ರಾಗಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮ ಸುಮಾರು 90 ಸಾವಿರ ಮೌಲ್ಯದ ಬಣವೆ ಸುಟ್ಟುಕರಕಲಾಗಿರುವ ಘಟನೆ ಇಂದು ಮಧ್ಯಾಹ್ನ ತಾಲೂಕಿನ ತೂಬಗೆರೆ ಹೋಬಳಿಯ ಚಿಕ್ಕಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮುದ್ದೇನಹಳ್ಳಿ ಗ್ರಾಮದ ಅಮಲನಾರಾಯಣ ಎಂಬುವವರ ತೋಟದಲ್ಲಿ ರಾಗಿ ಹುಲ್ಲಿನ ಬಣವೆ ಹಾಕಲಾಗಿತ್ತು. ಯಾರೋ ಬೇಕಂತಲೇ ಬಣವೆಗೆ ಬೆಂಕಿ ಇಡಲಾಗಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಸದ್ಯ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದ್ದು, ಬರಗಾಲದಲ್ಲಿ ಮೇವು ಸಿಗುವುದು ಕಷ್ಟ. ಇಂತಹ ಪರಿಸ್ಥಿಯಲ್ಲೂ ಹುಲ್ಲನ್ನು ಶೇಖರಣೆ ಮಾಡಲಾಗಿತ್ತು. ಆದರೆ ಕಿಡಿಗೇಡಿಗಳ ಕೃತ್ಯಕ್ಕೆ ಹಸುಗಳು ಉಪವಾಸ ಮಲಗುವಂತಾಗಿದೆ ಎಂದು ರೈತ ಅಮಲನಾರಾಯಣ ಅವರು ತಮ್ಮ ಅಳಲನ್ನತೋಡಿಕೊಂಡಿದ್ದಾರೆ.