ಭೀಕರ ಅಪಘಾತ: ರಸ್ತೆ ಬದಿಯಲ್ಲಿ ನಿಂತಿದ್ದ ಸ್ಟೇಷನರಿ ಟ್ರಕ್ ಗೆ ಡಿಕ್ಕಿ‌ ಹೊಡೆದ ಕಾರು: ಆರು‌ ಮಂದಿ‌ ಸ್ಥಳದಲ್ಲೇ ಸಾವು

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಡದ ಪಟ್ಟಣದ ದುರ್ಗಾಪುರ ಸ್ಟೇಜ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪುರುಷರು, ಮಹಿಳೆ ಮತ್ತು ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರು ವಿಜಯವಾಡಕ್ಕೆ ತೆರಳುತ್ತಿದ್ದಾಗ ಮುಂಜಾನೆ ಈ ಘಟನೆ ನಡೆದಿದೆ.  ಕೆಟ್ಟು ನಿಂತಿದ್ದ ಲಾರಿ ಹೆದ್ದಾರಿ ಬದಿ ನಿಂತಿತ್ತು. ಮೂರು ದಿನಗಳ ಹಿಂದೆಯಷ್ಟೇ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದು ಯುವ ಜೋಡಿಯೊಂದು ಪ್ರಾಣ ಕಳೆದುಕೊಂಡಿದ್ದರು. ಇದೀಗ ಕೋಡದ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯ ರೀತಿಯಲ್ಲೇ ಈ ದುರ್ಘಟನೆ ನಡೆದಿದೆ.

ಬೇಸಿಗೆ ಹಿನ್ನೆಲೆ ರಾತ್ರಿಯ ಪ್ರಯಾಣವು ಹೆಚ್ಚಾಗುತ್ತಿದೆ, ರಸ್ತೆಯಲ್ಲಿ ನಿಲ್ಲುವ ವಾಹನಗಳು ಗಮನಿಸದೇ ಇರುವುದರಿಂದ ಅಪಘಾತಗಳ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತಿವೆ.

Leave a Reply

Your email address will not be published. Required fields are marked *