ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ನಗರದಲ್ಲಿ ಬಾಲ ಪ್ರದೀಪ್ ಪ್ರಚಾರ

ಕೋಲಾರ: ರಾಜ್ಯದಲ್ಲಿನ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಯುವ ಮುಖಂಡ ಬಾಲ ಪ್ರದೀಪ್ ಅವರು ಚುನಾವಣೆಯಲ್ಲಿ ಹೆಚ್ಚಿನ ಮತ ನೀಡುವಂತೆ ಭಾನುವಾರ ನಗರದಲ್ಲಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಲ ಪ್ರದೀಪ್ ರಾಜ್ಯದಲ್ಲಿ ಹಿರಿಯ ಮತ್ತು ಕಿರಿಯ ಕಾಂಗ್ರೆಸ್ ನಾಯಕರು ನನ್ನ ಪರವಾಗಿ ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸಿದ್ದಾರೆ ಹಿಂದೆ ಕೂಡ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರಿಂದ ಹೆಚ್ಚಿನ ಒಲವು ಬಂದಿದೆ ನನ್ನ ಕ್ರಮ ಸಂಖ್ಯೆ 2 ಆಗಿದ್ದು ಯುವಕರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕುವ ಮೂಲಕ ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಗುಳ್ಳು, ಹರೀಶ್, ಶಬರೀಷ್, ಶಬ್ಬೀರ್ ಅಹಮದ್, ಚಾನಬೈ, ಭರತ್ ಯಾದವ್, ಚಿಂಟು, ವಿನಯ್, ಕಾರ್ತೀಕ್, ಮನು ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!