Categories: ಕೃಷಿ

ಯೂರಿಯಾ ಮಿತ ಬಳಕೆಗೆ ಕೃಷಿ ಇಲಾಖೆ ಸಲಹೆ

 

ಯೂರಿಯಾ ಗೊಬ್ಬರವು ಸಸ್ಯಗಳಿಗೆ ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆ, ಯೂರಿಯಾ ಸಾರಜನಕವನ್ನು ಮಾತ್ರ ಒದಗಿಸುತ್ತದೆ ಮತ್ತು ರಂಜಕ ಮತ್ತು ಪೊಟ್ಯಾಷಿಯಂ ನಂತಹ ಇತರೆ ಅಗತ್ಯ ಅಂಶಗಳನ್ನು ಪೂರೈಸುವುದಿಲ್ಲ. ಆದರೆ ಇದರ ಬಳಕೆ ಹೆಚ್ಚಾದಷ್ಟು ಅಮೃತವು ವಿಷವಾಗುತ್ತೆ, ಎನ್ನುವುದು ವಾಸ್ತವಾಂಶ ಆದ್ದರಿಂದ ಆದಷ್ಟು ಕಡಿಮೆ ಪ್ರಮಾಣದಲ್ಲಿ ಯೂರಿಯಾ ಬಳಸುವುದು ಉತ್ತಮ ಎಂದು ಕೃಷಿ ಇಲಾಖೆ ತಿಳಿಸಿದೆ.

ಯೂರಿಯಾ ಗೊಬ್ಬರವು ಸಸ್ಯಗಳಿಗೆ ಸಾರಜನಕದ ಸಾಮಾನ್ಯ ಮೂಲವಾಗಿದ್ದರೂ, ಹಲವಾರು ಅನಾನುಕೂಲ ಹೊಂದಿದೆ. ಯೂರಿಯಾ ತ್ವರಿತವಾಗಿ ಅಮೋನಿಯಾ ಅನಿಲವಾಗಿ ಪರಿವರ್ತನೆಗೊಂಡು ಬಾಷ್ಪೀಕರಣದ ಮೂಲಕ ವಿಶೇಷವಾಗಿ ಶುಷ್ಕ ಅಥವಾ ಕ್ಷಾರೀಯ ಪರಿಸ್ಥಿತಿಗಳಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕಾಲಾಂತರದಲ್ಲಿ ಯೂರಿಯಾ ಬಳಕೆಯಿಂದ ಮಣ್ಣಿನ pH ಪ್ರಮಾಣವು ಸುಮಾರು 0.5-1.0 ರಷ್ಟು ಕಡಿಮೆ ಆಗುವುದು, ಇದರಿಂದ ಮಣ್ಣಿನಲ್ಲಿ ಆಮ್ಲೀಕರಣವಾಗಿ ಸಸ್ಯಗಳ ಬೆಳವಣಿಗೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಹಾನಿಯಾಗುತ್ತದೆ. ಯೂರಿಯಾವು ಮಣ್ಣಿನಲ್ಲಿ ಲವಣಗಳ ಬೆಳವಣಿಗೆಗೆ ಕಾರಣವಾಗಬಹುದು, ಇದರಿಂದ ಮಣ್ಣಿನ ರಚನೆಯಲ್ಲಿ ವ್ಯತ್ಯಾಸವಾಗಿ ಬೇರು ವಲಯಕ್ಕೆ ಗಾಳಿ ಮತ್ತು ನೀರಿನ ಪ್ರವೇಶವನ್ನು ಮಿತಗೊಳಿಸಿ ಸಸ್ಯಗಳ ಬೆಳವಣಿಗೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.

ಅತಿಯಾದ ಬಳಕೆಯಿಂದ ಸಸ್ಯಗಳ ಬೆಳವಣಿಗೆ ದುರ್ಬಲವಾಗಿ ಹೂವು ಮತ್ತು ಹಣ್ಣಿನ ಇಳುವರಿಯ ಕುಂಠಿತವಾಗುವುದರ, ಜೊತೆಗೆ ಕೀಟಗಳು ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ವೈವಿಧ್ಯತೆ ಮತ್ತು ಪರಿಸರದ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆ.

*ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು*
ಯೂರಿಯಾ ಗೊಬ್ಬರವು ರೂಪಾಂತರಗೊಳ್ಳುವುದರಿಂದ ನೈಟ್ರೇಟ್ ಗಳು ಅಂತರ್ಜಲ ಸೇರಿ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಬೀರುತ್ತದೆ. ಯೂರಿಯಾ ಹೆಚ್ಚಾಗಿ ಬಳಸಿದಾಗ ಬೆಳೆದ ತರಕಾರಿ, ಹಣ್ಣುಗಳು ಹಾಗೂ ಧಾನ್ಯಗಳಲ್ಲಿ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವುಗಳನ್ನು ದೀರ್ಘಾವಧಿಯಲ್ಲಿ ಸೇವಿಸಿದರೆ ಅದರಿಂದ ಮಾನವನಿಗೆ ವಿಷಕಾರಿಯಗಿ ಹೊಟ್ಟೆ ನೋವು, ವಾಂತಿ ಮುಂತಾದ ಕಾಯಿಲೆಗಳು ಸಂಭವಿಸಬಹುದು. ಆಹಾರದಲ್ಲಿ ನೈಟ್ರೇಟ್ ಗಳು ಹೆಚ್ಚಾಗಿದ್ದಾರೆ ಅವು ನೈಟ್ರೋಸಾಮೈನ್ಗಳಾಗಿ ಪರಿವರ್ತನೆಯಾಗಿ ಕ್ಯಾನ್ಸರ್ ಗೆ ಕಾರಣವಾಗಬಹುದು, ಶಿಶುಗಳಲ್ಲಿ ‘ಬ್ಲೂ ಬೇಬಿ ಸಿಂಡ್ರೋಮ್’ ಎಂಬ ಸಮಸ್ಯೆ ಉಂಟಾಗಬಹುದು. ಇದು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ.

ಪರಿಸರದ ಮೇಲಿನ ದುಷ್ಪರಿಣಾಮ ಮತ್ತು ಇತರೆ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಸೂಕ್ತ. ಶಿಫಾರಸ್ಸಿನಂತೆ ಅಗತ್ಯವಿರುವಷ್ಟೇ ಸಮತೋಲನದ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸಿ.
ಬೆಳವಣಿಗೆ ಹಂತದಲ್ಲಿ ಅವಶ್ಯವಿದ್ದಲ್ಲಿ ಶೇಕಡಾ 100ರಷ್ಟು ನೀರಿನಲ್ಲಿ ಕರಗುವ ಸಂಯುಕ್ತ ರಸಗೊಬ್ಬರಗಳ / ನ್ಯಾನೋ ಯೂರಿಯಾ ಪ್ಲಸ್ ಸಿಂಪರಣೆ / ಡ್ರಿಪ್ ಮೂಲಕ ನೀಡುವುದು.
ರಾಗಿ ಬೆಳೆಗೆ ಗೊಬ್ಬರವಾಗಿ ಶಿಫಾರಸ್ಸಿನ ಪ್ರಮಾಣದ ಶೇಕಡಾ 50 ರಷ್ಟು ಸಾರಜನಕವನ್ನು ಯೂರಿಯಾ ರೂಪದಲ್ಲಿ ಸಿಂಪರಣೆ ಮಾಡಬೇಕು.

ರಾಗಿ ಬೆಳೆಗೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರ ಶಿಫಾರಸ್ಸಿತ ಸಾರಜನಕ ಪ್ರಮಾಣವು ಒಂದು ಎಕರೆಗೆ 20 ಕೆ.ಜಿ ಮಾತ್ರ, ಅಂದರೆ ಒಂದು ಎಕರೆಗೆ ಸುಮಾರು 45 ಕೆ.ಜಿ ಯೂರಿಯಾ ಸಿಂಪರಣೆ ಮಾಡಬೇಕು. ಈಗಾಗಲೇ ಬಿತ್ತನೆ ಸಮಯದಲ್ಲಿ ಅರ್ಧದಷ್ಟು ಸಾರಜನಕವನ್ನು ಯೂರಿಯಾ ಮತ್ತು ಡಿಎಪಿ ಮೂಲಕ ಸಿಂಪರಣೆ ಮಾಡುವುದರಿಂದ, ಉಳಿದ ಅರ್ಧದಷ್ಟು ಸಾರಜನಕವನ್ನು ಅಂದರೆ ಸುಮಾರು 22-23 ಕೆ.ಜಿ ಯೂರಿಯಾ ಗೊಬ್ಬರವನ್ನು 2 ಹಂತಗಳಲ್ಲಿ, ಅಂದರೆ ರಾಗಿ ಬೆಳವಣಿಗೆಯ 20-25 ದಿನದೊಳಗೆ ಒಮ್ಮೆ ಹಾಗೂ ಮತ್ತೊಮ್ಮೆ 30-45 ದಿನದೊಳಗೆ ಹಾಕಿದಾಗ ಉತ್ತಮ ಇಳುವರಿ ದೊರೆಯುತ್ತದೆ.

ರೈತರು ಆದಷ್ಟು ಬೇಸಾಯದ ಖರ್ಚು ಕಡಿಮೆ ಮಾಡಿಕೊಳ್ಳಲು ಹಾಗೂ ಪರಿಸರದ ಹಾನಿ ತಪ್ಪಿಸುವ ಸಲುವಾಗಿ ಶಿಫಾರಸ್ಸಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಖರೀದಿಸಲು ಪ್ರಕಟಣೆಯಲ್ಲಿ ಕೃಷಿ ಇಲಾಖೆ ತಿಳಿಸಿದೆ.

Ramesh Babu

Journalist

Share
Published by
Ramesh Babu

Recent Posts

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

6 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

6 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

10 hours ago

ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…

12 hours ago

ತಿರುಮಗೊಂಡನಹಳ್ಳಿ ರೈಲ್ವೆ ಮೇಲ್ಸೇತುವೆ ಅತೀ ಶೀಘ್ರದಲ್ಲಿ ನಿರ್ಮಾಣ- ಸಚಿವ ಕೆ.ಎಚ್ ಮುನಿಯಪ್ಪನವರು ಯಾರನ್ನೂ ಕಡೆಗಣಿಸುವುದಿಲ್ಲ- ಆರ್.ಮುರುಳಿಧರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…

15 hours ago

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ……

ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…

19 hours ago