ಬಾಬಾ ಜಮೀರ್ ಖಾನ್ ರವರು ಕಳೆದ 7 ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡುತ್ತಿರುತ್ತಾರೆ. ಇಷ್ಟೂ ದಿನ ಬಟ್ಟೆಗಳನ್ನು ವ್ಯಾಪಾರ ಮಾಡಲು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ತರಿಸಿಕೊಳ್ಳುತ್ತಿದ್ದರು.
ಹೀಗೆ ಒಂದು ದಿನ ಯೂಟ್ಯೂಬ್ ನೋಡುತ್ತಿದಾಗ, ಕಡಿಮೆ ಬೆಲೆಗೆ ಬಟ್ಟೆಗಳನ್ನು ಮಾರಾಟ ಮಾಡುತ್ತೇವೆ ಎಂದು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಅಪ್ ಲೋಡ್ ಮಾಡಿದ್ದ ವಿಡಿಯೋ ಇವರ ಕಣ್ಣಿಗೆ ಬೀಳುತ್ತದೆ.
ವಿಡಿಯೋ ನೋಡಿದ ಕೂಡಲೇ ದೆಹಲಿಯಿಂದ ಕಡಿಮೆ ಬೆಲೆಗೆ ಬಟ್ಟೆಗಳನ್ನು ತರಿಸಿಕೊಳ್ಳಲು ತೀರ್ಮಾನ ಮಾಡುತ್ತಾರೆ.
ಆ ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೋಡ್ ಮಾಡಿದ್ದ ವಿಡಿಯೋದಲ್ಲಿ ಕೆಲ ಮೊಬೈಲ್ ನಂಬರ್ ಗಳು ಹಾಗೂ ವಿಳಾಸವನ್ನು ಹಾಕಿದ್ದರು. ವಿಡಿಯೋದಲ್ಲಿದ್ದ ಫೋನ್ ನಂಬರ್ ಗೆ ಮಾರ್ಚ್ ತಿಂಗಳಲ್ಲಿ ಫೋನ್ ಮಾಡಿ ನೈಟ್ ಪ್ಯಾಂಟ್ ಗಳು ಬೇಕು, ಒಂದು ನೈಟ್ ಪ್ಯಾಂಟ್ ಬೆಲೆ ಎಷ್ಟು ಎಂದು ಫೋನ್ ಮಾಡಿ ವಿಚಾರಿಸುತ್ತಾರೆ. ಆಗ ಅವರು ಒಂದು ನೈಟ್ ಪ್ಯಾಂಟ್ ಬೆಲೆ 160 ಎಂದು ಹೇಳುತ್ತಾರೆ.
ಇದನ್ನು ಕೇಳಿದ ತಕ್ಷಣ ಇವರ ಬಳಿ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುತ್ತದೆ ಎಂದು ಯೋಚಿಸಿ, 54ಸಾವಿರು ರೂ. ಮೌಲ್ಯದ ನೈಟ್ ಪ್ಯಾಂಟ್ ಗಳು ಬೇಕು ಎಂದು ಕೇಳುತ್ತಾರೆ. ಆಗ ಅವರು ಫೋನ್ ಪೇ ನಂಬರ್ ಕೊಡುತ್ತೇವೆ ಆ ನಂಬರ್ ಗೆ ಹಣ ಹಾಕಿ ಎಂದು ತಿಳಿಸುತ್ತಾರೆ. ಅಂದು ಅಷ್ಟು ಹಣ ಇಲ್ಲದ ಕಾರಣ ಆ ದಿನ ಫೋನ್ ಪೇ ಮಾಡಿರುವುದಿಲ್ಲ. ಮಾ.18 ರಂದು 51 ಸಾವಿರ ರೂ. ಫೋನ್ ಪೇ ಮಾಡುತ್ತಾರೆ.
ಫೋನ್ ಪೇ ಮಾಡಿದ 10ದಿನಗಳಲ್ಲಿ ನೈಟ್ ಪ್ಯಾಂಟ್ ಗಳನ್ನು ಕಳುಹಿಸುತ್ತೇವೆ ಎಂದು ತಿಳಿಸಿದ್ದರು, ಆದರೆ 10 ದಿನಗಳು ಕಳೆದರೂ ನೈಟ್ ಪ್ಯಾಂಟ್ ಗಳು ಕೊರಿಯರ್ ಮೂಲಕ ಬಂದಿರುವುದಿಲ್ಲ. ತಡವಾದ ಹಿನ್ನೆಲೆ ಮತ್ತೆ ಫೋನ್ ಮಾಡಿ ಕೇಳಿದಾಗ, ಅವರು ಇವತ್ತು ಬರುತ್ತೆ ನಾಳೆ ಬರುತ್ತೆ ಎಂದು ಹೇಳಿ ವಂಚನೆ ಮಾಡುತ್ತಿದ್ದರು.
ದೆಹಲಿ ಮೂಲದ ವ್ಯಕ್ತಿ ಮೋಸ ಮಾಡಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…
ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…