ಉತ್ತರ ಪ್ರದೇಶದ ಇಟಾಹ್ ಎಂಬಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಗಳ ಪ್ರೇಮ ಪ್ರಕರಣಕ್ಕೆ ಮನನೊಂದ ತಾಯಿಯೊಬ್ಬಳು ಮಗಳನ್ನು ಕೊಲ್ಲಲು ವ್ಯಕ್ತಿಯೊಬ್ಬನನ್ನು ನೇಮಿಸಿದ್ದಾಳೆ. ಆದರೆ, ಆ ಹಂತಕ ಮಗಳ ಬದಲು ತಾಯಿಯನ್ನೇ ಕೊಂದಿದ್ದಾನೆ.
ಇಲ್ಲಿ ಟ್ವಿಸ್ಟ್ ಏನೆಂದರೆ ಮಗಳು ಪ್ರೀತಿಸಿದವನಿಗೆ ಮಗಳನ್ನು ಕೊಲ್ಲಲು ತಾಯಿ ಸುಪಾರಿ ಕೊಟ್ಟಿದ್ದಾಳೆ. ಹೀಗಾಗಿ ಮಗಳ ಬದಲು ತಾಯಿಯನ್ನೇ ಕೊಂದಿದ್ದಾನೆ… ಮೃತಳ ಮಗಳು ಮತ್ತು ಆಕೆಯ ಪ್ರೇಮಿ ಕಮ್ ಕಿಲ್ಲರ್ ಸದ್ಯ ಪೊಲೀಸರ ವಶದಲ್ಲಿದ್ದಾರೆ.
ಕಳೆದ ಭಾನುವಾರ, ಇಟಾಹ್ನ ರಾಗಿ ಹೊಲದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಗೆ 42 ವರ್ಷ ವಯಸ್ಸಾಗಿತ್ತು. ಕೊಲೆಯಾದ ಎರಡನೇ ದಿನ ಮಹಿಳೆಯನ್ನು ರಮಾಕಾಂತ್ ಅವರ ಪತ್ನಿ ಅಲ್ಕಾ ಎಂದು ಗುರುತಿಸಲಾಗಿದೆ.
ಕಥೆ ಸಿನಿಮಾದಂತೆ ಕಂಡರೂ ವಾಸ್ತವ. ಕೆಲವು ತಿಂಗಳ ಹಿಂದೆ, ನಯಾಗಾಂವ್ ಪೊಲೀಸ್ ಠಾಣೆಯ ಅಲ್ಲಾಪುರ್ ನಿವಾಸಿ ಅಲ್ಕಾ ಅವರ ಅಪ್ರಾಪ್ತ ಮಗಳು ಅದೇ ಗ್ರಾಮದ ಅಖಿಲೇಶ್ ಜೊತೆ ಓಡಿಹೋಗಿದ್ದಳು. ಪೊಲೀಸರು ಆಕೆಯನ್ನು ವಶಪಡಿಸಿಕೊಂಡು ಆಕೆಯ ಮನೆಯವರಿಗೆ ಒಪ್ಪಿಸಿ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಅಲ್ಕಾ ತನ್ನ ಮಗಳನ್ನು ಅಕಾರಾಬಾದ್ ಸಿಕಂದರಪುರ ಖಾಸ್ ಪೊಲೀಸ್ ಠಾಣೆಯ ಕೈಮ್ಗಂಜ್ ಜಿಲ್ಲೆಯ ಫರೂಕಾಬಾದ್ನಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿದಳು. ಈ ಸ್ಥಳದ ನಿವಾಸಿ ಸುಭಾಷ್ ಎಂಬಾತನಿಗೆ ಅಲ್ಕಾ ಪರಿಚಯವಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್ಕುಮಾರ್ ಸಿಂಗ್ ಹೇಳಿದ್ದಾರೆ.
ನಂತರ, ಸುಭಾಷ್ ಅಲ್ಕಾ ಅವರ ಮಗಳೊಂದಿಗೆ ಸಂಬಂಧವನ್ನು ಬೆಳೆಸಿದ್ದಾನೆ. ಒಂದು ದಿನ, ಅವರು ಫೋನ್ನಲ್ಲಿ ಮಾತನಾಡುವುದನ್ನು ನೋಡಿ, ಹುಡುಗಿಯ ತಾಯಿಯ ಚಿಕ್ಕಪ್ಪ ಅಲ್ಕಾಗೆ ಮಾಹಿತಿ ನೀಡಿದರು ಮತ್ತು ಅವಳನ್ನು ಕರೆದುಕೊಂಡು ಹೋಗುವಂತೆ ಹೇಳಿದರು. ಆದರೆ, ಆ ಹುಡುಗಿಗೆ ಸುಭಾಷ್ ಜೊತೆ ಸಂಬಂಧವಿದೆ ಎಂಬುದು ಅಲ್ಲಿಯವರೆಗೆ ಯಾರಿಗೂ ತಿಳಿದಿರಲಿಲ್ಲ.
ಸುಭಾಷ್ ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ವಾಸ ಅನುಭವಿಸಿದ್ದಾನೆ. ತಾಯಿ ಅಲ್ಕಾ ಅಕ್ಟೋಬರ್ 27 ರಂದು ಸುಭಾಷ್ಗೆ ಕರೆ ಮಾಡಿ ಮಗಳನ್ನು ಕೊಲ್ಲಲು 50,000 ರೂ. ಕೊಡುತ್ತಾಳೆ. ಈ ವಿಚಾರ ಮಗಳಿಗೆ ತಿಳಿಯುತ್ತದೆ. ಆಗ ತನ್ನ ತಾಯಿಯನ್ನು ಕೊಂದರೆ ನಿನ್ನನ್ನು ಮದುವೆಯಾಗುತ್ತೇನೆಂದು ಸುಭಾಷ್ ಚಂದ್ರನಿಗೆ ಭರವಸೆ ನೀಡುತ್ತಾಳೆ. ಆದರೆ, ಮಗಳ ಬದಲಿಗೆ ಸುಫಾರಿಕೊಟ್ಟ ತಾಯಿಯನ್ನೇ ಹಂತಕ ಕೊಲ್ಲುತ್ತಾನೆ. ಸದ್ಯ ಕೊಲೆ ಆರೋಪಿ ಪೊಲೀಸರ ವಶದಲ್ಲಿದ್ದಾನೆ….
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…