ಬಾಬಾ ಜಮೀರ್ ಖಾನ್ ರವರು ಕಳೆದ 7 ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡುತ್ತಿರುತ್ತಾರೆ. ಇಷ್ಟೂ ದಿನ ಬಟ್ಟೆಗಳನ್ನು ವ್ಯಾಪಾರ ಮಾಡಲು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ತರಿಸಿಕೊಳ್ಳುತ್ತಿದ್ದರು.
ಹೀಗೆ ಒಂದು ದಿನ ಯೂಟ್ಯೂಬ್ ನೋಡುತ್ತಿದಾಗ, ಕಡಿಮೆ ಬೆಲೆಗೆ ಬಟ್ಟೆಗಳನ್ನು ಮಾರಾಟ ಮಾಡುತ್ತೇವೆ ಎಂದು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಅಪ್ ಲೋಡ್ ಮಾಡಿದ್ದ ವಿಡಿಯೋ ಇವರ ಕಣ್ಣಿಗೆ ಬೀಳುತ್ತದೆ.
ವಿಡಿಯೋ ನೋಡಿದ ಕೂಡಲೇ ದೆಹಲಿಯಿಂದ ಕಡಿಮೆ ಬೆಲೆಗೆ ಬಟ್ಟೆಗಳನ್ನು ತರಿಸಿಕೊಳ್ಳಲು ತೀರ್ಮಾನ ಮಾಡುತ್ತಾರೆ.
ಆ ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೋಡ್ ಮಾಡಿದ್ದ ವಿಡಿಯೋದಲ್ಲಿ ಕೆಲ ಮೊಬೈಲ್ ನಂಬರ್ ಗಳು ಹಾಗೂ ವಿಳಾಸವನ್ನು ಹಾಕಿದ್ದರು. ವಿಡಿಯೋದಲ್ಲಿದ್ದ ಫೋನ್ ನಂಬರ್ ಗೆ ಮಾರ್ಚ್ ತಿಂಗಳಲ್ಲಿ ಫೋನ್ ಮಾಡಿ ನೈಟ್ ಪ್ಯಾಂಟ್ ಗಳು ಬೇಕು, ಒಂದು ನೈಟ್ ಪ್ಯಾಂಟ್ ಬೆಲೆ ಎಷ್ಟು ಎಂದು ಫೋನ್ ಮಾಡಿ ವಿಚಾರಿಸುತ್ತಾರೆ. ಆಗ ಅವರು ಒಂದು ನೈಟ್ ಪ್ಯಾಂಟ್ ಬೆಲೆ 160 ಎಂದು ಹೇಳುತ್ತಾರೆ.
ಇದನ್ನು ಕೇಳಿದ ತಕ್ಷಣ ಇವರ ಬಳಿ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುತ್ತದೆ ಎಂದು ಯೋಚಿಸಿ, 54ಸಾವಿರು ರೂ. ಮೌಲ್ಯದ ನೈಟ್ ಪ್ಯಾಂಟ್ ಗಳು ಬೇಕು ಎಂದು ಕೇಳುತ್ತಾರೆ. ಆಗ ಅವರು ಫೋನ್ ಪೇ ನಂಬರ್ ಕೊಡುತ್ತೇವೆ ಆ ನಂಬರ್ ಗೆ ಹಣ ಹಾಕಿ ಎಂದು ತಿಳಿಸುತ್ತಾರೆ. ಅಂದು ಅಷ್ಟು ಹಣ ಇಲ್ಲದ ಕಾರಣ ಆ ದಿನ ಫೋನ್ ಪೇ ಮಾಡಿರುವುದಿಲ್ಲ. ಮಾ.18 ರಂದು 51 ಸಾವಿರ ರೂ. ಫೋನ್ ಪೇ ಮಾಡುತ್ತಾರೆ.
ಫೋನ್ ಪೇ ಮಾಡಿದ 10ದಿನಗಳಲ್ಲಿ ನೈಟ್ ಪ್ಯಾಂಟ್ ಗಳನ್ನು ಕಳುಹಿಸುತ್ತೇವೆ ಎಂದು ತಿಳಿಸಿದ್ದರು, ಆದರೆ 10 ದಿನಗಳು ಕಳೆದರೂ ನೈಟ್ ಪ್ಯಾಂಟ್ ಗಳು ಕೊರಿಯರ್ ಮೂಲಕ ಬಂದಿರುವುದಿಲ್ಲ. ತಡವಾದ ಹಿನ್ನೆಲೆ ಮತ್ತೆ ಫೋನ್ ಮಾಡಿ ಕೇಳಿದಾಗ, ಅವರು ಇವತ್ತು ಬರುತ್ತೆ ನಾಳೆ ಬರುತ್ತೆ ಎಂದು ಹೇಳಿ ವಂಚನೆ ಮಾಡುತ್ತಿದ್ದರು.
ದೆಹಲಿ ಮೂಲದ ವ್ಯಕ್ತಿ ಮೋಸ ಮಾಡಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…
ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…
ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…
ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…