ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ಕೊನೆಗೂ ರಿಲೀಸ್

ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ರಿಲೀಸ್ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಒಬಿಸಿ –32, ಎಸ್‌ಸಿ –30, ಎಸ್‌ಟಿ– 16 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

PRESS–List of BJP candidate for General Election to the Legislative Asembly of Karnataka on 11.04.2023

ಶಿಕಾರಿಪುರದಿಂದ ವಿಜಯೇಂದ್ರ,
ಗೋಕಾಕ್‌ನಿಂದ ರಮೇಶ್ ಜಾರಕಿಹೊಳಿ, ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ,

ಮುಧೋಳ – ಗೋವಿಂದ ಕಾರಜೋಳ,‌
ಕುಡಿಚಿಯಿಂದ ರಾಜೀವ್,
ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ,
ಬೀಳಗಿಯಿಂದ ಮುರುಗೇಶ್ ನಿರಾಣಿ,

ವಿಜಯಪುರದಿಂದ ಬಸನಗೌಡ ಪಾಟೀಲ ಯತ್ನಾಳ, ಕಿತ್ತೂರಿನಿಂದ ಮಹಾಂತೇಶ್ ದೊಡಗೌಡರ್​, ಬೈಲಹೊಂಗಲದಿಂದ ಜಗದೀಶ್ ಮೆಟಗುಡ್ಡ, ಸವದತ್ತಿಯಿಂದ ರತ್ನಾ ಮಾಮನಿ,
ರಾಮದುರ್ಗದಿಂದ ಚಿಕ್ಕರೇವಣ್ಣ,

ಬೆಳಗಾವಿ ಉತ್ತರ – ರವಿ ಪಾಟೀಲ, ಬೆಳಗಾವಿ ದಕ್ಷಿಣ – ಅಭಯ್,

ಬೆಳಗಾವಿ ಗ್ರಾಮಾಂತರ – ನಾಗೇಶ್,

ಬೆಳಗಾವಿ ಗ್ರಾಮೀಣ – ನಾಗೇಶ್ ಮಾರ್ವಾಡಕರ್,
ಬೈಲಹೊಂಗಲ – ಜಗದೀಶ್ ಮೆಟಗೊಡ್,
ವಿಜಯನಗರ – ಸಿದ್ದಾರ್ಥ್ ಸಿಂಗ್​,
ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು,
ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ,
ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ,
ಉಡುಪಿ – ಯಶ್​ಪಾಲ್​​ ಸುವರ್ಣ,
ಕಾರ್ಕಳ – ವಿ.ಸುನೀಲ್ ಕುಮಾರ್​,
ಚಿಕ್ಕಮಗಳೂರು – ಸಿ.ಟಿ.ರವಿ,
ಚಿಕ್ಕನಾಯಕಹಳ್ಳಿ – ಜೆ.ಸಿ.ಮಾಧುಸ್ವಾಮಿ,
ತಿಪಟೂರು – ಬಿ.ಸಿ.ನಾಗೇಶ್,
ತುಮಕೂರು – ಜ್ಯೋತಿ ಗಣೇಶ್,

ದೊಡ್ಡಬಳ್ಳಾಪುರ- ಧೀರಜ್ ಮುನಿರಾಜ್

ಕೊರಟಗೆರೆ – ಅನಿಲ್ ಕುಮಾರ್ (ನಿವೃತ್ತ ಐಎಎಸ್ ಅಧಿಕಾರಿ) ಕಣಕ್ಕಿಳಿಯಲಿದ್ದಾರೆ.

ಆರ್. ಅಶೋಕ ಅವರು ಪದ್ಮನಾಭನಗರ ಮತ್ತು ಕನಕಪುರ ಎರಡು ಕಡೆ ಸ್ಪರ್ಧೆ ಮಾಡಲಿದ್ದಾರೆ.

ಅಫಜಲಪುರ-ಮಾಲೀಕಯ್ಯ ಗುತ್ತೇದಾರ್​,

ಕಲಬುರಗಿ.ಗ್ರಾ – ಬಸವರಾಜ್, ಕಲಬುರಗಿ.ದ – ದತ್ತಾತೇಯ ಪಾಟೀಲ್,

ಕಲಬುರಗಿ.ಉ – ಚಂದ್ರಕಾಂತ ಪಾಟೀಲ್,

ಅಳಂದ-ಸುಭಾಷ್ ಗುತ್ತೇದಾರ್,

ಔರಾದ್ – ಪ್ರಭು ಚೌಹಾಣ್​,

ರಾಯಚೂರು.ಗ್ರಾ – ತಿಪ್ಪರಾಜು ಹವಲ್ದಾರ್,

ರಾಯಚೂರು-ಶಿವರಾಜ ಪಾಟೀಲ್,

ಸಿಂಧನೂರು – ಕೆ.ಕರಿಯಪ್ಪ,

ಮಸ್ಕಿ – ಪ್ರತಾಪಗೌಡ ಪಾಟೀಲ್,

ಕನಕಗಿರಿ – ಬಸವರಾಜ ದಡೇಸುಗೂರು,

ನರಗುಂದ – ಶಂಕರ ಪಾಟೀಲ್​,

ಧಾರವಾಡ – ಅಮೃತ ದೇಸಾಯಿ,

ಹಳಿಯಾಳ – ಸುನೀಲ್ ಹೆಗಡೆ,

ಕಾರವಾರ  -ರೂಪಾಲಿ ನಾಯ್ಕ್​,

ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕಿಳಿಯಲಿದ್ದಾರೆ.

ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್​​,

ಕೋಲಾರ – ವರ್ತೂರು ಪ್ರಕಾಶ್,

ಯಲಹಂಕ – ಎಸ್.ಆರ್.ವಿಶ್ವನಾಥ್,

ಕೆ.ಆರ್.ಪುರಂ – ಭೈರತಿ ಬಸವರಾಜು,

ಯಶವಂತಪುರ – ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿನಗರ – ಮುನಿರತ್ನ,

ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ,

ಮಲ್ಲೇಶ್ವರಂ – ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಗಾಂಧಿನಗರ – ಸಪ್ತಗಿರಿಗೌಡ,

ಚಾಮರಾಜಪೇಟೆ – ಭಾಸ್ಕರ ರಾವ್(ನಿವೃತ್ತ ಐ‍ಪಿಎಸ್ ಅಧಿಕಾರಿ),

ಬಸವಗುಡಿ – ರವಿ ಸುಬ್ರಹ್ಮಣ್ಯ,

ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್,

ಹೊಸಕೋಟೆ – ಎಂಟಿಬಿ ನಾಗರಾಜ್,

ರಾಜಾಜಿನಗರ – ಎಸ್.ಸುರೇಶ್ ಕುಮಾರ್​,

ಚನ್ನಪಟ್ಟಣ – ಸಿ.ಪಿ.ಯೋಗೇಶ್ವರ್​,

ಕೆ.ಆರ್.ಪೇಟೆ – ಕೆ.ಸಿ.ನಾರಾಯಣಗೌಡ,

ಹಾಸನ – ಪ್ರೀತಂ ಗೌಡ,

ಚಾಮರಾಜನಗರ – ವಿ. ಸೋಮಣ್ಣ,

ವರುಣ – ವಿ. ಸೋಮಣ್ಣ,

ಬೆಳ್ತಂಗಡಿ – ಹರೀಶ್ ಪೂಂಜಾ,

ಬಂಟ್ವಾಳ – ರಾಜೇಶ್ ನಾಯಕ್​,

ಪುತ್ತೂರು – ಆಶಾ ತಿಮ್ಮಪ್ಪ,

ಮಡಿಕೇರಿ – ಅಪ್ಪಚ್ಚು ರಂಜನ್,

ವಿರಾಜಪೇಟೆ – ಕೆ.ಜಿ.ಬೋಪಯ್ಯ,

ನಂಜನಗೂಡು ಕ್ಷೇತ್ರದಿಂದ ಡಾ. ಹರ್ಷವರ್ಧನ್​ ಕಣಕ್ಕಿಳಿಯಲಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಈಗಾಗಲೇ 166 ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇತ್ತ ಜೆಡಿಎಸ್‌ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕೆಲವು ತಿಂಗಳ ಹಿಂದೆಯೇ ಘೋಷಿಸಿದೆ.

Leave a Reply

Your email address will not be published. Required fields are marked *