆ ಯುವಕನಿಗೆ ವಿದ್ಯುತ್‌ ಸ್ಪರ್ಶ: ಯುವಕ ಧಾರುಣ ಸಾವು

ದೊಡ್ಡಬಳ್ಳಾಪುರ: ಅ.9ರ ಗುರುವಾರ ರಾತ್ರಿ 11ಗಂಟೆ ಸುಮಾರಿನಲ್ಲಿ ಅಂಗಡಿ ಮುಚ್ಚುವ ವೇಳೆ ಯುವಕನಿಗೆ ವಿದ್ಯುತ್‌ ಸ್ಪರ್ಶವಾಗಿದ್ದು, ಈ ವೇಳೆ ಯುವಕನಿಗೆ ಸುಟ್ಟಗಾಯಗಳಾಗಿದ್ದವು.‌ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಲಕ್ಷ್ಮೀ ಟಾಕಿಸ್ ರಸ್ತೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಶ್ರೀನಗರ ನಿವಾಸಿ ಆರ್ಕೆಶ್ ಕುಮಾರ್ (ಕುಮಾರ್ ಗೋಬಿ 27 ವರ್ಷ) ಎಂದು ಗುರುತಿಸಲಾಗಿದೆ.

ಲಕ್ಷ್ಮೀ ಟಾಕಿಸ್ ರಸ್ತೆಯಲ್ಲಿ ಹಲವು ವರ್ಷಗಳಿಂದ ಗೋಬಿ ಮಾರಾಟ ಮಾಡುತ್ತಿದ್ದ ಯುವಕ ಗುರುವಾರ ರಾತ್ರಿ 11 ರ ಸುಮಾರಿಗೆ ಅಂಗಡಿಯ ಕಬ್ಬಿಣದ ಶೆಟರ್ ಕೆಳಕ್ಕೆ ಎಳೆಯುವ ವೇಳೆ ತುಂಟಾಗಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿದೆ. ಈ ವೇಳೆ ಯುವಕ ಗಂಭೀರವಾಗಿ ಗಾಯಗೊಂಡಿದ್ದನು. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ನಗರ ಪೊಲೀಸ್ ಠಾಣಾ ಇನ್ಸೆಕ್ಟ‌ರ್ ಅಮರೇಶ್‌ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ನಗರಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!