ಬೆಂ. ಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ವರ್ಗಾವಣೆ- ನೂತನ ಎಸ್ಪಿ ಯಾರು ಗೊತ್ತಾ….?

ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 23 ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ಮತ್ತು ನೇಮಕಾತಿ ನೀಡಲಾಗಿದ್ದರೆ, ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್‌ಪಿ ಮತ್ತು ಡಿಸಿಪಿಗಳನ್ನು ಬದಲಾಯಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ ಆಗಿದ್ದ ಸಿ.ಕೆ ಬಾಬಾ ಅವರಿಗೆ ಬಡ್ತಿ ನೀಡಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ (DIG) ಯಾಗಿ ನೇಮಕ ಮಾಡಲಾಗಿದೆ.

ಸಿ ಕೆ ಬಾಬಾ ವರ್ಗಾವಣೆಗೊಂಡ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ (SP) ಆಗಿ ಚಂದ್ರಕಾಂತ್ ಎಂ.ವಿ ಅವರು ನೇಮಕಗೊಂಡಿದ್ದಾರೆ.

23 IPS ಅಧಿಕಾರಿಗಳಿಗೆ ಬಡ್ತಿ, 20 IPS ಅಧಿಕಾರಿಗಳ ವರ್ಗಾವಣೆ

ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ..

( ಮುಂಬಡ್ತಿ)

ಬೋರಲಿಂಗಯ್ಯ, ಐಜಿಪಿ ಮೈಸೂರು ವಲಯ..

ರಾಮ್ ನಿವಾಸ್ ಸಫೇಟ್ ಐಜಿಪಿ ಎಸ್ ವಿಪಿ..ಎನ್ ಪಿಎ..

ಅನುಪಮ್ ಅಗರ್ ವಾಲ್( ಐಜಿಪಿ ಸಿಆರ್ ಪಿಎಫ್)

ಭೀಮಾಶಂಕರ್‌ ಗುಳೇದ್‌, DIGP, CID..

ಡಿ ದೇವರಾಜ್‌, DIGP, ಟ್ರೈನಿಂಗ್‌..

ಸಿ. ಕೆ ಬಾಬಾ. DIGP ಕೆ.ಎಸ್‌.ಆರ್‌.ಪಿ..

ಗಿರೀಶ್‌. ಎಸ್‌ DIGP,ANTF..

ಸಂಜೀವ್‌ ಪಾಟೀಲ್‌,DIGP, DG ಕಚೇರಿ..

ಕಲಾಕೃಷ್ಣಸ್ವಾಮಿ DIGP, ಕ್ರೈಂ..

ವಿಷ್ಣುವರ್ಧನ, ಡೈರೆಕ್ಟರ್‌‌ ಕರ್ನಾಟಕ ಪೊಲೀಸ್‌‌ ಅಕಾಡೆಮಿ..

ಪರಶುರಾಮ್‌, DIGP, CTRS..

ರಾಹುಲ್ ಕುಮಾರ್, ಡಿಐಜಿಪಿ ಎನ್ ಐಎ

ಧರ್ಮೇಂದ್ರ ಕುಮಾರ್ ಮೀನ( ಡಿ ಐಜಿಪಿ ಎನ್ ಟಿಆರ್ ಒ)

ಶಾಂತರಾಜು, ಡಿಐಜಿಪಿ ಐಎಸ್ ಡಿ..

ಸಿರಿಗೌರಿ ಡಿ ಐಜಿಪಿ ( ಎಸ್ ಸಿ ಆರ್ ಬಿ)

ಎಸ್ ಸವಿತಾ ಡಿಐಜಿಪಿ ( ಅಡಿಷನಲ್ ಕಮಾಂಡೆಂಟ್ ಜನರಲ್..ಹೋಮ್ ಗಾರ್ಡ್..

20 IPS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ..

ಅರುಣಾಂಶು ಗಿರಿ( ಎಸ್ ಪಿ ರಾಯಚೂರು)

ಸಿಕೆ ಮಿಥುನ್ ಕುಮಾರ್ ( ಈಶಾನ್ಯ ವಿಭಾಗ) ಡಿಸಿಪಿ..

ಯತೀಶ್ ಎನ್ ( ಪಶ್ಚಿಮ ವಿಭಾಗ) ಡಿಸಿಪಿ

ಸೈದುಲಾ ಅದಾವತ್ ( ವೈಟ್ ಫೀಲ್ಡ್ ಡಿಸಿಪಿ)

ಮಲ್ಲಿಕಾರ್ಜುನ್ ಬಾಲದಂಡಿ( ಎಸ್ ಪಿ ಮೈಸೂರು..)

ಶೋಭಾರಾಣಿ, SP ಮಂಡ್ಯ ..

ಕವಿತಾ ( ಎಸ್ ಪಿ ಸಿಐಡಿ)

ನಿಖಿಲ್ ( ಎಸ್ ಪಿ ಶಿವಮೊಗ್ಗ)

ಕೆ ರಾಮರಾಜನ್ ( ಬೆಳಗಾವಿ ಎಸ್ ಪಿ)

ಬಿಂದುಮಣಿ ( ಕೊಡಗು ಎಸ್ ಪಿ)

ಮಹಮದ್‌ ಸುಜೇತಾ, DCP
ಆಗ್ನೇಯ ವಿಭಾಗ ಬೆಂಗಳೂರು..

ಚಂದ್ರಕಾಂತ್‌,‌ SP, ಬೆಂಗಳೂರು ಗ್ರಾಮಾಂತರ..

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ ನೇಮಕ

ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ ಆಗಿದ್ದ ಸಿ.ಕೆ ಬಾಬಾ ಅವರಿಗೆ ಬಡ್ತಿ ನೀಡಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ…

13 minutes ago

“ಗುಣಮಟ್ಟದ ಚಿಕಿತ್ಸೆಗೆ ಸಹ್ಯಾದ್ರಿ ಆಸ್ಪತ್ರೆ ಬದ್ಧ”

ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ, ಗೌರಿಬಿದನೂರು ರಸ್ತೆಯ ಫ್ರೆಂಡ್ಸ್ ಫಂಕ್ಷನ್ ಹಾಲ್ ಎದುರಿನ ಸಹ್ಯಾದ್ರಿ ಆಸ್ಪತ್ರೆಯು 2025ರ ಮೇ.11ರಂದು ಪ್ರಾರಂಭವಾಗಿ ಆಧುನಿಕ ತಂತ್ರಜ್ಞಾನ,…

2 hours ago

ಚಳಿಗಾಲದ ಪಾರ್ಟಿಗಳಿಂದ ಹೊಟ್ಟೆಗೆ ಕಾಟ: ಗ್ಯಾಸ್ಟ್ರೋ ಪ್ರಕರಣಗಳಲ್ಲಿ 25% ಏರಿಕೆ

ಪ್ರತಿ ವರ್ಷ ಚಳಿಗಾಲದಲ್ಲಿ ಬರುವ ಹಬ್ಬದಲ್ಲಿ, ಬೆಂಗಳೂರು ಮೆಡಿಕವರ್ ಆಸ್ಪತ್ರೆಗಳಲ್ಲಿ ಹೊಟ್ಟೆ ಸಂಬಂಧಿತ (ಗ್ಯಾಸ್ಟ್ರೋ) ಹೊರರೋಗಿ ವಿಭಾಗ (OPD) ಮತ್ತು…

6 hours ago

ಕೇರಳದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾದ ದೊಡ್ಡಬಳ್ಳಾಪುರ ಕಾಂಗ್ರೆಸ್ ಮುಖಂಡರು….

ಕೇರಳದ ತಿರುವನಂತಪುರಂ ಜಿಲ್ಲೆಯ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮಸಂಗಮ ಟ್ರಸ್ಟ್‌ ಆಯೋಜಿಸಿರುವ ಮಠದ ಯಾತ್ರಾರ್ಥಿಗಳ‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ…

8 hours ago

ಮಡಿಕೇರಿ ಹನಿ ಟ್ರ್ಯಾಪ್ ಪ್ರಕರಣ: ಬಲೆಗೆ ಬಿದ್ದರಾ ಗಣ್ಯರು?

ಇತ್ತೀಚೆಗೆ ಮಂಡ್ಯ ಮೂಲಕ ವ್ಯಕ್ತಿ ಮಹಿಳೆ ಮತ್ತು ಆಕೆಯ ಸಹಚರರ ಜಾಲಕ್ಕೆ ಸಿಲುಕಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ನಂತರ ಅರೆ…

9 hours ago

ನೇಣಿಗೆ ಶರಣಾಗಿರೋ ವ್ಯಕ್ತಿ

ಮನನೊಂದ ವ್ಯಕ್ತಿಯೋರ್ವ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮುಕ್ತಾಂಭಿಕಾ ಬಡಾವಣೆಯಲ್ಲಿ ನಿನ್ನೆ ರಾತ್ರಿ ಸುಮಾರು 10ಗಂಟೆಯಲ್ಲಿ ನಡೆದಿದೆ....…

10 hours ago