ದೊಡ್ಡಬಳ್ಳಾಪುರ: ಆಯುಧ ಪೂಜೆ ಪ್ರಾರಂಭಕ್ಕೂ ಒಂದು ವಾರಗಳ ಕಾಲ ಗಗನ ಮುಖಿಯಾಗಿದ್ದ ಬೂದುಕುಂಬಳ ಕಾಯಿ ಒಂದು ಕೆ.ಜಿ.₹18 ರಿಂದ ₹20ಗಳವರೆಗೂ ಮಾರಾಟವಾಯಿತು.
ಒಂದು ಬೂದುಕುಂಬಳ ಕಾಯಿ ಸುಮಾರು 4 ರಿಂದ 7 ಕೆ.ಜಿವರೆಗೂ ತೂಗುತ್ತಿದ್ದವು. ಆದರೆ, ಹಬ್ಬ ಮುಕ್ತಾಯವಾದ ನಂತರ ನಗರದ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ರಾಶಿ ಗಟ್ಟಲೆ ಬೂದುಕುಂಬಳ ಕಾಯಿಗಳನ್ನು ರೈತರು ಸುರಿದು ಹೋಗಿರುವ ದೃಶ್ಯ ಸಾಮಾನ್ಯವಾಗಿದೆ.
ಬೆಲೆ ಇಲ್ಲದ ಸಮಯದಲ್ಲಿ ಟಾಮೊಟೋ ಹಣ್ಣು ಸುರಿಯುವಂತೆ ಈಗ ಬೂದುಕುಂಬಳ ಕಾಯಿಗಳನ್ನು ಸುರಿಯುವ ಸ್ಥಿತಿ ಬಂದಿದೆ.
‘ಆಯುಧ ಪೂಜೆ ಹೊರತು ಇತರೆ ಸಮಯದಲ್ಲಿ ಸಾಮಾನ್ಯವಾಗಿ ಬೂದುಕುಂಬಳ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ. ಹಬ್ಬದ ಸಮಯದ ಒಂದು ವಾರದ ವ್ಯಾಪಾರವನ್ನು ನಂಬಿ ರೈತರು ಎಕರೆಗಟ್ಟಲೆ ಪ್ರದೇಶದಲ್ಲಿ ಬೂದುಕುಂಬಳ ಕಾಯಿ ಬೆಳೆಯುವುದನ್ನು ನಿಲ್ಲಿಸಬೇಕು. ಕನಿಷ್ಟ ಪ್ರದೇಶದಲ್ಲಿ ಮಾತ್ರ ಹಬ್ಬದ ಸಮಯಕ್ಕಾಗಿ ಬೆಳೆಯಬೇಕು. ಕಾರ್ಮಿಕರ ಕೊರತೆ, ದುಬಾರಿ ರಸಗೊಬ್ಬರದ ಸಮಯದಲ್ಲಿ ರೈತರು ಬೆಳೆ ಬೆಳೆದೂ ಸಹ ಸಂಕಷ್ಟಕ್ಕೆ ಸಿಲುಕುಂತಾಗಬಾರದು’ ಎಂದು ಅಲಪನಹಳ್ಳಿ ಗ್ರಾಮದ ರೈತ ಹನುಮೇಗೌಡ ತಿಳಿಸಿದ್ದಾರೆ.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…