ಮೊಬೈಲ್ ಚಾರ್ಜ್ ಆಗುತ್ತಿರುವಾಗ ಶಾರ್ಟ್ ಸರ್ಕಿಟ್ ಆಗಿ ಮನೆಯಲ್ಲಿ ದಟ್ಟಹೊಗೆ ಆವರಿಸಿಕೊಂಡು ಕೆಲಕಾಲ ಎಲ್ಲರಲ್ಲಿ ಆತಂಕ ಮೂಡಿಸಿದ್ದ ಘಟನೆ ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆ(ಗಂಗಾಧರಪುರ ಬಡಾವಣೆ)ಯಲ್ಲಿ ನಡೆದಿದೆ…
ಮನೆಯಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಮನೆಯವರು ನೀರನ್ನು ಎರಚಿ ಆಗುವ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಕ್ಷಣಾರ್ಧದಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ಸಂಪೂರ್ಣವಾಗಿ ಹೊಗೆ ಬರುವುದನ್ನು ನಿಂಯತ್ರಣ ಮಾಡಿದ್ದಾರೆ.
ಕೆಲಕಾಲ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು…
ಮೊಬೈಲ್ ಚಾರ್ಜಿಂಗ್ ಶಾರ್ಟ್ ಸರ್ಕಿಟ್ ಆಗುವುದನ್ನು ತಡೆಯುವುದು ಹೇಗೆ
ಮೊಬೈಲ್ ಚಾರ್ಜ್ ಮಾಡುವಾಗ ಶಾರ್ಟ್ ಸರ್ಕಿಟ್ ಆಗುವುದನ್ನು ತಡೆಯಲು, ಗುಣಮಟ್ಟದ ಚಾರ್ಜರ್ ಬಳಸಿ ಮತ್ತು ಚಾರ್ಜಿಂಗ್ ಪೋರ್ಟ್ನಲ್ಲಿ ಧೂಳು ಅಥವಾ ತೇವಾಂಶವಿಲ್ಲದಂತೆ ನೋಡಿಕೊಳ್ಳಿ. ಹಾನಿಗೊಳಗಾದ ಕೇಬಲ್ಗಳನ್ನು ಬಳಸಬೇಡಿ. ಶಾರ್ಟ್ ಸರ್ಕಿಟ್ ಸಂಭವಿಸಿದರೆ, ತಕ್ಷಣ ಪವರ್ ಆಫ್ ಮಾಡಿ, ಬ್ಯಾಟರಿಯನ್ನು ಪರೀಕ್ಷಿಸಿ ಮತ್ತು ಅಗತ್ಯವಿದ್ದರೆ ವೃತ್ತಿಪರರ ಸಹಾಯ ಪಡೆಯಿರಿ.
ಕಾರಣಗಳು: ಕಳಪೆ ಗುಣಮಟ್ಟದ ಚಾರ್ಜರ್/ಕೇಬಲ್, ಹಾನಿಗೊಳಗಾದ ಚಾರ್ಜಿಂಗ್ ಪೋರ್ಟ್, ನೀರಿನ ತೇವಾಂಶ, ಅಥವಾ ಮದರ್ಬೋರ್ಡ್ನಲ್ಲಿನ ದೋಷಗಳು.
ಪರಿಹಾರ:ಪವರ್ ಆಫ್ ಮಾಡಿ: ಶಾರ್ಟ್ ಸರ್ಕಿಟ್ ಅನುಮಾನವಿದ್ದರೆ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿ.
ಪೋರ್ಟ್ ಪರೀಕ್ಷಿಸಿ: ಚಾರ್ಜಿಂಗ್ ಪೋರ್ಟ್ನಲ್ಲಿ ಧೂಳು, ಕಸ ಅಥವಾ ನೀರಿನ ಅಂಶವಿದ್ದರೆ ಸ್ವಚ್ಛಗೊಳಿಸಿ.
ಬ್ಯಾಟರಿ ಪರಿಶೀಲನೆ: ಬ್ಯಾಟರಿ ತೆಗೆಯಬಹುದಾದರೆ, ಅದು ಉಬ್ಬಿದೆಯೇ ಅಥವಾ ಹಾನಿಗೊಳಗಾಗಿದೆಯೇ ಎಂದು ನೋಡಿ.
ಪರಿಣಿತರ ಸಹಾಯ: ಸಮಸ್ಯೆ ಮುಂದುವರಿದರೆ, ಮದರ್ಬೋರ್ಡ್ನಲ್ಲಿ ಶಾರ್ಟ್ ಸರ್ಕಿಟ್ ಇರಬಹುದು, ತಕ್ಷಣ ರಿಪೇರಿ ಅಂಗಡಿಗೆ ಕರೆದೊಯ್ಯಿರಿ.
ಮುನ್ನೆಚ್ಚರಿಕೆಗಳು:ಮೊಬೈಲ್ ಚಾರ್ಜ್ ಆಗುವಾಗ ಫೋನ್ ಬಳಕೆಯನ್ನು ತಪ್ಪಿಸಿ.
ಫೋನ್ ಅನ್ನು ದಿಂಬಿನ ಅಡಿಯಲ್ಲಿ ಇಟ್ಟು ಚಾರ್ಜ್ ಮಾಡಬೇಡಿ.
ಕಡಿಮೆ ಬೆಲೆಯ ನಕಲಿ ಚಾರ್ಜರ್ಗಳನ್ನು ಬಳಸಬೇಡಿ.
ಗಮನಿಸಿ: ಶಾರ್ಟ್ ಸರ್ಕಿಟ್ ಆದಾಗ ಕಿಡಿಗಳು ಬಂದರೆ ಅಥವಾ ಹೊಗೆ ಬಂದರೆ, ತಕ್ಷಣ ಮುಖ್ಯ ಪವರ್ ಸ್ವಿಚ್ ಆಫ್ ಮಾಡಿ ಮತ್ತು ಫೋನ್ ಅನ್ನು ಸುರಕ್ಷಿತವಾಗಿ ದೂರವಿಡಿ.
ಅಧ್ಯಾತ್ಮ ಮತ್ತು ಸದ್ಗುರು ಜಗ್ಗಿ ವಾಸುದೇವ್........ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು. ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ…
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ…
ಫೆ.26ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಚಿಕ್ಕಮಧುರೆ ಶ್ರೀ ಶನಿಮಹಾತ್ಮಸ್ವಾಮಿಯ 71ನೇ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ…
ನೆಲಮಂಗಲದ ಜಿಂದಾಲ್ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ…
ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಶನಿವಾರದಂದು ನಡೆದ ಸೈನ್ಸ್ ಫೆಸ್ಟ್ ನಂತರ ಮಕ್ಕಳಿಗೆ ಮತ್ತು ಪೋಷಕರಿಗೆ ಮನರಂಜನೆ ಉಣಬಡಿಸುವ ಪ್ರಯುಕ್ತ ಮಧ್ಯಾಹ್ನ…
ನೆಲಮಂಗಲದ ಜಿಂದಾಲ್ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 12 ಗಂಟೆಯ ಸುಮಾರಿಗೆ…