ಬೆಳ್ಳಂಬೆಳಗ್ಗೆ ಎರಡು ಹಸು, ನಾಲ್ಕು ಮಂದಿಗೆ ಹುಚ್ಚು ನಾಯಿ ಕಡಿತ: ಗಾಯಾಳುಗಳು ಆಸ್ಪತ್ರೆಗೆ ದಾಖಲು: ಬೆಚ್ಚಿಬಿದ್ದ ಜನ

ಒಂದೇ ದಿನ, ಒಂದೇ ಊರಲ್ಲಿ ಎರಡು ಹಸು, ನಾಲ್ಕು ಮಂದಿಗೆ ಹುಚ್ಚು ನಾಯಿ ಕಚ್ಚಿ ಗಾಯಪಡಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತಪಸೀಹಳ್ಳಿ ಬಳಿ‌ ಇಂದು ಬೆಳಗ್ಗೆ ಸುಮಾರು 6 ಗಂಟೆಯಲ್ಲಿ ನಡೆದಿದೆ…

ಇಂದು ಬೆಳಗ್ಗೆ ತಪಸೀಹಳ್ಳಿ ಗೇಟ್ ಹಾಗೂ ತಪಸೀಹಳ್ಳಿ ಗ್ರಾಮದಲ್ಲಿದ್ದ ಹಸುಗಳು, ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಚ್ಚು ನಾಯಿ ಹಾವಳಿಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಕೂಡಲೇ ನಾಯಿಯನ್ನು ಸೆರೆಹಿಡಿಯುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದಾರೆ…

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….

ಹೆಚ್ಚಿನ‌ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….

Leave a Reply

Your email address will not be published. Required fields are marked *

error: Content is protected !!