ದೊಡ್ಡಬಳ್ಳಾಪುರ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ರಾಮನಗರದ ಗೌಸಿಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಮಹಿಳಾ ವಿಭಾಗದಲ್ಲಿ ಆರ್. ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ತಂಡ ಮೂರನೇ ಸ್ಥಾನ ಪಡೆದು ಕಂಚಿನ ಪದಕವನ್ನು ಪಡೆದುಕೊಂಡಿದೆ.
ಆರ್.ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಗೌತಮಿ.ಬಿ ಹಾಗೂ ಹೇಮಾ.ಬಿ.ಆಲ್ ವಿಶ್ವವಿದ್ಯಾನಿಲಯದ ರಾಷ್ಟ್ರ ಮಟ್ಟದ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ತಂಡದ ಆಟಗಾರರಾದ ಅನುಷಾ.ಬಿ.ಎಲ್, ಅನನ್ಯ.ಬಿ.ಆರ್, ಗೌತಮಿ, ಭೂಮಿಕಾ ತೂಗ ಶೆಟ್ಟಿ, ಸೃಜನಾ, ಪೂಜಾ.ಎಸ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ತಂಡದ ಎಲ್ಲಾ ಆಟಗಾರರನ್ನು ದೇವರಾಜ ಅರಸು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಪ್ರಾಂಶುಪಾಲರಾದ ಡಾ.ಪಿ.ವಿಜಯ ಕಾರ್ತಿಕ್, ಪ್ರಾಂಶುಪಾಲ ಡಾ.ಶಿವ ಪ್ರಸಾದ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಸುನಿಲ್ ಕುಮಾರ್ ದೈಹಿಕ ಶಿಕ್ಷಣ ನಿರ್ದೇಶಕರಾದ ದಾದಾಪೀರ್ ಪಿ.ಡಿ.ತರಬೇತುದಾರ ಕೇಶವ್ ಮೂರ್ತಿ, ಹೇಮಂತ್, ಮುಕೇಶ್, ಮನ್ಸೂರ್ ಅಭಿನಂದಿಸಿದ್ದಾರೆ.