ಮಕ್ಕಳು ತಮ್ಮ ಸೃಜನಶೀಲ ಪ್ರತಿಭೆ ಹೊರಹಾಕಲು ವಸ್ತುಪ್ರದರ್ಶನ ಅತ್ಯುತ್ತಮ ವೇದಿಕೆ: ಧನಂಜಯ

ಶಾಲೆಗಳಲ್ಲಿ ಏರ್ಪಡಿಸುವ ವಸ್ತು ಪ್ರದರ್ಶನಗಳು ಮಕ್ಕಳು ತಮ್ಮ ಸೃಜನಶೀಲ ಪ್ರತಿಭೆಯನ್ನು ಹೊರಹಾಕಲು ಒಳ್ಳೆಯ ವೇದಿಕೆಯಾಗಿರುತ್ತವೆ ಎಂದು ನಂದಿ ಹಿಲ್ ವೂ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿ ಧನಂಜಯ ಹೇಳಿದರು.

ತಾಲೂಕಿನ ತೂಬಗೆರೆ ಹೋಬಳಿಯ ದುರ್ಗೇನಹಳ್ಳಿ ಬಳಿ‌ ಇರುವ ನಂದಿ ಹಿಲ್ ವೂ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಏರ್ಪಡಿಸಲಾಗಿದ್ದ ಗಣಿತ, ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ವಸ್ತುಪ್ರದರ್ಶನಗಳು ಸಹಕಾರಿಯಾಗಲಿವೆ ಎಂದರು.

ಪಠ್ಯದಲ್ಲಿರುವ ಬರುವ ವಿಷಯಗಳನ್ನು ಪ್ರಾಯೋಗಿಕವಾಗಿ ವಸ್ತು ಪ್ರದರ್ಶನದಲ್ಲಿ ತೋರಿಸಬಹುದು. ಮಕ್ಕಳು ವಸ್ತು ಪ್ರದರ್ಶನದಲ್ಲಿ ಉತ್ಸುಹಕರಾಗಿ ಪಾಲ್ಗೊಳ್ಳುವುದರಿಂದ ಪಠ್ಯದಲ್ಲಿರುವ ವಿಷಯಗಳು ಚೆನ್ನಾಗಿ ಮನದಟ್ಟಾಗುತ್ತವೆ ಎಂದರು.

ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿಗಳಿಂದ 8ನೇ ತಗತಿಯ ಮಕ್ಕಳು ಸುತ್ತಾಮುತ್ತ ಸಿಗುವ ಕಚ್ಛಾ ವಸ್ತುಗಳನ್ನ ಬಳಸಿ ತಮ್ಮ ಪುಟ್ಟ ಪುಟ್ಟ ಕೈಗಳಿಂದ ಗಣಿತ, ಕಲಾ ಮತ್ತು ವಿಜ್ಞಾನ ಮಾದರಿಗಳನ್ನು ತಯಾರಿಸಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ ಎಂದು ಶಾಲೆಯ ಪ್ರಾಂಶುಪಾಲರಾದ ಭಾವನಾ ಹೇಳಿದರು.

ವಸ್ತುಪ್ರದರ್ಶನದಲ್ಲಿ ರಾಷ್ಟ್ರೀಯ ಲಾಂಛನ, ಮಳೆ ನೀರು ಕೊಯ್ಲು, ವಿವಿಧ ರೀತಿಯ ಮನೆಗಳ ಕಲಾಕೃತಿ, ಮನುಷ್ಯನ ದೇಹ, ಮೆದುಳು, ಹೃದಯ, ಕಣ್ಣು, ವಿವಿಧ ಜೀವಿಗಳ ಕಲಾಕೃತಿಗಳು‌ ಸೇರಿದಂತೆ ಗಣಿತ, ಕಲಾ ಮತ್ತು ವಿಜ್ಞಾನ ಮಾದರಿಗಳು‌ ನೋಡುಗರ ಕಣ್ಮನ‌ ಸೆಳೆಯಿತು.

ಈ ವೇಳೆ ಶಾಲಾ ಅಧ್ಯಕ್ಷರಾದ ವರಲಕ್ಷ್ಮಿ, ಪೋಷಕರು ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *