ಮನೆ ಕಳ್ಳತನಕ್ಕೆ ಪಾರಿವಾಳಗಳ ಬಳಕೆ: ಆರೋಪಿ ಬಂಧನ: ಬಂಧಿತನಿಂದ 30 ಲಕ್ಷ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ಸ್ಕೂಟರ್ ವಶ

ಬೀಗ ಹಾಕಿರುವ ಮನೆಗಳನ್ನು ಗುರುತಿಸಲು ಪಾರಿವಾಳಗಳನ್ನು ಬಳಸಿ ಕಳ್ಳತನ ಮಾಡಿದ ಆರೋಪ ಹೊತ್ತಿರುವ ಮಂಜುನಾಥ್ ಎಂಬ 38 ವರ್ಷದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಅಪರಾಧ ಎಸಗುವ ಬಳಕೆಯಲ್ಲಿನ ಹಳೆಯ ತಂತ್ರಕ್ಕೆ ಇದು ಹೊಸ ತಿರುವು ಪಡೆದುಕೊಂಡಿದೆ. ಈ ಮಂಜುನಾಥ್ ಪಾರಿವಾಳಗಳನ್ನು ಸಾಕುತ್ತಿದ್ದನು. ಈ ಪಾರಿವಾಳಗಳಿಗೆ ಸಣ್ಣ ಟ್ರಾನ್ಸ್‌ಮಿಟರ್ ಸಾಧನಗಳಿಗೆ ಜೋಡಿಸಲಾದ ಸಣ್ಣ ಮಿನಿಕ್ಯಾಮೆರಾಗಳೊಂದಿಗೆ ಹೊಂದಿಸುತ್ತಾರೆ. ನಗರದಲ್ಲಿ 50ಕ್ಕೂ ಹೆಚ್ಚು ಮನೆಗಳ್ಳತನಕ್ಕೆ ಯೋಜನೆ ರೂಪಿಸಿದ್ದ ಎನ್ನಲಾಗಿದೆ.

ಬೆಂಗಳೂರಿನ ನಾಗರತ್‌ಪೇಟೆ ಮೂಲದ ಹೊಸೂರು ನಿವಾಸಿ ಪಾರಿವಾಳ ಮಂಜ ಅಲಿಯಾಸ್‌ ಮಂಜುನಾಥ್‌ ಸುಮಾರು 50 ಮನೆಗಳ್ಳತನದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಆತನಿಂದ 30 ಲಕ್ಷ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ಸ್ಕೂಟರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಜುನಾಥನ ವಿಶಿಷ್ಟ ತಂತ್ರವೆಂದರೆ ಬೀಗ ಹಾಕಿದ ಮನೆಗಳನ್ನು ಹುಡುಕುವಾಗ ಒಂದು ಅಥವಾ ಒಂದು ಜೋಡಿ ಪಾರಿವಾಳಗಳನ್ನು ಒಯ್ಯುವುದು.‌ ಪ್ರಾಥಮಿಕವಾಗಿ ಭದ್ರತಾ ಸಿಬ್ಬಂದಿ ಇಲ್ಲದ ಬಹುಮಹಡಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಪಾರಿವಾಳಗಳನ್ನು ಬಿಡುಗಡೆ ಮಾಡುತ್ತಾನೆ, ಅವು ಕಟ್ಟಡಗಳ ಮೇಲೆ ಹೋಗಿ ಕುಳಿತುಕೊಳ್ಳುತ್ತದೆ. ನಂತರ ಅವನು ಕಟ್ಟಡದ ಮೆಟ್ಟಿಲುಗಳನ್ನು ಏರುತ್ತಾನೆ ಮತ್ತು ಯಾರಾದರೂ ಅವನನ್ನು ಪ್ರಶ್ನಿಸಿದರೆ, ಅವನು ಪಾರಿವಾಳಗಳನ್ನು ತೋರಿಸತ್ತಾನೆ. ಪಾರಿವಾಳಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಳ್ಳುತ್ತಾನೆ. ಮನೆ ಹೊರಗಿನಿಂದ ಬೀಗ ಹಾಕಿರುವುದು ಕಂಡು ಬಂದರೆ ತಕ್ಷಣ ಕಳ್ಳನ ಕೈಚಳಕ ಶುರುವಾಗುತ್ತದೆ.

“ಕಳ್ಳ ಕಬ್ಬಿಣದ ರಾಡ್ ಬಳಸಿ ಮುಂಭಾಗದ ಬಾಗಿಲುಗಳನ್ನು ಒಡೆದು, ನಂತರ ಅದೇ ರಾಡ್ನಿಂದ ಅಲ್ಮೆರಾಗಳು ಅಥವಾ ಬೀರುಗಳನ್ನು ಮುರಿದು ಚಿನ್ನಾಭರಣಗಳು ಮತ್ತು ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ” ಎಂದು ಪೊಲೀಸರು ಹೇಳಿದರು.

ಮಂಜುನಾಥ್ ಹೊಸೂರಿನಲ್ಲಿ ಕದ್ದ ಬೆಲೆ ಬಾಳುವ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ಈ ಹಿಂದೆ ನಗರದಲ್ಲಿ ಬಂಧಿತನಾಗಿದ್ದರೂ ಜಾಮೀನಿನ ಮೇಲೆ ಹೊರಬಂದಾಗಲೆಲ್ಲಾ ಕಳ್ಳತನ ಮಾಡುತ್ತಲೇ ಇದ್ದ.

ಆತನ ಬಂಧನದೊಂದಿಗೆ ಸಿಟಿ ಮಾರ್ಕೆಟ್ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳನ್ನು ಭೇದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *