ದೊಡ್ಡಬಳ್ಳಾಪುರ: ಆಯುಧ ಪೂಜೆ ಪ್ರಾರಂಭಕ್ಕೂ ಒಂದು ವಾರಗಳ ಕಾಲ ಗಗನ ಮುಖಿಯಾಗಿದ್ದ ಬೂದುಕುಂಬಳ ಕಾಯಿ ಒಂದು ಕೆ.ಜಿ.₹18 ರಿಂದ ₹20ಗಳವರೆಗೂ ಮಾರಾಟವಾಯಿತು.
ಒಂದು ಬೂದುಕುಂಬಳ ಕಾಯಿ ಸುಮಾರು 4 ರಿಂದ 7 ಕೆ.ಜಿವರೆಗೂ ತೂಗುತ್ತಿದ್ದವು. ಆದರೆ, ಹಬ್ಬ ಮುಕ್ತಾಯವಾದ ನಂತರ ನಗರದ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ರಾಶಿ ಗಟ್ಟಲೆ ಬೂದುಕುಂಬಳ ಕಾಯಿಗಳನ್ನು ರೈತರು ಸುರಿದು ಹೋಗಿರುವ ದೃಶ್ಯ ಸಾಮಾನ್ಯವಾಗಿದೆ.
ಬೆಲೆ ಇಲ್ಲದ ಸಮಯದಲ್ಲಿ ಟಾಮೊಟೋ ಹಣ್ಣು ಸುರಿಯುವಂತೆ ಈಗ ಬೂದುಕುಂಬಳ ಕಾಯಿಗಳನ್ನು ಸುರಿಯುವ ಸ್ಥಿತಿ ಬಂದಿದೆ.
‘ಆಯುಧ ಪೂಜೆ ಹೊರತು ಇತರೆ ಸಮಯದಲ್ಲಿ ಸಾಮಾನ್ಯವಾಗಿ ಬೂದುಕುಂಬಳ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ. ಹಬ್ಬದ ಸಮಯದ ಒಂದು ವಾರದ ವ್ಯಾಪಾರವನ್ನು ನಂಬಿ ರೈತರು ಎಕರೆಗಟ್ಟಲೆ ಪ್ರದೇಶದಲ್ಲಿ ಬೂದುಕುಂಬಳ ಕಾಯಿ ಬೆಳೆಯುವುದನ್ನು ನಿಲ್ಲಿಸಬೇಕು. ಕನಿಷ್ಟ ಪ್ರದೇಶದಲ್ಲಿ ಮಾತ್ರ ಹಬ್ಬದ ಸಮಯಕ್ಕಾಗಿ ಬೆಳೆಯಬೇಕು. ಕಾರ್ಮಿಕರ ಕೊರತೆ, ದುಬಾರಿ ರಸಗೊಬ್ಬರದ ಸಮಯದಲ್ಲಿ ರೈತರು ಬೆಳೆ ಬೆಳೆದೂ ಸಹ ಸಂಕಷ್ಟಕ್ಕೆ ಸಿಲುಕುಂತಾಗಬಾರದು’ ಎಂದು ಅಲಪನಹಳ್ಳಿ ಗ್ರಾಮದ ರೈತ ಹನುಮೇಗೌಡ ತಿಳಿಸಿದ್ದಾರೆ.
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 3:30ರ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ…
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಲಸಳ್ಳಿ ಗೇಟ್ ಸಮೀಪದ ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ದ್ವಿಚಕ್ರ…
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯಪಾನ ಮಾಡಲು ಅನುಮತಿ ನೀಡುವುದು ಕಾನೂನುಬಾಹಿರವಾಗಿದ್ದು, ತಪ್ಪಿದ್ದಲ್ಲಿ, ಪರವಾನಗಿ…
ದೇವನಹಳ್ಳಿ ತಾಲೂಕಿನ ರಾಣಿ ಕ್ರಾಸ್ ಬಳಿ ಡ್ಯೂಕ್ ಬೈಕ್ ಮತ್ತು ಕಂಟೈನರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ…
ಹೊಸಕೋಟೆ: ನೂತನ ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ…
ಬೆಂಗಳೂರು ಗ್ರಾಮಾಂತರ: ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಆಹಾರ ಮತ್ತು ನಾಗರಿಕ…