ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ 34 ನಿರ್ದೇಶಕ ಸ್ಥಾನಗ ಪೈಕಿ 27 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 7 ಸ್ಥಾನಗಳಿಗೆ ಸೋಮವಾರ ಚುನಾವಣ ಅಧಿಕಾರಿಗಳಾದ ಆರ್.ಸುರೇಶ್, ಅನಂತಕುಮಾರ್ ಅವರ ನೇತೃತ್ವದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಯಿತು.
ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಚುನಾವಣೆ ನಡೆದು, 4 ಗಂಟೆ ನಂತರ ಮತಗಳ ಎಣಿಕೆ ನಡೆಯಿತು.ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದ 4 ಸ್ಥಾನಗಳಿಗೆ ಸ್ಪರ್ಧಿಸಿದ್ದವರಲ್ಲಿ ಎಂ.ಎಸ್.ರಾಜಶೇಖರ್, ವಿ.ಧನಂಜಯ,ಎಂ.ಆರ್.ಕೇಶವಮೂರ್ತಿ,ಡಿ.ಶ್ರೀಧರ್ ಆಯ್ಕೆಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಒಂದು ಸ್ಥಾನಕ್ಕೆ ನಡೆದ ಮತದಾನದಲ್ಲಿ ಸಿ.ಎಚ್.ರಾಮಚಂದ್ರಯ್ಯ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ವಿಭಾಗದಿಂದ ಎನ್.ಮಹೇಶ್, ಭೂ ಮಾಪನ ಇಲಾಖೆಯಿಂದ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರು:
ಕೆ.ಎಂ.ಹರೀಶ್ ಕುಮಾರ್ (ಕೃಷಿ ಇಲಾಖೆ), ವಿ.ಸಿ.ನಾಗದೇವ(ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ)
ಬಿ.ವಿನೋದ, ಲಕ್ಷ್ಮೀನರಸಿಂಹಯ್ಯ, ಎಸ್.ಮನೋಜ (ಕಂದಾಯ ಇಲಾಖೆ)
ಎನ್.ಮಂಜುನಾಥ್ (ಲೋಕೋಪಯೋಗಿ ಇಲಾಖೆ)
ಪಿ.ಎನ್.ಪದ್ಮಾವತಿ(ಪಂಚಾಯತ್ ರಾಜ್ ಇಂಜಿನಿಯರಿಂಗ್)
ಎಂ.ಎನ್.ಚಿಕ್ಕೇಗೌಡ, ಟಿ.ಕೆ.ಪ್ರಕಾಶ್(ಸರ್ಕಾರಿ ಪ್ರೌಢ ಶಾಲಾ ವಿಭಾಗ)
ಎಸ್.ದಿವ್ಯ (ಪದವಿ ಕಾಲೇಜು ವಿಭಾಗ)
ವಿ.ಗೋವಿಂದಪ್ಪ (ಸಮಾಜ ಕಲ್ಯಾಣ ಇಲಾಖೆ)
ಎಲ್. ವೆಂಕಟೇಶ್(ಹಿಂದುಳಿದ ವರ್ಗಗಳ ಇಲಾಖೆ)
ಸಿ.ಆರ್.ಚಂದ್ರಕುಮಾರ (ಅರಣ್ಯ ಇಲಾಖೆ)
ಎಲ್.ಶ್ರೀನಿವಾಸಮೂರ್ತಿ, ಟಿ.ಆರ್.ಕುಮಾರ್, ಎಲ್.ಮಹದೇವನಾಯಕ್, ಟಿ.ಸಿ.ಅಮರೇಶ್(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ)
ಶಶಿಕುಮಾರ್ (ತೋಟಗಾರಿಕಾ ಇಲಾಖೆ)
ಕೆ.ಎಸ್.ಸುಧಾ(ಖಜಾನೆ ಇಲಾಖೆ)
ಸುಶೀಲಕುಮಾರ್ ಕ್ಷತ್ರಿ (ನ್ಯಾಯಾಂಗ ಇಲಾಖೆ)
ಡಿ.ಬಿ.ಗಂಗಭೈರಪ್ಪ, ಬಿ.ಆರ್.ವೀಣಾ(ಗ್ರಾಮೀಣಾಭಿವೃದ್ಧಿ ಪಂಚಾಯಿತ್ ರಾಜ್ ಇಲಾಖೆ)
ಇ.ರವಿಕುಮಾರ್(ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ)
ಎಚ್.ನರಸಿಂಹಮೂರ್ತಿ(ಆಹಾರ ಮತ್ತು ನಾಗರೀಕ ಸರಬರಾಜು)
ಅಬಿದಾ ಅಂಜುಮ್(ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ)
ಬಿ.ವಿ.ರಾಘವೇಂದ್ರ(ಅಬಕಾರಿ ಮತ್ತು ವಾಣಿಜ್ಯ ತೆರಿಗಳ ಇಲಾಖೆ)
ಆರ್.ರಾಮಾಂಜನಯ್ಯ(ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕ ಪರಿಶೋಧನ ಇಲಾಖೆ
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…
ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…
ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…
ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…