
ತೆಲಂಗಾಣದ ಶಾದ್ನಗರ ಪ್ರದೇಶದಲ್ಲಿ ತಾಯಿಯೊಬ್ಬರು ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ನಂದಿಗಾಮದಲ್ಲಿ ಎದುರು ಬರುತ್ತಿದ್ದ ಆರ್ಟಿಸಿ ಬಸ್ ಡಿಕ್ಕಿ ಹೊಡೆದು ತಾಯಿ ಮತ್ತು ಆಕೆಯ ಒಬ್ಬ ಮಗ ಸಾವನ್ನಪ್ಪಿದ್ದು, ಮತ್ತೊಬ್ಬ ಮಗನಿಗೆ ಗಂಭೀರವಾಗಿ ಗಾಯಗಳಾಗಿವೆ.
ಮೃತರನ್ನು ಚಂದ್ರಯ್ಯನ ಗುಟ್ಟಾ ನಿವಾಸಿಗಳಾದ ಹಾಜಿರಾ ಬೇಗಂ (35) ಮತ್ತು ಅಬ್ದುಲ್ ರಹಮಾನ್ (12) ಎಂದು ಗುರುತಿಸಲಾಗಿದೆ.