ಬೈಕ್ ಕಳ್ಳತನ ಮಾಡೋದ್ರಲ್ಲಿ ಸೆಂಚುರಿ ಬಾರಿಸಿದ ಖದೀಮ. ಮೂರು ವರ್ಷದಲ್ಲಿ ನೂರು ಬೈಕ್ ಕಳ್ಳತನ ಮಾಡಿದ ಸೆಂಚುರಿ ಸ್ಟಾರ್ ಕಳ್ಳನ ಆಂಧ್ರದ ಬಂಗಾರುಪಾಳ್ಯಂನ ನಿವಾಸಿ ಪ್ರಸಾದ್ ಬಾಬು ಎಂಬಾತನನ್ನು ಕೆ.ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.
ದುಬಾರಿ ಬೆಲೆಯ ಬೈಕ್ ಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಡೈಲಿ ಸಂಜೆ ಬಸ್ ನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಆರೋಪಿ, ಕೆ.ಆರ್ ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್ ಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಲಾಗುತ್ತಿತ್ತು. ಬಂದ ದಿನವೇ ಬೈಕ್ ಕದ್ದು, ಅದೇ ಬೈಕ್ ನಲ್ಲಿ ಊರಿಗೆ ಎಸ್ಕೇಪ್ ಆಗುತ್ತಿದ್ದನಂತೆ.
ಕದ್ದ ಬೈಕ್ ಗಳನ್ನ 15-20 ಸಾವಿರಕ್ಕೆ ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದನಂತೆ. ಬಂದ ಹಣದಲ್ಲಿ ಮೋಜು ಮಸ್ತಿ ಮಾಡ್ತಿದ್ದ ಆರೋಪಿ. ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25 ಬೈಕ್ ಕದ್ದಿದ್ದ ಆರೋಪಿ. ಆರೋಪಿ ಬಳಿ 20 ರಾಯಲ್ ಎನ್ಫೀಲ್ಡ್ ಬೈಕ್, 30 ಫಲ್ಸರ್ ಬೈಕ್, 40 ಆಕ್ಸಿಸ್ ಹಾಗೂ ಇತರೆ ವಾಹನಗಳು ವಶಕ್ಕೆ ಪಡೆಯಲಾಗಿದೆ. ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.