ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ: ಬರಿದಾಗುತ್ತಿದೆ ಕೆ.ಆರ್.ಎಸ್ ಜಲಾಶಯ

ಈ ವರ್ಷ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಕೆಆರ್ ಎಸ್ ಜಲಾಶಯ ಬರೆದಾಗುತ್ತಿದೆ. ಜಲಾಶಯದ ನೀರಿನ ಮಟ್ಟ 77 ಅಡಿಗೆ ಕುಸಿದಿದೆ ಎನ್ನಲಾಗುತ್ತಿದೆ.

ಈ ವಾರದಲ್ಲಿ ಮಳೆಯಾಗದಿದ್ದರೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತವಗುವ ಸಾಧ್ಯತೆ ಇದೆ. ಡ್ಯಾಂನಲ್ಲಿ ಇರುವ ನೀರಿನಲ್ಲಿ 3 TMC ನೀರಷ್ಟೆ ಬಳಕೆಗೆ ಸಾಧ್ಯವಾಗಿದ್ದು, ಡೆಡ್ ಸ್ಟೋರೇಜ್ ಮಟ್ಟ ನೀರು ತಲುಪಿದರೆ ನೀರು ಪೂರೈಕೆ ಸ್ಥಗಿತವಾಗುವ ಆತಂಕ ಎದುರಾಗಿದೆ.

ಕುಡಿಯುವ ನೀರಿಗೆ ಆಹಾಕಾರವಲ್ಲದೇ ರೈತರ ಬೆಳೆಗಳಿಗೂ ನೀರು ಆಹಾಕಾರ ಆಗುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ನೀರಾವರಿ ಇಲಾಖಾಧಿಕಾರಿಗಳು‌ ವರದಿ ನೀಡಿದ್ದಾರೆ.

Leave a Reply

Your email address will not be published. Required fields are marked *