ಭಾರತದಲ್ಲಿ ಮರುಬಳಕೆ ಮಾಡಿದ ಪಾಲಿಮರ್‌ಗಳನ್ನು ಬಳಸಿದ ಪ್ಯಾಕೇಜಿಂಗ್ ಪರಿಚಯಿಸಿದ ಟೆಟ್ರಾ ಪ್ಯಾಕ್

ಬೆಂಗಳೂರು: ಪ್ಲಾಸ್ಟಿಕ್‌ನನ್ನು ಮರುಬಳಕೆ ಮಾಡುವತ್ತ ಗಮನಾರ್ಹ ಹೆಜ್ಜೆ ಇಟ್ಟಿರುವ ಟೆಟ್ರಾಪ್ಯಾಕ್‌, ತನ್ನೆಲ್ಲಾ ಪ್ಯಾಕೇಜಿಂಗ್‌ನನ್ನು ಮರುಬಳಕೆ ಮಾಡಿದ ಪಾಲಿಮರ್‌ ಒಳಗೊಂಡ ಟೆಟ್ರಾಪ್ಯಾಕ್‌ನನ್ನು ಪರಿಚಯಿಸಿದೆ.

ಆಹಾರ ಮತ್ತು ಪಾನೀಯ ಪ್ಯಾಕೇಜಿಂಗ್‌ ಉದ್ಯಮದಲ್ಲಿ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಬಳಕೆ ಮಾಡಿದ ಮೊದಲ ಸಂಸ್ಥೆಯಾಗಿದೆ. ಇದರ ಕಾರ್ಟನ್ ಪ್ಯಾಕೇಜ್‌ಗಳಲ್ಲಿ ಮರುಬಳಕೆ ಮಾಡಿದ ಪಾಲಿಮರ್‌ಗಳಿದ್ದು, ಇದನ್ನು ಸುಸ್ಥಿರತೆ ಪ್ರಮಾಣೀಕರಣ ಸಿಸ್ಟಮ್‌ ಆಗಿರುವ ಐಎಸ್‌ಸಿಸಿ (ಅಂತಾರಾಷ್ಟ್ರೀಯ ಪರಿಸರ ಸ್ನೇಹಿ ಮತ್ತು ಕಾರ್ಬನ್ ಪ್ರಮಾಣೀಕರಣ) ಪ್ರಮಾಣೀಕರಿಸಿದೆ. ಪ್ಯಾಕೇಜಿಂಗ್‌ನಲ್ಲಿ ಶೇ. 5ರಷ್ಟು ಪ್ರಮಾಣಿತ ಮರುಬಳಕೆ ಮಾಡಿದ ಪಾಲಿಮರ್‌ ಇರಲಿದೆ. ಇದನ್ನು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮ 2022 ರ ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಿಗದಿಪಡಿಸಿದ್ದು, ಇದು ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಪರಿಸರ ರಕ್ಷಣೆಯಲ್ಲಿ ಟೆಟ್ರಾ ಪ್ಯಾಕ್ ಬದ್ಧತೆ ಹೊಂದಿದ್ದು, ಪಳೆಯುಳಿಕೆ ಆಧರಿತ ಸಂಪನ್ಮೂಲಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಸಾಮಗ್ರಿಗಳನ್ನು ಮರುಬಳಕೆ ಮಾಡಿಕೊಳ್ಳುವುದರ ಮೇಲೆ ಇದು ಹೆಚ್ಚು ಗಮನ ಕೇಂದ್ರೀಕರಿಸಿದೆ. ಇದರ ಜೊತೆಗೆ, ಕಚ್ಚಾ ಸಾಮಗ್ರಿಗಳನ್ನು ಖರೀದಿ ಮಾಡುವಲ್ಲಿ ಜವಾಬ್ದಾರಿಯುತವಾಗಿ ಟೆಟ್ರಾ ಪ್ಯಾಕ್ ವರ್ತಿಸುತ್ತದೆ. ಮರುಬಳಕೆಯನ್ನು ಹೆಚ್ಚಿಸಲು ಮತ್ತು ಕಸವನ್ನು ಕಡಿಮೆ ಮಾಡಲು ಪ್ಯಾಕೇಜ್‌ಗಳನ್ನು ವಿನ್ಯಾಸ ಮಾಡುವುದು ಮತ್ತು ಪರಿಣಾಮಕಾರಿಯಾಗಿ ಕಲೆಕ್ಷನ್ ಮತ್ತು ರಿಸೈಕ್ಲಿಂಗ್‌ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಉತ್ತಮ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಟೆಟ್ರಾ ಪ್ಯಾಕ್ ಬದ್ಧವಾಗಿದೆ.

ಟೆಟ್ರಾ ಪ್ಯಾಕ್‌ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಕ್ಯಾಸಿಯೋ ಸೈಮೋಸ್ ಮಾತನಾಡಿ, “ಭಾರತದಲ್ಲಿ ಶೇ.5ರಷ್ಟು ಪ್ರಮಾಣಿತ ಮರುಬಳಕೆ ಮಾಡಿದ ಪಾಲಿಮರ್‌ಅನ್ನು ಹೊಂದಿರುವ ಪ್ಯಾಕೇಜಿಂಗ್ ಸಾಮಗ್ರಿಯನ್ನು ಪರಿಚಯಿಸುವುದರಲ್ಲಿ ನಾವು ಪ್ರಥಮ ಹೆಜ್ಜೆ ಇಟ್ಟಿದ್ದೇವೆ. ಈ ಮರುಬಳಕೆ ಮಾಡಿದ ಕಂಟೆಂಟ್ ಅನ್ನು ಭಾರತದಿಂದಲೇ ಪಡೆಯಲಾಗಿದೆ. ಪುಣೆಯಲ್ಲಿ ಚಕನ್‌ನಲ್ಲಿರುವ ಐಎಸ್‌ಸಿಸಿ ಪ್ರಮಾಣಿತ ಫ್ಯಾಕ್ಟರಿಯಲ್ಲಿ ಪ್ಯಾಕೇಜಿಂಗ್ ಸಾಮಗ್ರಿಯನ್ನು ತಯಾರಿಸಲಾಗಿದೆ.

ಸರ್ಕ್ಯುಲಾರಿಟಿಯನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಬದ್ಧತೆಯನ್ನು ನಾವು ಮೆಚ್ಚುತ್ತೇವೆ. 2025 ರಲ್ಲೇ ಈ ನಿಯಮಾವಳಿಯನ್ನು ಪರಿಚಯಿಸುವ ಮೂಲಕ ವಿಶ್ವದ ಪ್ರಥಮ ದೇಶ ಭಾರತ ಆಗುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಇನ್ನಷ್ಟು ಸರ್ಕ್ಯುಲರ್ ಪರಿಹಾರಕ್ಕೆ ಪರಿವರ್ತನೆಯಾಗುವುದಕ್ಕೆ ನಮ್ಮೆಲ್ಲರಿಗೆ ಒಂದು ಅವಕಾಶವಾಗಿದೆ ಎಂದರು. ಐಎಸ್‌ಸಿಸಿ (ಇಂಟರ್ನ್ಯಾಷನಲ್ ಸಸ್ಟೇನಬಿಲಿಟಿ & ಕಾರ್ಬನ್ ಸರ್ಟಿಫಿಕೇಶನ್) ಸರ್ಟಿಫೈಡ್ ಮರುಬಳಕೆ ಮಾಡಿದ ಪಾಲಿಮರ್‌ಗಳನ್ನು ಖರೀದಿ ಮಾಡಿ, ಐಎಸ್‌ಸಿಸಿ ಮಾಸ್ ಬ್ಯಾಲೆನ್ಸ್ ಅಟ್ರಿಬ್ಯುಶನ್ ಮೆಥಡ್‌ಗೆ ಅನುಗುಣವಾಗಿ ನಿಯೋಜಿಸಲಾಗುತ್ತದೆ. ಕೆಮಿಕಲ್ ರಿಸೈಕ್ಲಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಿದ ಮತ್ತು ಮರುಬಳಕೆ ಮಾಡಲಾಗದ ಸಾಮಗ್ರಿಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಅಲ್ಲದೆ, ಟೆಟ್ರಾ ಪ್ಯಾಕ್ ಪೂರೈಕೆ ಸರಣಿಯಾದ್ಯಂತ ಮರುಬಳಕೆ ಮಾಡಿದ ಸಾಮಗ್ರಿಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಈ ರಾಸಾಯನಿಕವಾಗಿ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ಗಳು ವರ್ಜಿನ್ ಪಾಲಿಮರ್‌ಗಳಂತೆಯೇ ಜಾಗತಿಕ ಆಹಾರ ಸಂಪರ್ಕ ನಿಯಮಗಳನ್ನು ಅನುಸರಿಸುತ್ತವೆ. ಗುಣಮಟ್ಟದ ದೃಷ್ಟಿಯಿಂದ, ರಾಸಾಯನಿಕವನ್ನು ಬಳಸಿ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ಗಳು ಪಳೆಯುಳಿಕೆ ಆಧರಿತ ಪ್ಲಾಸ್ಟಿಕ್‌ಗಳಿಗೆ ಸಮಾನವಾಗಿವೆ.

ಮರುಬಳಕೆ ಮಾಡಿದ ಸಾಮಗ್ರಿಯನ್ನು ಬಳಸಿದರೆ, ಮರುಬಳಕೆ ದರವನ್ನು ಹೆಚ್ಚಳ ಮಾಡಬಹುದು ಮತ್ತು ಮರುಬಳಕೆಯನ್ನು ಹೆಚ್ಚು ಆರ್ಥಿಕವಾಗಿ ಅನುಕೂಲಕರವನ್ನಾಗಿಸಬಹುದು. ಮರುಬಳಕೆ ಮಾಡಿದ ಕಂಟೆಂಟ್ ಭಾರತ ಸೇರಿದಂತೆ ವಿಶ್ವದ ಎಲ್ಲೆಡೆ ಕಡ್ಡಾಯವಾಗಿದ್ದು, ಉತ್ಪಾದಕರು ಮರುಬಳಕೆ ಮಾಡಿದ ಸಾಮಗ್ರಿಯನ್ನು ಖರೀದಿ ಮಾಡುವುದಕ್ಕೆ ಪ್ರೋತ್ಸಾಹಿಸುತ್ತದೆ. ಇದರಿಂದ, ಬೇಡಿಕೆ ಹೆಚ್ಚಳವಾಗುತ್ತದೆ ಮತ್ತು ಈ ಮೂಲಕ ವಿಸ್ತರಿಸಿದ ಆಫರ್ ಅನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳದರು.

Ramesh Babu

Journalist

Recent Posts

ಭಾರೀ ಸಿಡಿಲಿಗೆ ಎರಡು ಸೀಮೆ ಹಸುಗಳ ಸಾವು

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಕಾವಲಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ಮಂಗಳವಾರ ಸಂಜೆ ಸಿಡಿಲು ಬಡಿದ ಪರಿಣಾಮ ಎರಡು…

5 hours ago

56,432 ಹುದ್ದೆಗಳ ನೇರ ನೇಮಕಾತಿಗಾಗಿ ತುರ್ತು ಕ್ರಮ- ಸಿಎಂ ಸಿದ್ದರಾಮಯ್ಯ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ನೀಡುವ ವಿಚಾರದಲ್ಲಿ ನಮ್ಮ ಸರ್ಕಾರವು ಕೈಗೊಂಡಿರುವ ಮಹತ್ವದ ನಿರ್ಧಾರದ ಅನ್ವಯ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೆ…

6 hours ago

ಫ್ಯಾಶನ್ ಡಿಸೈನಿಂಗ್ ಉಚಿತ ತರಬೇತಿ

ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ ನಾಲ್ಕು ವಾರಗಳ ಫ್ಯಾಷನ್ ಡಿಸೈನ್/ಬ್ಯೂಟಿಷಿಯನ್ ಕೌಶಲ್ಯ ಆಧಾರಿತ ಉದ್ಯಮಶೀಲತಾ ಕಾರ್ಯಕ್ರಮವನ್ನು ಮೇ ತಿಂಗಳ ಮೊದಲನೇ…

7 hours ago

ಡಿಕ್ರಾಸ್-ಹಳೇ ಬಸ್ ನಿಲ್ದಾಣ ರಸ್ತೆಯಲ್ಲಿ ಬೈಕ್ ಅಪಘಾತದಲ್ಲಿ ಸವಾರ ದುರ್ಮರಣ ಪ್ರಕರಣ: ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಿಂತಿದ್ದ ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿರುವ ಘಟನೆ ಏ.27ರಂದು ದೊಡ್ಡಬಳ್ಳಾಪುರ…

17 hours ago

ನಿಂತಿದ್ದ ಟಾಟಾ ಏಸ್ ಗೆ ಬೈಕ್ ಡಿಕ್ಕಿ: ಹೆಲ್ಮೆಟ್ ಧರಿಸದ ಕಾರಣ ಬೈಕ್ ಸವಾರ ದುರ್ಮರಣ

ನಿಂತಿದ್ದ ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿರುವ ಘಟನೆ ಇಂದು ಬೆಳಗ್ಗೆ…

2 days ago

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರ ಸಾವು ಪ್ರಕರಣ: ಕತ್ತಲಲ್ಲಿ ಪ್ರಯಾಣಿಸುತ್ತಿದ್ದವರ ಬದುಕಲ್ಲಿ ಶಾಶ್ವತ ಕತ್ತಲು ಮೂಡಿಸಿದ ಜವರಾಯ: ಎಚ್ಚೆತ್ತ ನಗರಸಭೆ ಬೀದಿ ದೀಪ ಅಳವಡಿಕೆ

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದರು. ರಸ್ತೆ ಇಕ್ಕೆಲಗಳಲ್ಲಿ ಬೀದಿ ದೀಪಗಳು ಬೆಳಗದ…

2 days ago