ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ವರ್ಗಾವಣೆ: ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆ

ಫೆ.26ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರನ್ನು ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಾಂತೇಶ್‌ ಆದೇಶಿಸಿದ್ದರು.

ಎ.ಬಿ. ಬಸವರಾಜು ಅವರ ವರ್ಗಾವಣೆಯಿಂದ ತೆರವಾದ ಜಾಗಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ಡಾ. ಅನುರಾಧಾ ಕೆ.ಎನ್. ಅವರನ್ನು ನೇಮಕ ಮಾಡಲಾಗಿದ್ದು, ಜಿಪಂ ಪ್ರಭಾರ ಸಿಇಒ ಆಗಿ ಮುಂದುವರಿಸಲಾಗಿದೆ.

ಚರ್ಚೆಗೆ ಗ್ರಾಸವಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ವರ್ಗಾವಣೆ

ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರನ್ನು ವರ್ಗಾವಣೆ ಮಾಡಿರುವುದು ಹಾಗೂ ತೆರವಾದ ಜಾಗಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ಡಾ. ಅನುರಾಧಾ ಕೆ.ಎನ್. ಅವರನ್ನು ನೇಮಕ ಮಾಡಿರುವುದಕ್ಕೆ ಕೆಲವೊಂದು ಆಕ್ಷೇಪಗಳು ಹಾಗೂ ಸಮರ್ಥನೆಗಳು ಸಾರ್ವಜನಿಕ‌ ವಲಯದಲ್ಲಿ ಕೇಳಿಬರುತ್ತಿವೆ…

ವಿರೋಧ

* ನಿಷ್ಠಾವಂತರಿಗೆ ಈ ಸರ್ಕಾರದಲ್ಲಿ ಕಾಲ ಬರುವುದು ಕಷ್ಟ. ಈ ಸರ್ಕಾರಕ್ಕೆ ತಕ್ಕಂತೆ, ಅವರು ಹೇಳಿದ ಹಾಗೆ ಕೇಳಿಕೊಂಡು, ಇವರಿಗೆ ಮಾಡುವ ಭ್ರಷ್ಟಾಚಾರಗಳಿಗೆ ಬೆಂಬಲಕ್ಕೆ ನಿಂತುಕೊಂಡರೆ ಆಗ ಇಂತಹ ಇಂದು ಅಧಿಕಾರಿಗಳಿಗೆ ಬೆಂಬಲ ಕೊಡುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳಲಾಗಿದೆ…

* ಉಸ್ತುವಾರಿ ಮಂತ್ರಿಗಳ ಪಿಎ ಅವರ ಅನುಕೂಲಕ್ಕಾಗಿ ಅವರ ಸಂಬಂಧಿಕರನ್ನೇ ಜಿಲ್ಲಾಧಿಕಾರಿಗಳಾಗಿ ಮಾಡಿಸಿಕೊಂಡಿದ್ದಾರೆ, ಇದು ರಾಜಕೀಯ ಪ್ರೇರಿತ ವರ್ಗಾವಣೆ ಮಾನ್ಯ ಬಸವರಾಜ್ ರವರು ಬಡವರ ಪರ ನ್ಯಾಯ ನೀತಿ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕೈಗೊಂಡ ನಿಷ್ಠಾವಂತ ಅಧಿಕಾರಿ, ಅಕ್ರಮ ಗಣಿಗಾರಿಕೆಗೆ ಸಪೋರ್ಟ್ ಮಾಡಲಿಲ್ಲವೆಂದು ಮಾನ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಯಲ್ಲಿ ಇದು ಒಂದು ಎಂದು ಕಿಡಿಕಾರಿದ್ದಾರೆ..

* ಬಸವರಾಜ್ ಸಾರ್. ಮೊನ್ನೇ ಮೋನ್ನೇ ಬಂದಿದ್ದು. ಈಸ್ಟ್ ಬೇಗ ವರ್ಗಾ ವಾಗಿದೆ. ಕಾರಣ ಕೋಡಿ… ಎಂದು ಪ್ರಶ್ನೆ ಮಾಡಲಾಗಿದೆ..

* ತನ್ನ ಅಧೀನದಲ್ಲಿ ಇರುವ ಅಧಿಕಾರಿಗಳನ್ನು ತನ್ನ ಆತೋಟಿಯಲ್ಲಿ ಇಟ್ಟು ಭ್ರಷ್ಟಾಚಾರ ಕಡಿವಾಣ ಹಾಕದೆ ಕಂಡು ಕಾಣದ ಹಾಗೆ ಇರುವ ಅಧಿಕಾರಿ ನಿಷ್ಠಾವಂತರ  ಯಾಕೆ ಬೇರೆ ಯಾರೂ ಅದರಲ್ಲೂ ಒಬ್ಬ ಹೆಣ್ಣು ಮಗಳು ಜಿಲ್ಲಾಧಿಕಾರಿ ಆಗಿದ್ದು ಸರಿ ಅನಿಸುತ್ತಿಲ್ಲವಾ ಎಂದು ಪ್ರಶ್ನಿಸಲಾಗಿದೆ…

* ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಶ್ರೀ ಎ.ಬಿ. ಬಸವರಾಜು ಅವರ ವರ್ಗಾವಣೆ ಜಿಲ್ಲೆಯ ಜನತೆಗೆ ನಿಜಕ್ಕೂ ಬೇಸರದ ಸಂಗತಿ.

ಅವರು ಕೇವಲ ಅಧಿಕಾರಿಯಾಗಿ ಮಾತ್ರವಲ್ಲ, ಜನರ ನಡುವೆ ಬೆರೆತು ಕೆಲಸ ಮಾಡಿದ ಒಬ್ಬ ಜನಪರ ಆಡಳಿತಗಾರರಾಗಿದ್ದರು. ಸಾಮಾನ್ಯ ಜನರ ಅಹವಾಲುಗಳನ್ನು ಶ್ರದ್ಧೆಯಿಂದ ಆಲಿಸಿ, ಸರಳತೆ ಮತ್ತು ದೃಢತೆಯೊಂದಿಗೆ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದವರು.

ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಜಾನುವಾರು ಜಾತ್ರೆಗೆ ವಿಶೇಷ ಕಾಳಜಿ ವಹಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ನೀಲನಕ್ಷೆ ರೂಪಿಸಿದರು. ಸುಂಕ ರಹಿತ ಜಾತ್ರೆಯನ್ನು ಜಾರಿಗೊಳಿಸಿ, ರೈತರಿಗೆ ನೇರವಾಗಿ ಅನುಕೂಲವಾಗುವಂತೆ ಕ್ರಮ ಕೈಗೊಂಡದ್ದು ಅವರ ಜನಪರ ಮನೋಭಾವದ ಪ್ರತಿಬಿಂಬವಾಗಿದೆ.

ಸರ್ಕಾರಿ ಭೂಮಿಯನ್ನು ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಭೂಗಳ್ಳರಿಗೆ ಸಿಂಹಸ್ವಪ್ನರಾಗಿದ್ದರು. “ಸರ್ಕಾರಿ ಶಾಲೆ ಉಳಿಸಿ – ಕನ್ನಡ ಬೆಳೆಸಿ” ಎಂಬ ಧ್ಯೇಯದೊಂದಿಗೆ ಶಿಕ್ಷಣ ಕ್ಷೇತ್ರಕ್ಕೂ ಹೊಸ ಚೈತನ್ಯ ತುಂಬಿದರು. ತೂಬಗೆರೆ ಹಲಸಿಗೆ ಬ್ರಾಂಡ್ ಪೇಟೆಂಟ್ ಪಡೆಯುವ ಪ್ರಯತ್ನಗಳ ಮೂಲಕ ಸ್ಥಳೀಯ ಉತ್ಪನ್ನಕ್ಕೆ ಗುರುತಿನ ಮುದ್ರೆ ಒದಗಿಸಲು ಮುಂದಾದರು.

ಯುವಕರೊಂದಿಗೆ ಚಾರಣ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಆಡಳಿತ ಮತ್ತು ಯುವಶಕ್ತಿಯ ನಡುವೆ ಸೇತುವೆ ನಿರ್ಮಿಸಿದ ಅಧಿಕಾರಿಯಾಗಿದ್ದರು.

ಇಂತಹ ಪ್ರಾಮಾಣಿಕ, ದಕ್ಷ ಮತ್ತು ಹೃದಯವಂತ ಅಧಿಕಾರಿಯನ್ನು ಪಡೆದ ನಾವು ಭಾಗ್ಯವಂತರು. ಅವರು ಇನ್ನೂ ಹೆಚ್ಚಿನ ಕಾಲ ನಮ್ಮ ಜಿಲ್ಲೆಯಲ್ಲೇ ಸೇವೆ ಸಲ್ಲಿಸಬೇಕೆಂಬುದು ಜನಮನದ ಆಶೆಯಾಗಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ…

Ramesh Babu

Journalist

Recent Posts

ಉಪಚುನಾವಣೆ, ಪ್ರಚಾರ ಮತ್ತು ಅದಕ್ಕಾಗಿ ಪಡುತ್ತಿರುವ ಶ್ರಮ……

ಹಾಲಿ ಶಾಸಕರ ನಿಧನದಿಂದಾಗಿ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದೆ. ಈಗ ನಾವು ಅವರ ಕುಟುಂಬಗಳ ನಿರ್ವಹಣೆಗಾಗಿ,…

7 hours ago

ಮೊಬೈಲ್ ಕ್ಯಾಂಟೀನ್ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು…

19 hours ago

ಮಾ.21, 22ರಂದು ಹಾದ್ರೀಪುರ ‌ಕ್ರಿಕೆಟ್ ಟೂರ್ನಮೆಂಟ್

ಮಾ.21, 22ರಂದು ದೊಡ್ಡಬಳ್ಳಾಪುರದ‌ ಹಾದ್ರೀಪುರ ಗ್ರಾಮದಲ್ಲಿ‌ ಎರಡನೇ‌ ವರ್ಷದ ಹಾದ್ರೀಪುರ ‌ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ... ಜೈ ಆಂಜನೇಯ, ರಾಕ್…

19 hours ago

ಎಲ್‌ಪಿಜಿ ಸಿಲಿಂಡರ್ ಗಾಗಿ ಮುಗಿಬಿದ್ದ ಜನ

ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಕ್ಕಟ್ಟು ಭಾರತಕ್ಕೂ ತಟ್ಟಿರುವ ಹಿನ್ನೆಲೆ ದೇಶಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಪ್ರಸ್ತುತ…

1 day ago

ಯುಗಾದಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಇಸ್ಪೀಟ್ ಆಟ:‌ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ: ಠಾಣೆಗೆ ಕರೆತಂದಿದ್ದವರ ಪೈಕಿ ಕಾಂತರಾಜು ಅನುಮಾನಾಸ್ಪದ ಸಾವು: ಠಾಣೆಯಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ಇಸ್ಪೀಟ್ ಆಡುತ್ತಿದ್ದಾರೆಂದು ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬರು ಪೊಲೀಸ್ ವಶದಲ್ಲಿದ್ದಾಗಲೇ ಸಾವನ್ನಪ್ಪಿದ ಹಿನ್ನೆಲೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ…

1 day ago

ಮಳೆ, ಗಾಳಿ ಅವಾಂತರ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಕುಂಟನಹಳ್ಳಿ, ಹುಸ್ಕೂರು ದಾರಿ ಬಂದ್

ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು,…

2 days ago