ಬೆಳ್ಳಂಬೆಳಗ್ಗೆ ಅಪಘಾತ: ಕಲ್ಲಂಗಡಿ ಹಣ್ಣು ಹೊತ್ತ ಕ್ಯಾಂಟರ್ ಪಲ್ಟಿ: ಚಾಲಕನ ಜೀವ ರಕ್ಷಿಸಿದ ಪೊಲೀಸರು

ಕಲ್ಲಂಗಡಿ ಹಣ್ಣು ಹೊತ್ತ ಕ್ಯಾಂಟರ್ ಚಾಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ದಾಬಸ್ ಪೇಟೆ-ಹೊಸಕೋಟೆ ಹೆದ್ದಾರಿಯ ಮೇಷ್ಟ್ರು ಮನೆ ಕ್ರಾಸ್ ಬೈಪಾಸ್ ಬಳಿ ಇಂದು ಮುಂಜಾನೆ ಸುಮಾರು 5ಗಂಟೆಯಲ್ಲಿ ನಡೆದಿದೆ….

ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ವಾಹನದಿಂದ ಹೊರಬಾರದೇ ಚಿಂತಾಜನಕ‌ ಸ್ಥಿತಿಯಲ್ಲಿ ಸ್ಟೇರಿಂಗ್ ನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಚಾಲಕನನ್ನು ರಕ್ಷಣೆ ಮಾಡಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ….

ಸದ್ಯ ಗಾಯಾಳುವಿನ ಹೆಸರು, ವಿಳಾಸ, ವಯಸ್ಸು ತಿಳಿದುಬಂದಿರುವುದಿಲ್ಲ. ಹೊಸಕೋಟೆಯಿಂದ ಕಲ್ಲಂಗಡಿ ಹಣ್ಣು ತುಂಬಿಕೊಂಡು ಹಾವೇರಿಗೆ ಹೋಗುತ್ತಿದ್ದ ಕ್ಯಾಂಟರ್ (ಈಚರ್) ಲಾರಿಯು ದೊಡ್ಡಬಳ್ಳಾಪುರದ ಮೇಷ್ಟ್ರು ಮನೆ ಕ್ರಾಸ್ ಬೈಪಾಸ್ ರಸ್ತೆಯಲ್ಲಿ ಘಟನೆ ನಡೆದಿದೆ..

ಕ್ಯಾಂಟರ್ ನಲ್ಲಿದ್ದ ಕಲ್ಲಂಗಡಿ ಹಣ್ಣುಗಳು ಹೆದ್ದಾರಿ‌ ಪಾಲಾಗಿವೆ..

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ….

Leave a Reply

Your email address will not be published. Required fields are marked *

error: Content is protected !!