ಕುಟುಂಬ ಅಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ. ಅದರಲ್ಲೂ ಮಕ್ಕಳು, ಮನೆ ಒಡೆಯನ ಬಗ್ಗೆ ಹಾಗೇ ಆಗುತ್ತೆ, ಈಗೆ ಆಗುತ್ತೆ ಎಂದರೆ ಭಯ ಆಗೋದು ಗ್ಯಾರೆಂಟಿ ಅಲ್ಲವೇ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಬುಡ ಬುಡುಕೆ ವೇಷಧಾರಿಗಳು ಒಂದೇ ಗ್ರಾಮದ ಐದಾರು ಮನೆಗಳ ಮಹಿಳೆಯರನ್ನ ಯಾಮಾರಿಸಿ ಹಣ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ.
ಗ್ರಾಮದ ಮಹಿಳೆಯರಲ್ಲಿ ಆತಂಕ ಮನೆ ಮಾಡಿದೆ ಕ್ಷಣ ಮಾತ್ರದಲ್ಲಿ ಇಲ್ಲೆ ನಿಂತು ಮಾತನಾಡಿದವರು ನನ್ನ ಕೈಯಿಂದಲೆ ಚಿನ್ನದ ಆಭರಣ ನಗದು ಹಣವನ್ನ ತೆಗೆದುಕೊಂಡು ಹೋದ್ರು ಅಂತ ಮಹಿಳೆ ಹೇಳ್ತಿದ್ರೆ ನನ್ನ ಕಣ್ಣೀಗೆ ನೀರು ಹಾಕಿದ್ದು ಅಷ್ಟೆ ನೆನಪು ಅಂತ ಮನೆ ಯಜಮಾನ ಹೇಳ್ತಿದ್ದಾನೆ. ಇನ್ನೂ ಇದನ್ನೆಲ್ಲ ಮಾಡಿದ್ದು ಯಾರು ಅಂತ ಗ್ರಾಮದ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದವರಿಗೆ ಸಿಕ್ಕಿದ್ದು ಮಾತ್ರ ಬುಡ ಬುಡಿಕೆ ವೇಷದಾರಿಗಳ ಕೈಚಳಕ.
ಹೌದು… ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮದ ಮುನಿರಾಜು ಅನ್ನೂ ಇವರ ಮನೆಗೆ ಬುಡ ಬುಡಿಕೆ ವೇಷಧಾರಿಗಳಿಬ್ಬರು ಬಂದಿದ್ರಂತೆ. ಜೊತೆಗೆ ಮನೆಯಲ್ಲಿ ಯಾರು ಇಲ್ಲ ಏನು ಹೇಳಬೇಡಿ ನಮಗೆ ಹೋಗಿ ಅಂತ ಮಹಿಳೆ ಹೇಳ್ತಿದ್ರು, ಜೇಬಿನಿಂದ ಗರಿ ಗರಿ ಹಣದ ನೋಟು ತೆಗೆದು ತೋರಿಸಿದ ಬುಡ ಬುಡಿಕೆ ವೇಷಧಾರಿ ನಮಗೆ ಹಣ ಬೇಡ ನಿಮ್ಮ ಗಂಡ ಸೇರಿದಂತೆ ಮಕ್ಕಳಿಗೆ ಎರಡು ವಾರದಲ್ಲಿ ಕೆಟ್ಟದ್ದು ಆಗಲಿದೆ ಅಂತ ಹೇಳಿದ್ದಾನೆ. ಹೀಗಾಗಿ ಸಹಜವಾಗೆ ಗಂಡ ಮಕ್ಕಳು ಅಂತಿದ್ದಂತೆ ಗಾಬರಿಗೊಂಡ ಮಹಿಳೆಗೆ ನೂರು ರೂಪಾಯಿ ಹಣ ನೀಡಿ ಸಾಕು ನಿಮ್ಮ ಕಷ್ಟ ಪರಿಹಾರ ಮಾಡಿಕೊಡ್ತೀವಿ ಅಂತ ಹೇಳಿದ ವೇಷಧಾರಿಗಳು ಪೂಜೆ ಮಾಡುವ ನೆಪದಲ್ಲಿ ಮನೆಯಲ್ಲಿದ್ದ ಗಂಡ ಹೆಂಡತಿ ಮೇಲೆ ನೀರು ಹಾಕಿದ್ರಂತೆ. ಇನ್ನೂ ನೀರು ಹಾಕ್ತಿದ್ದಂತೆ ದಂಪತಿಗಳಿಬ್ಬರು ಏನು ತಿಳಿಯದಂತೆ ಮನೆಯಲ್ಲಿದ್ದ ಚಿನ್ನದ ಉಂಗುರ, ಕಿವಿ ಓಲೆ ಸೇರಿದಂತೆ ನಾಲ್ಕೈದು ಸಾವಿರ ಹಣವನ್ನ ತಂದು ಅವರ ಕೈಗೆ ನೀಡಿದ್ದು ಚಿನ್ನ ಮತ್ತು ಹಣದ ಸಮೇತ ಇಬ್ಬರು ಅಪರಿಚಿತರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಇನ್ನೂ ಇದೇ ವೇಳೆ ಪಕ್ಕದ ಗ್ರಾಮದಲ್ಲಿ ಇಂದು ಇಬ್ಬರು ಬುಡ ಬುಡಿಕೆ ವೇಷಧಾರಿಗಳು ಸಿಕ್ಕಿದ್ದು ಅವರನ್ನ ಪ್ರಶ್ನಿಸಿದ ಗ್ರಾಮಸ್ಥರು ವಿಶ್ವನಾಥಫುರ ಪೊಲೀಸರ ವಶಕ್ಕೆ ನೀಡಿದ್ದಾರೆ.
ಒಟ್ಟಾರೆ ಮಹಿಳೆಯರ ವೀಕ್ನೆಸ್ ಅನ್ನೆ ಬಂಡವಾಳ ಮಾಡಿಕೊಂಡು ಒಂಟಿಯಾಗಿರುವ ಮಹಿಳೆಯರನ್ನ ಯಾಮಾರಿಸಿ ಚಿನ್ನಾಭರಣ ದೋಚಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಇನ್ನೂ ಈ ಕುರಿತು ಸೆರೆ ಸಿಕ್ಕ ಇಬ್ಬರು ಅಪರಿಚಿತ ವೇಷಧಾರಿಗಳನ್ನ ವಿಶ್ವನಾಥಪುರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು ಸಂಪೂರ್ಣ ತನಿಖೆ ನಂತರ ಆರೋಪಿಗಳು ಯಾರು ಅನ್ನೋದು ಗೊತ್ತಾಗಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…
ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…
ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…
ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…
ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…