ತಡರಾತ್ರಿ 8 ಗಂಟೆ ಸಮಯದಲ್ಲಿ ಹಾಲು ತೆಗೆದುಕೊಂಡು ಮನಗೆ ಬರುವ ಸಮಯದಲ್ಲಿ, ಮಹಿಳೆಯನ್ನ ಹಿಂಬಾಲಿಸಿ ಬೈಕ್ ನಲ್ಲಿ ಬಂದ ಸರಗಳ್ಳ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾನೆ.
ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಹಾಲು ತಗೆದುಕೊಂಡು ವಾಪಸ್ ಮನೆಗೆ ಬರುವಾಗ ಮಹಿಳೆಯ ಮಾಂಗಲ್ಯಸರ ಸರಗಳ್ಳನ ಪಾಲಾಗಿದೆ
ನಗರದ ಶಾಂತಿನಗರದ ನಿವಾಸಿ ನಿರ್ಮಲ, ತನ್ನನ್ನೇ ಹಿಂಬಾಲಿಸಿ ಕೊಂಡು ಬರುತ್ತಿರುವ ಬೈಕ್ ಸವಾರರನ್ನ ಗಮನಿಸಿದ ಆಕೆ ಸರವನ್ನ ಜೋಪಾನವಾಗಿ ಹಿಡಿದು ಕೊಂಡಿದ್ದಾರೆ, ರಸ್ತೆಯಲ್ಲಿ ಯಾರು ಇಲ್ಲದನ್ನ ಗಮಿಸಿದ ಆತ ಆಕೆಯ ಮಾಂಗಲ್ಯಸರಕ್ಕೆ ಕೈಹಾಕಿದ್ದಾನೆ.
ಮಹಿಳೆ ತನ್ನ ಸರವನ್ನ ಭದ್ರವಾಗಿ ಹಿಡಿದುಕೊಂಡಿದ್ದರಿಂದ ಮೂಕ್ಕಾಲು ಭಾಗದ ಸರ ಕಳ್ಳನ ಕೈ ಸೇರಿದೆ, ಮಾಂಗಲ್ಯಸರ ಎಗರಸಿ ಸರಗಳ್ಳ ಕ್ಷಣದಲ್ಲೇ ಪರಾರಿಯಾಗಿದ್ದಾನೆ, ಒಟ್ಟು ಒಂದು ಲಕ್ಷದ ಐವತ್ತು ಸಾವಿರ ರೂ. ಮೌಲ್ಯದ 38 ಗ್ರಾಂ ತೂಕದ ಮಾಂಗಲ್ಯಸರವಾಗಿದ್ದು , ನಿರ್ಮಲರ ಬಳಿ ಈಗ 12 ಗ್ರಾಂ ಸರ ಮಾತ್ರ ಇದೆ. 26 ಗ್ರಾಂ ಸರ ಕಳ್ಳನ ಪಾಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ತಾಲೂಕಿನಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಗಳ್ಳರ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕಿದೆ.
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…