ರಾಜ್ಯದಲ್ಲಿ ಬಿಸಿಲಿನ ಝುಳ ಏರಿಕೆ: ಬಿಸಿಲಿನ ಬೇಗೆಗೆ ಬೆಂದ ಜನ: ಇಂದು ಒಂದೇ ದಿನ ತಾಪಮಾನ 31.8c ದಾಖಲು

ರಾಜ್ಯದಲ್ಲಿ ‌ಬಿಸಿಲಿನ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ತಾಪಮಾನ ಏರಿಕೆಯಿಂದ ತತ್ತರಿಸುತ್ತಿರುವ ಜನ. ಇಂದು ಒಂದೇ ದಿನ ತಾಪಮಾನ 31.8 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ. ಇದು ಇದುವರೆಗೆ ದಾಖಲಾದ 5ನೇ ಅತಿ ಹೆಚ್ಚು ಆಗಸ್ಟ್ ದಿನವಾಗಿದೆ. ಇಲ್ಲಿಯವರೆಗಿನ ತಿಂಗಳ ಒಟ್ಟು ಮಳೆ 4 ಮಿ.ಮೀ. 1885ರಲ್ಲಿ ದಾಖಲಾದ 20.6 ಮಿಮೀ ಒಣ ಆಗಸ್ಟ್‌ನ ಸಾರ್ವಕಾಲಿಕ ದಾಖಲೆಯಾಗಿ ಇತಿಹಾಸ ನಿರ್ಮಾಣ ಮಾಡಿದೆ ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.

ಮುಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಬೀಳದೇ ಇರುವುದು ಎಲ್ಲರನ್ನೂ ಗಾಬರಿಗೊಳಿಸಿದೆ, ಬಿಸಿಲಿನ ಝುಳ ಏರಿಕೆಯಾಗಿರುವುದರಿಂದ ಜನರು ತಳಮಳಿಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಮಳೆ ಬಾರದೇ ರೈತರು ಬೆಳೆದ ಬೆಳೆಗಳು ಬಾಡಿಹೋಗುತ್ತಿವೆ, ಪ್ರಾಣಿ ಪಕ್ಷಿಗಳಿಗೆ ನೀರು ಇಲ್ಲದೆ ಸೊರಗುತ್ತಿವೆ.

ಬಿರು ಬಿಸಿಲಿನಿಂದ ಹೀಟ್‌ ಸ್ಟ್ರೋಕ್‌ ಮತ್ತು ಚರ್ಮಕ್ಕೆ ಸಂಬಂಧಿಸಿದ ರೋಗಗಳು ಜನರಲ್ಲಿ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೆಚ್ಚು ಕಾಲ ಬಿಸಿಲಿಗೆ ಚರ್ಮವನ್ನ ಒಡ್ಡದೇ ಎಚ್ಚರಿಕೆ ವಹಿಸಬೇಕಾಗುತ್ತದೆ.

Leave a Reply

Your email address will not be published. Required fields are marked *