Categories: ವೈರಲ್

ಬ್ಯಾಟ್ ಹಿಡಿದು ಬೌಂಡರಿ, ಸಿಕ್ಸರ್ ಅಭ್ಯಾಸ, ಕ್ರಿಕೆಟಿಂಗ್ ಶಾಟ್ಸ್ ಅಭ್ಯಾಸದ ನೆಪದಲ್ಲಿ ಬೈಕ್ ಕಳ್ಳತನಕ್ಕೆ ಯತ್ನ: ಸಿಸಿಟಿವಿ‌ ನೋಡಿ‌ ಅಲ್ಲಿಂದ ಪರಾರಿಯಾದ ಕಳ್ಳ: ಅಸಲಿಗೆ ನೆಟ್ಟಿಗರು ಈ ವಿಡಿಯೋ‌ ನೋಡಿ ಏನಂದ್ರು..?

ಅಪರಾಧ ಕೃತ್ಯಗಳಲ್ಲಿ‌ ಭಾಗಿಯಾಗಲೂ ಹೊಸ ಹೊಸ ಮಾರ್ಗ, ತಂತ್ರಜ್ಞಾನ, ಐಡಿಯಾ, ಕಸರತ್ತು, ಆಕ್ಟಿಂಗ್ ಸೇರಿದಂತೆ ತರಹೇವಾರಿ ಬುದ್ದಿ ಉಪಯೋಗಿಸಲಾಗುತ್ತದೆ.

ಅದೇ ರೀತಿ ಇಲ್ಲೊಬ್ಬ ಆಸಾಮಿ ಬೈಕ್ ಕಳ್ಳತನಕ್ಕೆ ಯಾರೂ ಊಹಿಸಲು ಸಾಧ್ಯವಾಗದ ರೀತಿ ಆ್ಯಕ್ಚಿಂಗ್ ಜೊತೆಗೆ ಐಡಿಯಾ ಉಪಯೋಗಿಸಿದ್ದಾನೆ. ಆದರೆ, ಇನ್ನೇನು ಬೈಕ್ ಕಳ್ಳತನ ಮಾಡಬೇಕು ಅನ್ನುವಷ್ಟರಲ್ಲೆ ಸಿಸಿಟಿವಿಯಿಂದ ಎಲ್ಲಾ ಪ್ರಯತ್ನ ವಿಫಲಗೊಂಡಿದ್ದರಿಂದ ಬ್ಯಾಟ್ ನಿಂದ ಮುಖ‌ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕಳ್ಳನ‌ ಈ ಎಲ್ಲಾ ವೈಯ್ಯಾರಗಳು ಸಿಸಿಟಿಯಲ್ಲಿ ರೇಕಾರ್ಡ್ ಆಗಿದ್ದು, ಸದ್ಯ ವಿಡಿಯೋ ಭಾರಿ ವೈರಲ್ ಆಗಿದೆ.

ಮೊದಮೊದಲು ಈ‌ ವಿಡಿಯೋ‌ ನೋಡಿದಾಗ ಆ ವ್ಯಕ್ತಿ ಬ್ಯಾಟ್ ಹಿಡಿದು ಬೌಂಡರಿ, ಸಿಕ್ಸರ್ ಅಭ್ಯಾಸ, ಕ್ರಿಕೆಟಿಂಗ್ ಶಾಟ್ಸ್ ಅಭ್ಯಾಸ ಮಾಡುತ್ತಿರುವುದು ನೋಡಿದರೆ ಮುಂದೊಂದು ದಿನ ಉತ್ತಮ ಕ್ರಿಕೆಟಿಗನಾಗುತ್ತಾನೆ ಅನ್ನೋ ಆಲೋಚನೆಗಳು ಎಲ್ಲರ ಮನಸ್ಸಿನಲ್ಲಿ ಮೂಡುವುದು ಸಹಜ.

ಈತನ ಕ್ರಿಕೆಟ್ ಆಸಕ್ತಿಯನ್ನು ಕೊಂಡಾಡಿದರೂ ಅಚ್ಚರಿ ಇಲ್ಲ. ಆದರೆ, ಇವೆಲ್ಲವೂ ಕೇವಲ ನಟನೆಯಾಗಿತ್ತು. ಅಸಲಿಗ ಈತ ಬೈಕ್ ಕಳ್ಳತನಕ್ಕೆ ಬಂದಿದ್ದಾನೆ. ಅದೇ ಕ್ರಿಕೆಟ್ ಆಟದಲ್ಲೇ ಹ್ಯಾಂಡಲ್ ಲಾಕ್ ಚೆಕ್ ಮಾಡಿದ್ದಾನೆ. ಇನ್ನೇನು ಬೈಕ್ ಕಳ್ಳತನ ಮಾಡಬೇಕು ಅನ್ನುವಷ್ಟರಲ್ಲಿ ಸಿಸಿಟಿವಿ ಕ್ಯಾಮೆರಾ ನೋಡಿ ಅರ್ಧಕ್ಕೆ ಕೈಬಿಟ್ಟ ಸಿಸಿಟಿವಿಗೆ ತನ್ನ ಮುಖ ಕಾಣಿಸಬಾರದು ಎಂದು ಬ್ಯಾಟ್ ನಿಂದ ಮುಖ‌ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು  ಕಮೆಂಟ್ ಸಹ ಮಾಡಿದ್ದಾರೆ. ಇದೇ ವೇಳೆ ಕೆಲವರು ಇದು ನಕಲಿ ಎಂದು ಪ್ರತಿಕ್ರಿಯಿಸಿದ್ದಾರೆ. ವೈರಲ್ ವಿಡಿಯೋಗಾಗಿ ಮಾಡಿದ ನಕಲಿ ನಾಟಕ ಎಂದಿದ್ದಾರೆ. ನಕಲಿ ಮಾಡುವಾಗಲು ಕೆಲ ತಪ್ಪುಗಳನ್ನು ಮಾಡಿದ್ದಾರೆ. ಈ ರೀತಿ ಕಪಟ ವಿಡಿಯೋಗಳಿಗೆ ಮಾರುಹೋಗಬೇಡಿ ಎಂದು ಎಚ್ಚರಿಸಿದ್ದಾರೆ. ಮತ್ತೆ ಕೆಲವರು ಕಳಪೆ ನಾಯಕತ್ವ ಎಂದು ಕಮೆಂಟ್ ಮಾಡಿದ್ದಾರೆ. ಬ್ಯಾಟಿಂಗ್ ಕಳ್ಳ ಎಂದು ಹೆಸರಿಟ್ಟಿದ್ದಾರೆ.

Ramesh Babu

Journalist

Recent Posts

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

1 day ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

2 days ago

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

2 days ago

ರಕ್ಷಾ ಬಂಧನ ಮತ್ತು ಮದರ್ ತೆರೇಸಾ

ಮದರ್‌ ತೆರೇಸಾ - ಆಗಸ್ಟ್ 26, 1910..... ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ…

2 days ago

ರೈತಪರ ಯೋಜನೆ : ವಿಬಿ-ಜಿ ರಾಮ್ ಜಿ ಯೋಜನೆ

ಚಿಕ್ಕನಾಯಕನಹಳ್ಳಿ: ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜುಲೈ.1 ರಿಂದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)…

2 days ago

ಮೂರು ತಾಲೂಕು ಬರದ ಪಟ್ಟಿಗೆ; ದೊಡ್ಡಬಳ್ಳಾಪುರಕ್ಕೆ ವಿನಾಯಿತಿ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

3 days ago