ಯಲಹಂಕದ ಮಣಿಪಾಲ್ ಆಸ್ಪತ್ರೆಯಲ್ಲಿ ಸಕಾಲಿಕ ಮತ್ತು ತಜ್ಞ ಆರೈಕೆಯಿಂದ ಆಕಸ್ಮಿಕವಾಗಿ 2 ನೇ ಮಹಡಿಯಿಂದ ಬಿದ್ದ 2 ವರ್ಷದ ಮಗುವಿಗೆ ಜೀವದಾನ

ಜೀವನ ಕೆಲವೊಮ್ಮೆ ಕ್ಷಣಾರ್ಧದಲ್ಲಿ ಬದಲಾಗುತ್ತದೆ. ಒಂದು ಕ್ಷಣದಲ್ಲಿ ಎಲ್ಲವೂ ಸಹಜವಾಗಿರುತ್ತದೆ, ಮುಂದಿನ ಕ್ಷಣದಲ್ಲಿ ಅನಿಶ್ಚಿತತೆ ಆವರಿಸುತ್ತದೆ. ಅಪಘಾತಗಳು ಯಾವುದೇ ಮುನ್ನೆಚ್ಚರಿಕೆ ನೀಡದೇ ಬರುತ್ತವೆ. ವಿಶೇಷವಾಗಿ ಸಣ್ಣ ಮಕ್ಕಳನ್ನು ತಟ್ಟಿದಾಗ ಅದರ ಪರಿಣಾಮಗಳು ಇನ್ನಷ್ಟು ಗಂಭೀರವಾಗುತ್ತವೆ. ಮಕ್ಕಳ ಸಹಜ ಕುತೂಹಲ ಮತ್ತು ಅಜಾಗರೂಕತೆ, ಅವರು ತಮ್ಮ ಮನೆಯಲ್ಲೇ ಇದ್ದರೂ ಅಪಾಯಗಳಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಎತ್ತರದಿಂದ ಬೀಳುವಂತಹ ಘಟನೆಗಳು, ಸದಾ ಎಚ್ಚರಿಕೆ ಮತ್ತು ಸಮಯೋಚಿತ, ಪರಿಣಿತ ವೈದ್ಯಕೀಯ ಚಿಕಿತ್ಸೆ ಏಕೆ ಅತ್ಯಗತ್ಯ ಎಂಬುದನ್ನು ನೆನಪಿಸುವ ಕಠಿಣ ಸತ್ಯಗಳಾಗಿವೆ.

ಈ ಹಿನ್ನೆಲೆಯಲ್ಲಿ, ಏಪ್ರಿಲ್ 23ರಂದು ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈದ್ಯರು, 2 ವರ್ಷ 8 ತಿಂಗಳ ಮಗು ನಿಮ್ಜಾ ಫಾತಿಮಾ ಅವರ ಅದ್ಭುತ ಬದುಕುಳಿವಿನ ಕಥೆಯನ್ನು ಹಂಚಿಕೊಂಡರು. ಮನೆಯ ಎರಡನೇ ಮಹಡಿಯಿಂದ ಸಂಭವಿಸಿದ ಭಾರೀ ಅಪಘಾತದ ನಂತರ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾದ ಈ ಮಗು, ಇಂದು ಸುರಕ್ಷಿತವಾಗಿ ಚೇತರಿಸಿಕೊಂಡಿರುವುದು ವೈದ್ಯಕೀಯ ಸಾಧನೆಯಾಗಿ ಪರಿಣಮಿಸಿದೆ.

ಗಂಭೀರವಾಗಿ ಗಾಯಗೊಂಡ ನಿಮ್ಜಾಳ ಪಾಲಕರು  ಅವಳೊಂದಿಗೆ ಯಲಹಂಕದ ಮಣಿಪಾಲ್ ಆಸ್ಪತ್ರೆ ಗೆ ತಲುಪಿದಾಗ ಅವಳ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ತಲೆಗೆ ತೀವ್ರ ಪೆಟ್ಟು, ಅಸಮಂಜಸ ಉಸಿರಾಟದಿಂದ ವೆಂಟಿಲೇಟರ್ ಸಹಾಯ ಅಗತ್ಯವಾಗಿದ್ದು, ಎಡ ಕಣ್ಣಿನ ಭಾಗದಲ್ಲಿ ಉಬ್ಬರ ಮತ್ತು ಒಳಗಿನ ರಕ್ತಸ್ರಾವ ಕಂಡುಬಂದಿತ್ತು. ಮೆದುಳು, ಕಪಾಲ ಮತ್ತು ಕಣ್ಣು, ಈ ಮೂರು ಪ್ರಮುಖ ಭಾಗಗಳಿಗೆ ಹಾನಿಯಾಗಿದ್ದರಿಂದ, ತಕ್ಷಣವೇ ಚಿಕಿತ್ಸೆ ಅಗತ್ಯವಾಯಿತು. ಆಸ್ಪತ್ರೆಗೆ ತಲುಪಿದ ತಕ್ಷಣವೇ ಮಕ್ಕಳ ತೀವ್ರ ನಿಗಾ ಘಟಕ (PICU) ತಂಡವು ಅತ್ಯಾಧುನಿಕ ಚಿಕಿತ್ಸೆಯನ್ನು ಪ್ರಾರಂಭಿಸಿತು. ಮಗುವನ್ನು ವೆಂಟಿಲೇಟರ್‌ಗೆ ಅಳವಡಿಸಿ, ಮೆದುಳಿನ ಊತವನ್ನು ನಿಯಂತ್ರಿಸಲು ಚಿಕಿತ್ಸೆ ನೀಡಲಾಗಿದ್ದು, ನರ ವೈಜ್ಞಾನಿಕ ಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಯಿತು. ಕಣ್ಣಿನ ಹಿಂಭಾಗದಲ್ಲಿ ಜಮಾಯಿಸಿದ್ದ ರಕ್ತವನ್ನು ತುರ್ತಾಗಿ ಹೊರತೆಗೆದು, ನಂತರ ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು ‘ಆರ್ಬಿಟಲ್ ಡೀಕಂಪ್ರೆಷನ್’ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು.

ಈ ಕುರಿತು ಮಾತನಾಡಿದ ಮಕ್ಕಳ ತೀವ್ರ ನಿಗಾ ತಜ್ಞರಾದ ಡಾ. ಸಯ್ಯದ್ ಎಂ.ಡಿ. ನೌಷಾದ್ ಅಲಿ, “ಮಗು ಆಸ್ಪತ್ರೆಗೆ ಬಂದಾಗ ಮೆದುಳಿನ ಮೇಲೆ ಭಾರೀ ಒತ್ತಡ ಮತ್ತು ಶಾರೀರಿಕ ಪ್ರಮುಖ ಚಿಹ್ನೆಗಳ ಅಸ್ಥಿರತೆ ಕಂಡುಬಂದಿತ್ತು. ಮೆದುಳಿನ ಊತ ನಿಯಂತ್ರಿಸಲು ವಿಶೇಷ ಸಲೈನ್ ಚಿಕಿತ್ಸೆ, ಅಪಸ್ಮಾರಗಳನ್ನು ತಡೆಯಲು ಔಷಧೋಪಚಾರ ಹಾಗೂ ರಕ್ತಸಂಚಾರ ಸ್ಥಿರವಾಗಿಡಲು ಅಗತ್ಯ ಬೆಂಬಲ ನೀಡಲಾಯಿತು. ಮೊದಲ 24 ಗಂಟೆಗಳು ಅತ್ಯಂತ ನಿರ್ಣಾಯಕವಾಗಿದ್ದವು,” ಎಂದು ಹೇಳಿದರು.

ಇನ್ನಷ್ಟು ವಿವರಿಸಿದ ಮಕ್ಕಳ ತೀವ್ರ ನಿಗಾ ತಜ್ಞರಾದ ಡಾ. ಕಾರ್ತಿಕ್ ಅರಿಗೇಲ “ಕಣ್ಣಿನ ಹಿಂಭಾಗದಲ್ಲಿ ರಕ್ತಸ್ರಾವದಿಂದ ಉಂಟಾದ ಒತ್ತಡ ಅತ್ಯಂತ ಗಂಭೀರ ಸಮಸ್ಯೆಯಾಗಿತ್ತು. ತಕ್ಷಣವೇ ಆ ರಕ್ತವನ್ನು ಹೊರತೆಗೆದು, ನಂತರ ಕಣ್ಣಿನ ರಕ್ಷಣೆಗೆ ಅಗತ್ಯ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದರ ಜೊತೆಗೆ ವೆಂಟಿಲೇಟರ್ ಸಹಾಯ, ರಕ್ತ ವರ್ಗಾವಣೆ ಮತ್ತು ಸೋಂಕು ನಿಯಂತ್ರಣ ಕ್ರಮಗಳು ಸಮನ್ವಯದಿಂದ ನಡೆಯಿತು, ಇವುಗಳೆಲ್ಲವೂ ಮಗುವಿನ ಚೇತರಿಕೆಗೆ ಮುಖ್ಯ ಕಾರಣಗಳಾಗಿವೆ” ಎಂದರು.

ಆಸ್ಪತ್ರೆಯಲ್ಲಿದ್ದ ದಿನಗಳಲ್ಲಿ ಮಗು ನಿಮ್ಜಾ ನಿಧಾನವಾಗಿ ಸ್ಥಿರವಾಗಿ ಚೇತರಿಸಿಕೊಂಡಳು. ಜೀವ ಚಿಹ್ನೆಗಳು ಸ್ಥಿರಗೊಂಡವು, ಸೋಂಕು ನಿಯಂತ್ರಣಕ್ಕೆ ಬಂದಿತು, ನರ ವೈಜ್ಞಾನಿಕ ಸ್ಥಿತಿ ಸುಧಾರಿಸಿತು. ಕ್ರಮೇಣ ವೆಂಟಿಲೇಟರ್‌ನಿಂದ ಬೇರ್ಪಡಿಸಿ, ಸುಮಾರು ಎರಡು ವಾರಗಳ ತೀವ್ರ ಚಿಕಿತ್ಸೆಯ ನಂತರ, ಸ್ಥಿರ ಸ್ಥಿತಿಯಲ್ಲಿ ಮನೆಗೆ ಬಿಡುಗಡೆ ಮಾಡಲಾಯಿತು. ಮುಂದಿನ ಹಂತದ ಚಿಕಿತ್ಸೆಯಾಗಿ ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆ ಯೋಜಿಸಲಾಗಿದೆ ಎಂದರು.

ಈ ಕಠಿಣ ಸಮಯವನ್ನು ನೆನಪಿಸಿಕೊಂಡು ಮಗುವಿನ ಸಂಬಂಧಿ, “ಅವಳ ಸ್ಥಿತಿ ನೋಡಿದಾಗ ನಾವು ಸಂಪೂರ್ಣವಾಗಿ ಕುಗ್ಗಿಬಿಟ್ಟೆವು. ಅವಳನ್ನು ಕಳೆದುಕೊಳ್ಳಬಹುದು ಅನ್ನಿಸಿತು. ಆದರೆ ಮಣಿಪಾಲ್ ಆಸ್ಪತ್ರೆಯ ವೈದ್ಯರು ತಕ್ಷಣ ಕ್ರಮ ತೆಗೆದುಕೊಂಡು, ಬಹುಶಾಖಾ ಚಿಕಿತ್ಸೆಯ ಮೂಲಕ ನಮಗೆ ಆಶೆಯನ್ನು ನೀಡಿದರು. ಇಂದು ಅವಳನ್ನು ಸುರಕ್ಷಿತವಾಗಿ ನೋಡುತ್ತಿರುವುದು ನಮಗೆ ವರ್ಣಿಸಲಾಗದ ಸಂತೋಷವಾಗಿದೆ,” ಎಂದರು.

ಈ ಘಟನೆ ಯಶಸ್ವಿ ಚಿಕಿತ್ಸೆಯ ಉದಾಹರಣೆಯಾಗಿರುವುದರ ಜೊತೆಗೆ, ಮಕ್ಕಳಲ್ಲಿ ತಪ್ಪಿಸಬಹುದಾದ ಗಾಯಗಳ ಬಗ್ಗೆ ಮಹತ್ವದ ಎಚ್ಚರಿಕೆಯನ್ನು ನೀಡುತ್ತದೆ. ಎತ್ತರದಿಂದ ಬೀಳುವುದು, ಸಣ್ಣ ಮಕ್ಕಳಲ್ಲಿ ಗಂಭೀರ ಗಾಯಗಳಿಗೆ ಪ್ರಮುಖ ಕಾರಣವಾಗಿದ್ದು, ಬಹುತೇಕ ಮನೆ ಪರಿಸರದಲ್ಲೇ ಸಂಭವಿಸುತ್ತದೆ.

ಈ ಕುರಿತು ಮಾತನಾಡಿದ ಮಕ್ಕಳ ವಿಭಾಗದ ನಿರ್ದೇಶಕರಾದ ಡಾ. ಚೇತನ ಗಿಣಿಗೇರಿ ಅವರು, “ಮಕ್ಕಳ ದೇಹ ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಇಂತಹ ಗಾಯಗಳು ಬೇಗನೆ ಗಂಭೀರವಾಗಬಹುದು. ಆದ್ದರಿಂದ ಪೋಷಕರು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುವುದು ಮತ್ತು ಸುರಕ್ಷಿತ ಮನೆ ವಾತಾವರಣ ನಿರ್ಮಿಸುವುದು ಅತ್ಯಂತ ಮುಖ್ಯ. ಜೊತೆಗೆ, ತಕ್ಷಣವೇ ವಿಶೇಷ ತಜ್ಞ ಚಿಕಿತ್ಸೆಯನ್ನು ಪಡೆಯುವುದರಿಂದ ಫಲಿತಾಂಶದಲ್ಲಿ ಮಹತ್ವದ ಬದಲಾವಣೆ ತರಬಹುದು,” ಎಂದರು.

ಯಲಹಂಕದ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತಪಡಿಸಲಾದ ಈ ಪ್ರಕರಣ, ಸುಧಾರಿತ ವೈದ್ಯಕೀಯ ಸೌಲಭ್ಯಗಳು, ಸಮಯೋಚಿತ ಶಸ್ತ್ರಚಿಕಿತ್ಸೆ ಮತ್ತು ಸಮನ್ವಿತ ತಜ್ಞರ ಸೇವೆಯಿಂದ ಮಕ್ಕಳ ಜೀವ ಉಳಿಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ನಿಮ್ಜಾ ಕಥೆ ಕೇವಲ ಬದುಕುಳಿವಿನ ಕಥೆಯಲ್ಲ, ಅದು ಒಂದು ಎಚ್ಚರಿಕೆ. ಅಪಘಾತಗಳು ಅನಿರೀಕ್ಷಿತವಾಗಿರಬಹುದು, ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆತರೆ ಜೀವಗಳನ್ನು ಉಳಿಸಬಹುದು ಎಂಬ ನಿಜವನ್ನು ಈ ಘಟನೆ ಮತ್ತೆ ನೆನಪಿಸುತ್ತದೆ.

Ramesh Babu

Journalist

Recent Posts

ಭಗೀರಥ ಜಯಂತಿ ಆಚರಣೆ

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ ತಹಶಿಲ್ದಾರ್ ಮಲ್ಲಪ್ಪ ಎರಗೋಡ ನೇತೃತ್ವದಲ್ಲಿ ತಾಲ್ಲೂಕು ಕಚೇರಿ…

2 hours ago

SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಮೂವರು‌ ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ಇಂದು ಮಧ್ಯಾಹ್ನ 12ಕ್ಕೆ 2026 SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ ಮಾಡಲಾಗಿದೆ. 7 ಲಕ್ಷದ 24 ಸಾವಿರದ 794 ವಿದ್ಯಾರ್ಥಿಗಳು…

5 hours ago

ನವಜಾತ ಶಿಶುವಿನ ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ

ಇಲ್ಲೋರ್ವ ಪಾಪಿ ತಾಯಿ ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದು ಅಮಾನವೀಯತೆ ಮೆರೆದಿರುವ ಘಟನೆ ದೇವನಹಳ್ಳಿ ತಾಲ್ಲೂಕಿನ…

6 hours ago

Free Blackjack Online: The Most Effective Means to Practice and Have A Good Time

Blackjack is one of the most prominent gambling enterprise video games on the planet. It's…

7 hours ago

Ставки на спорт в Украине_ основы и стратегии(1)

Ставки на спорт UA: советы и стратегии для успеха Ставки на спорт в Украине: основы…

17 hours ago

ದೊಡ್ಡಬಳ್ಳಾಪುರ ನೂತನ ಉಪವಿಭಾಗಾಧಿಕಾರಿಯಾಗಿ ಮಂಜುನಾಥ್ ಟಿ.ಆರ್ ಅಧಿಕಾರ ಸ್ವೀಕಾರ

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯಾಗಿದ್ದ ಎನ್ ದುರ್ಗಶ್ರೀ ಅವರನ್ನು ಇಂದು ವರ್ಗಾವಣೆ ಮಾಡಲಾಗಿತ್ತು. ಇವರ ಜಾಗಕ್ಕೆ ಮಂಜುನಾಥ್ ಟಿ.ಆರ್ ಅವರನ್ನು ನೇಮಕ ಮಾಡಿ…

20 hours ago