ಬಿರುಕುಗೊಂಡಿದ್ದ ದಾಂಪತ್ಯ ಜೀವನಕ್ಕೆ ಮತ್ತೆ ಜೀವ ತುಂಬಿದ ಲೋಕ ಅದಾಲತ್: ಎರಡು ವರ್ಷಗಳ ನಂತರ ಮತ್ತೆ ಒಂದಾದ ದಂಪತಿ: ಹಿರಿಯರ ಶುಭ ಹಾರೈಕೆ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಡೆದ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿಂದು ರಾಷ್ಟ್ರೀಯ ಲೋಕ ಆದಾಲತ್‌ ನಡೆಯಿತು, ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ದೂರವಾಗಿದ್ದ ಗಂಡ ಹೆಂಡತಿ ರಾಜೀ ಸಂಧಾನದ ಮೂಲಕ ನ್ಯಾಯಾಧೀಶರ ಮುಂದೆ ಒಂದಾದರು,

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ನಡೆಯುತ್ತಿದ್ದ ಕೌಟುಂಬಿಕ ಪ್ರಕರಣಗಳನ್ನ ಇತ್ಯರ್ಥ ಮಾಡುವ ಮೂಲಕ ಬಿರುಕುಗೊಂಡು ದೂರವಾಗಿದ್ದ ದಂಪತಿ ಮತ್ತೆ ಒಂದಾದರು, ಇಬ್ಬರ ಮನಸ್ಸುನ್ನು ಬದಲಾಯಿಸಿ ನೂತನ ಜೀವನಕ್ಕೆ ಕಾಲಿಡುವಂತೆ ನ್ಯಾಯಾಧೀಶರು ಮನಮೋಲಿಸಿದರು, ನೂತನ ವಧು- ವರರಂತೆ ಹೂಮಾಲೆಗಳನ್ನು ಪರಸ್ಪರ ಹಾಕುವ ಮೂಲಕ ಸತಿ-ಪತಿ ಒಂದಾದರು, ಒಂದಾದ ಜೋಡಿಗಳಿಗೆ ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ ಘಟನೆ ನಗರದಲ್ಲಿ ನಡೆದಿದೆ.

ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ತಾಲೂಕಿನ ಮಧುರೆ ಗ್ರಾಮದ ನಿವಾಸಿ ಅರಣ್ ಕುಮಾರ್ ಎಂ.ಸಿ (32) ಹಾಗೂ ಬೆಂಗಳೂರು ಉತ್ತರ ತಾಲೂಕು, ಅರಕೆರೆ ಪೋಸ್ಟ್, ಹೆಸರಘಟ್ಟ‌ ಹೋಬಳಿ, ಶಾನಭೋಗನಹಳ್ಳಿ ಗ್ರಾಮದ ನಿವಾಸಿ ನವ್ಯಶ್ರೀ.ಪಿ (23) ದಂಪತಿ ವಿಚ್ಛೇದನಕ್ಕಾಗಿ 2022ರಲ್ಲಿ ಕೋರ್ಟ್ ಮೇಟ್ಟಿಲೇರಿದ್ದರು.

ಈ ವಿಚಾರವಾಗಿ ನ್ಯಾಯಾಧೀಶರು ಪರಿಶೀಲಿಸಿ ಮನವೊಲಿಸಿದ ನಂತರ ಎರಡು ವರ್ಷಗಳ ಬಳಿಕ ತಮ್ಮ ಮನಸ್ಸು ಬದಲಾಯಿಸಿ ಮತ್ತೆ ಒಂದಾದ ಘಟನೆ ಶನಿವಾರ ನಡೆದ ಲೋಕ್ ಅದಾಲತ್ ನಲ್ಲಿ ಸಾಕ್ಷಿಯಾಯಿತು.

ಈ ದಂಪತಿ ಹಿರಿಯ ಪ್ರಧಾನ ಸಿವಿಲ್‌ ಮತ್ತು ಜೆ.ಎಮ್.ಎಫ್. ಸಿ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಶಿಲ್ಪ.ಹೆಚ್ ರವರ ಉಪಸ್ಥಿತಿಯಲ್ಲಿ ಪುನಃ ತಮ್ಮ ದಾಂಪತ್ಯ ಜೀವನಕ್ಕೆ ಮರಳಿದರು.

ಈ ವೇಳೆ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಮೇಶ್ ದುರುಗಪ್ಪ ಏಕಬೋಟೆ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.ಸಿ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸಹ ಕಾರ್ಯದರ್ಶಿ ಪ್ರೇಮ್ ಕುಮಾರ್, ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ದೊಡ್ಡಬಳ್ಳಾಪುರ ಮತ್ತು ವಕೀಲರು ಮತ್ತೆ ಒಂದಾದ ಇವರಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *