ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ಚುರುಕುಗೊಳಿಸಿ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ನಗರ ಪೊಲೀಸ್ ಘಟಕಗಳ ಸಮಗ್ರ ತಪಾಸಣೆಗೆ 14 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ನೇಮಿಸಿ ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥರಾದ ಡಿಜಿ ಮತ್ತು ಐಜಿಪಿ ಡಾ.ಸಲೀಂ ಅವರು ಆದೇಶ ಮಾಡಿದ್ದಾರೆ.
ಡಿಜಿ ಮತ್ತು ಐಜಿಪಿ ಅವರ ಪರವಾಗಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ) ಮತ್ತು ಪೊಲೀಸ್ ಮಹಾನಿರೀಕ್ಷಕರ (ಐಜಿಪಿ) ಶ್ರೇಣಿಯ 14 ಹಿರಿಯ ಅಧಿಕಾರಿಗಳನ್ನು ಜಿಲ್ಲಾವಾರು ನೇಮಿಸಲಾಗಿದ್ದು, 2025 ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ತಮಗೆ ವಹಿಸಲಾದ ಜಿಲ್ಲೆಗಳಿಗೆ ಭೇಟಿ ನೀಡಿ ಎರಡು ದಿನಗಳ ಕಾಲ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ.
ಅಧಿಕಾರಿಗಳು – ಪರಿಶೀಲನೆಗೆ ನೀಡಿದ ಜಿಲ್ಲೆಗಳು
ಅಲೋಕ್ ಕುಮಾರ್, ಎಡಿಜಿಪಿ ಬೆಳಗಾವಿ ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಆರ್. ಹಿತೇಂದ್ರ, ಎಡಿಜಿಪಿ ಹುಬ್ಬಳ್ಳಿ-ಧಾರವಾಡ ನಗರ, ಬೆಳಗಾವಿ ಜಿಲ್ಲೆ
ಬಿ.ಕೆ. ಸಿಂಗ್, ಎಡಿಜಿಪಿ ಮಂಗಳೂರು ನಗರ, ಮಂಡ್ಯ ಜಿಲ್ಲೆ
ಪಿ. ಹರಿಶೇಖರನ್, ಎಡಿಜಿಪಿ ಕಲಬುರಗಿ ನಗರ, ದಾವಣಗೆರೆ ಜಿಲ್ಲೆ
ಎಸ್. ಮುರುಗನ್, ಎಡಿಜಿಪಿ ಉಡುಪಿ, ದಕ್ಷಿಣ ಕನ್ನಡ
ಸೌಮೇಂದು ಮುಖರ್ಜಿ ಕೋಲಾರ, ತುಮಕೂರು ಜಿಲ್ಲೆ
ಎಂ. ಚಂದ್ರಶೇಖರ್, ಎಡಿಜಿಪಿ ಮೈಸೂರು ನಗರ, ಹಾಸನ ಜಿಲ್ಲೆ
ಡಾ. ತ್ಯಾಗರಾಜನ್ ಕೆ, ಐಜಿಪಿ ಯಾದಗಿರಿ, ಗದಗ ಜಿಲ್ಲೆ
ಚಂದ್ರ ಗುಪ್ತ, ಐಜಿಪಿ ಹಾವೇರಿ, ಬಳ್ಳಾರಿ ಜಿಲ್ಲೆ
ವಿಕಾಶ್ ಕುಮಾರ್ ವಿಕಾಶ್ ಐಜಿಪಿ ಚಿಕ್ಕಮಗಳೂರು, ಧಾರವಾಡ ಜಿಲ್ಲೆ
ಸಂದೀಪ್ ಪಾಟೀಲ್, ಐಜಿಪಿ ಚಿಕ್ಕಬಳ್ಳಾಪುರ, ವಿಜಯನಗರ ಜಿಲ್ಲೆ
ಎನ್. ಸತೀಶ್ ಕುಮಾರ್ ಐಜಿಪಿ ಮೈಸೂರು ಜಿಲ್ಲೆ, ಕೊಡಗು ಜಿಲ್ಲೆ
ದೇವಜ್ಯೋತಿ ರೇ ಐಜಿಪಿ ಕಲಬುರಗಿ, ಬೀದರ್ ಜಿಲ್ಲೆ
ವೈ.ಎಸ್. ರವಿ ಕುಮಾರ್, ಐಜಿಪಿ ಕೊಪ್ಪಳ, ಕೆ.ಜಿ.ಎಫ್. ಜಿಲ್ಲೆ
ದೇವನಹಳ್ಳಿ: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಅಹಮದಾಬಾದ್ಗೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ಸಂಸ್ಥೆಯ 6E-6423 ವಿಮಾನಕ್ಕೆ…
ಸೋನಂ ವಾಂಗ್ ಚುಕ್...... ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಿಂತ ಸೋನಂ ವಾಂಗ್ ಚುಕ್ ಅವರ ಜೀವ ಭಾರತೀಯರಿಗೆ…
ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.…
ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಪಾಲನಜೋಗಿಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಗ್ರಾಮ ಪ್ರವೇಶ…
ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ–44ರ ದೇವನಹಳ್ಳಿ ಬೈಪಾಸ್ನ ಕೆಂಪೇಗೌಡ ವೃತ್ತದ ಬಳಿ ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ಸರಕು ಸಾಗಣೆ…
ಸೆಲೆಬ್ರಿಟಿ................ ಇತ್ತೀಚಿನ ವರ್ಷಗಳ ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದಲಾಗುತ್ತಿರುವ ಯುವಸಮೂಹದ ಗ್ರಹಿಕಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ. ಏಕೆಂದರೆ,…