ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ರಿಲೀಸ್ ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಒಬಿಸಿ –32, ಎಸ್ಸಿ –30, ಎಸ್ಟಿ– 16 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಶಿಕಾರಿಪುರದಿಂದ ವಿಜಯೇಂದ್ರ,
ಗೋಕಾಕ್ನಿಂದ ರಮೇಶ್ ಜಾರಕಿಹೊಳಿ, ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ,
ಮುಧೋಳ – ಗೋವಿಂದ ಕಾರಜೋಳ,
ಕುಡಿಚಿಯಿಂದ ರಾಜೀವ್,
ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ,
ಬೀಳಗಿಯಿಂದ ಮುರುಗೇಶ್ ನಿರಾಣಿ,
ವಿಜಯಪುರದಿಂದ ಬಸನಗೌಡ ಪಾಟೀಲ ಯತ್ನಾಳ, ಕಿತ್ತೂರಿನಿಂದ ಮಹಾಂತೇಶ್ ದೊಡಗೌಡರ್, ಬೈಲಹೊಂಗಲದಿಂದ ಜಗದೀಶ್ ಮೆಟಗುಡ್ಡ, ಸವದತ್ತಿಯಿಂದ ರತ್ನಾ ಮಾಮನಿ,
ರಾಮದುರ್ಗದಿಂದ ಚಿಕ್ಕರೇವಣ್ಣ,
ಬೆಳಗಾವಿ ಉತ್ತರ – ರವಿ ಪಾಟೀಲ, ಬೆಳಗಾವಿ ದಕ್ಷಿಣ – ಅಭಯ್,
ಬೆಳಗಾವಿ ಗ್ರಾಮಾಂತರ – ನಾಗೇಶ್,
ಬೆಳಗಾವಿ ಗ್ರಾಮೀಣ – ನಾಗೇಶ್ ಮಾರ್ವಾಡಕರ್,
ಬೈಲಹೊಂಗಲ – ಜಗದೀಶ್ ಮೆಟಗೊಡ್,
ವಿಜಯನಗರ – ಸಿದ್ದಾರ್ಥ್ ಸಿಂಗ್,
ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು,
ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ,
ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ,
ಉಡುಪಿ – ಯಶ್ಪಾಲ್ ಸುವರ್ಣ,
ಕಾರ್ಕಳ – ವಿ.ಸುನೀಲ್ ಕುಮಾರ್,
ಚಿಕ್ಕಮಗಳೂರು – ಸಿ.ಟಿ.ರವಿ,
ಚಿಕ್ಕನಾಯಕಹಳ್ಳಿ – ಜೆ.ಸಿ.ಮಾಧುಸ್ವಾಮಿ,
ತಿಪಟೂರು – ಬಿ.ಸಿ.ನಾಗೇಶ್,
ತುಮಕೂರು – ಜ್ಯೋತಿ ಗಣೇಶ್,
ದೊಡ್ಡಬಳ್ಳಾಪುರ- ಧೀರಜ್ ಮುನಿರಾಜ್
ಕೊರಟಗೆರೆ – ಅನಿಲ್ ಕುಮಾರ್ (ನಿವೃತ್ತ ಐಎಎಸ್ ಅಧಿಕಾರಿ) ಕಣಕ್ಕಿಳಿಯಲಿದ್ದಾರೆ.
ಆರ್. ಅಶೋಕ ಅವರು ಪದ್ಮನಾಭನಗರ ಮತ್ತು ಕನಕಪುರ ಎರಡು ಕಡೆ ಸ್ಪರ್ಧೆ ಮಾಡಲಿದ್ದಾರೆ.
ಅಫಜಲಪುರ-ಮಾಲೀಕಯ್ಯ ಗುತ್ತೇದಾರ್,
ಕಲಬುರಗಿ.ಗ್ರಾ – ಬಸವರಾಜ್, ಕಲಬುರಗಿ.ದ – ದತ್ತಾತೇಯ ಪಾಟೀಲ್,
ಕಲಬುರಗಿ.ಉ – ಚಂದ್ರಕಾಂತ ಪಾಟೀಲ್,
ಅಳಂದ-ಸುಭಾಷ್ ಗುತ್ತೇದಾರ್,
ಔರಾದ್ – ಪ್ರಭು ಚೌಹಾಣ್,
ರಾಯಚೂರು.ಗ್ರಾ – ತಿಪ್ಪರಾಜು ಹವಲ್ದಾರ್,
ರಾಯಚೂರು-ಶಿವರಾಜ ಪಾಟೀಲ್,
ಸಿಂಧನೂರು – ಕೆ.ಕರಿಯಪ್ಪ,
ಮಸ್ಕಿ – ಪ್ರತಾಪಗೌಡ ಪಾಟೀಲ್,
ಕನಕಗಿರಿ – ಬಸವರಾಜ ದಡೇಸುಗೂರು,
ನರಗುಂದ – ಶಂಕರ ಪಾಟೀಲ್,
ಧಾರವಾಡ – ಅಮೃತ ದೇಸಾಯಿ,
ಹಳಿಯಾಳ – ಸುನೀಲ್ ಹೆಗಡೆ,
ಕಾರವಾರ -ರೂಪಾಲಿ ನಾಯ್ಕ್,
ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕಿಳಿಯಲಿದ್ದಾರೆ.
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್,
ಕೋಲಾರ – ವರ್ತೂರು ಪ್ರಕಾಶ್,
ಯಲಹಂಕ – ಎಸ್.ಆರ್.ವಿಶ್ವನಾಥ್,
ಕೆ.ಆರ್.ಪುರಂ – ಭೈರತಿ ಬಸವರಾಜು,
ಯಶವಂತಪುರ – ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿನಗರ – ಮುನಿರತ್ನ,
ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ,
ಮಲ್ಲೇಶ್ವರಂ – ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಗಾಂಧಿನಗರ – ಸಪ್ತಗಿರಿಗೌಡ,
ಚಾಮರಾಜಪೇಟೆ – ಭಾಸ್ಕರ ರಾವ್(ನಿವೃತ್ತ ಐಪಿಎಸ್ ಅಧಿಕಾರಿ),
ಬಸವಗುಡಿ – ರವಿ ಸುಬ್ರಹ್ಮಣ್ಯ,
ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್,
ಹೊಸಕೋಟೆ – ಎಂಟಿಬಿ ನಾಗರಾಜ್,
ರಾಜಾಜಿನಗರ – ಎಸ್.ಸುರೇಶ್ ಕುಮಾರ್,
ಚನ್ನಪಟ್ಟಣ – ಸಿ.ಪಿ.ಯೋಗೇಶ್ವರ್,
ಕೆ.ಆರ್.ಪೇಟೆ – ಕೆ.ಸಿ.ನಾರಾಯಣಗೌಡ,
ಹಾಸನ – ಪ್ರೀತಂ ಗೌಡ,
ಚಾಮರಾಜನಗರ – ವಿ. ಸೋಮಣ್ಣ,
ವರುಣ – ವಿ. ಸೋಮಣ್ಣ,
ಬೆಳ್ತಂಗಡಿ – ಹರೀಶ್ ಪೂಂಜಾ,
ಬಂಟ್ವಾಳ – ರಾಜೇಶ್ ನಾಯಕ್,
ಪುತ್ತೂರು – ಆಶಾ ತಿಮ್ಮಪ್ಪ,
ಮಡಿಕೇರಿ – ಅಪ್ಪಚ್ಚು ರಂಜನ್,
ವಿರಾಜಪೇಟೆ – ಕೆ.ಜಿ.ಬೋಪಯ್ಯ,
ನಂಜನಗೂಡು ಕ್ಷೇತ್ರದಿಂದ ಡಾ. ಹರ್ಷವರ್ಧನ್ ಕಣಕ್ಕಿಳಿಯಲಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ 166 ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇತ್ತ ಜೆಡಿಎಸ್ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕೆಲವು ತಿಂಗಳ ಹಿಂದೆಯೇ ಘೋಷಿಸಿದೆ.