
ಬೇಲಿ ಪೊದೆಯಲ್ಲಿ 17 ವರ್ಷದ ಬಾಲಕನ ಶವ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಾಜೋಗಹಳ್ಳಿಯ ರಾಜೇಶ್ವರಿ ಟೆಂಟ್ ಹಿಂಭಾಗದಲ್ಲಿ ನಡೆದಿದೆ.
ಮೃತ ಬಾಲಕ ಜಾಫರ್(17), ಎಂದು ತಿಳಿದು ಬಂದಿದೆ. ಮೃತ ಬಾಲಕ ವೆಲ್ಡಿಂಗ್ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.
ಇಂದು ರಾಜೇಶ್ವರಿ ಟೆಂಟ್ ಹಿಂಭಾಗದಲ್ಲಿನ ಮನೆಯೊಂದಕ್ಕೆ ಪೈಂಟ್ ಬಳಿಯುತ್ತಿದ್ದ ವೇಳೆ, ಬೇಲಿ ಪೊದೆಯೊಳಗೆ ತಲೆಯೊಂದು ಸ್ಥಳೀಯರಿಗೆ ಕಾಣಿಸಿದೆ, ಕೂಡಲೇ ಸ್ಥಳೀಯರು ಬಂದು ಪರಿಶೀಲನೆ ಮಾಡಿದಾಗ ಯುವಕನ ಶವ ಪತ್ತೆಯಾಗಿದೆ.
ಶವದ ಅರ್ಧ ಭಾಗವನ್ನ ನಾಯಿಗಳು ಕಚ್ಚಿ ತಿಂದ್ದಿರುವಂತೆ ಕಾಣುತ್ತಿದೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ಬಾಲಕ ಸಾವಿನ ಕಾರಣ ಬೆಳಕಿಗೆ ಬರಲಿದೆ.