Categories: ಆರೋಗ್ಯ

ಮೆಡಿಕವರ್‌ ಹಾಸ್ಪಿಟಲ್: ರೋಬೋಟಿಕ್ ಪೆಲ್ವಿಕ್ ಎಕ್ಸೆನ್ತರೇಶನ್ ಶಸ್ತ್ರಚಿಕಿತ್ಸೆಯಿಂದ ರೋಗಿಯ ಆರೋಗ್ಯ ಸುಧಾರಣೆ

ವೈಟ್‌ ಫೀಲ್ದ್‌, ಬೆಂಗಳೂರು : ಬೇರೆ ಬೇರೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೆಡಿಕವರ್‌ ಆಸ್ಪತ್ರೆಯಲ್ಲಿರುವ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ತಿಳಿದ ಕೋಲ್ಕತ್ತಾ ಮೂಲದ ರೋಗಿಯೂ , ಇಲ್ಲೆ ಬಂದು ರೊಬೊಟಿಕ್‌ ಸರ್ಜರಿ ಮಾಡಿಕೊಂಡು ನಾಲ್ಕೆ ದಿನದಲ್ಲೆ ಹುಷಾರಾಗಿ ಮನೆಗೆ ತೆರಳಿದ್ದಾರೆ.

46 ವರ್ಷದ ಮಹಿಳೆಗೆ ಕಳೆದ ಏಳು ತಿಂಗಳಿನಿಂದ ಮೂತ್ರ ಮಾಡುವಾಗ ರಕ್ತ ಸ್ರಾವ ವಾಗುತ್ತಾ ಇತ್ತು . ಮೂತ್ರವಿಸರ್ಜನೆ ಮಾಡುವ ರಕ್ತಸ್ರಾವವಾಗುತ್ತಾ(ಹೆಮ್ಯಾಚುರಿಯಾ) ಇತ್ತು . ರಕ್ತಸ್ರಾವಕ್ಕೆ ಕಾರಣವೇನೆಂದು ತಿಳಿಯಲು ಸ್ಥಳೀಯ ವೈದ್ಯರ ಬಳಿ ಪರೀಕ್ಷೆ ಮಾಡಿದಾಗ, ಸಿಟಿ ಸ್ಯಾನ್‌ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ . ಆದ್ರೆ ಅದನ್ನು ರೋಗಿಯೂ ಸಂಪೂರ್ಣವಾಗಿ ನೀರ್ಲಕ್ಷ್ಯ ಮಾಡಿದ್ರೂ . ದಿನೇ ದಿನೇ ಮೂತ್ರ ವಿಸರ್ಜನೆ ಮಾಡುವಾಗ ರಕ್ತಸ್ರಾವ ಜಾಸ್ತಿಯಾಗ್ತಾ ಇತ್ತು . ಬಳಿಕ ಅವರು ಸಿಟಿ ಸ್ಕಾನ್‌ ಮಾಡಿದಾಗ ಬ್ಲಾಡರ್‌ ನಲ್ಲಿ ಟ್ಯೂಮರ್‌ ಇರೋದು ಪತ್ತೆಯಾಗಿದೆ . ಹಾಗಾಗೀ ಬೆಂಗಳೂರಿನ ಮೆಡಿಕವರ್‌ ಆಸ್ಪತ್ರೆಗೆ ಬಂದು ರೋಬೋಟಿಕ್‌ ಸರ್ಜನ್‌ ಡಾ. ಪ್ರಮೋದ್‌ ಅವರನ್ನು ಭೇಟಿ ಮಾಡಿ ಬಯೋಸ್ಪಿ ನಡೆಸಿದ್ರೂ. ಆಗ ಯೂರಿನ್‌ ಚೀಲದಿಂದ ಗರ್ಭಕೋಶಕ್ಕೆ ಕ್ಯಾನ್ಸರ್‌ ಹರಡಿದೆ ಅನ್ನೋದು ತಿಳಿದುಬಂದಿದೆ.

ರೊಬೊಟಿಕ್‌ ಸರ್ಜರಿ ನಡೆಸಿದರೇ ಉತ್ತಮವೆಂದು ತಿಳಿದ ರೋಗಿಯೂ, ಮೆಡಿಕವರ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿಕೊಂಡರು.ಬ್ಲಾಡರ್‌ ಹಾಗೂ ಗರ್ಭಕೋಶ ಎರಡನ್ನು ತೆಗೆಯಬೇಕಾದ ಕಾರಣ, ಈ ಸರ್ಜರಿ ಸ್ವಲ್ಪ ರಿಸ್ಕಿ ಯಾಗಿತ್ತು. ಹಾಗಾಗೀ ರೋಗಿಗೆ ಪೆಲ್ವಿಕ್ ಎಕ್ಸೆನ್ತರೇಶನ್( ಗರ್ಭಕೋಶ ಹಾಗೂ ಬ್ಲಾಡರ್‌ ನಲ್ಲಿರುವ ಕ್ಯಾನ್ಸರ್‌ ತೆಗೆದು ಹಾಕುವ) ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನುಮಾಡಲಾಯ್ತು.
ಯೂರಿನ್‌ ಬ್ಲಾಡರ್‌ ಹಾಗೂ ಗರ್ಭಕೋಶವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿತ್ತು. ಬಳಿಕ ಮೂತ್ರವಿಸರ್ಜನಗೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿ ಅಪರೇಷನ್‌ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಅವರಿಗೆ ಹಿಮೋಗ್ಲೀಬಿನ್‌ ಸ್ವಲ್ಪ ಕಡಿಮೆ ಇತ್ತು . ಅದಕ್ಕಾಗಿ ಸೂಕ್ತ ಚಿಕಿತ್ಸೆ ನೀಡಿ ನಾಲ್ಕು ದಿನಗಳ ಬಳಿಕ ರೋಗಿಯನ್ನು ಆರೋಗ್ಯಕರವಾಗಿ ಮನೆಗೆ ಕಳಿಸಿಕೊಡಲಾಗಿತ್ತು.

ರೋಬೊಟಿಕ್‌ ಸರ್ಜರಿ ನಡೆಸಿದರೇ ರಿಕವರಿ ಟೈಮ್‌ ಬಹಳ ಕಡಿಮೆ ಇರುತ್ತದೆ. ನಾಲ್ಕೇ ದಿನದಲ್ಲಿ ರೋಗಿಯೂ ರಿಕವರಿ ಆಗಿ ಮನೆಗೆ ತೆರಳಿದ್ದಾರೆ. ನಾರ್ಮಲ್‌ ಶಸ್ತ್ರಚಿಕಿತ್ಸೆ ನಡೆದರೇ ರಿಕವರಿ ಟೈಮ್‌ ಒಂದುತಿಂಗಳು ಬೇಕಾಗುತ್ತದೆ ಎಂದು ರೋಬೋಟಿಕ್‌ ಸರ್ಜನ್‌ ಡಾ . ಪ್ರಮೋದ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

8 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

13 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

13 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

18 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago