ಸಿಎಂ ಹುದ್ದೆಯಿಂದ ಹಿಡಿದು ಪಕ್ಷದ ಟಿಕೆಟ್ ವರೆಗೆ ಎಲ್ಲವನ್ನೂ ಮಾರಾಟಕ್ಕಿಟ್ಟಿರುವ ಬಿಜೆಪಿ ಒಂಥರಾ ಚೋರ್ ಬಜಾರ್ ಇದ್ದಂತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ಕಚೇರಿ ಎಂದರೆ ವಂಚಕರ ಅಡ್ಡೆ ಎಂಬುದಕ್ಕೆ ಮತ್ತೊಂದು ಟಿಕೆಟ್ ವಂಚನೆ ಪ್ರಕರಣ ಹೊರಬಂದಿರುವುದೇ ಸಾಕ್ಷಿ. ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಅಕ್ರಮವಾದರೆ, ಪಕ್ಷದಲ್ಲಿ ಟಿಕೆಟ್ ಕಮಿಷನ್ ಅಕ್ರಮ, ಈ ಕಮಿಷನ್ ಸೋಂಕು ಬಿಜೆಪಿಯಿಂದ ಸರ್ಕಾರಕ್ಕೆ ಅಂಟಿದೆಯೋ? ಅಥವಾ ಬಿಜೆಪಿ ಸರ್ಕಾರದಿಂದ ಪಕ್ಷಕ್ಕೆ ಅಂಟಿದೆಯೋ? ಕಂಡವರನ್ನು ಕಾಣೆಯಾಗಿದ್ದಾರೆ ಎನ್ನುವ ಕುರುಡು ಬಿಜೆಪಿ ತಮ್ಮ ಪಕ್ಷದ ವಸೂಲಿ ಅಕ್ರಮಗಳ ಬಗ್ಗೆಯೂ ಕುರುಡಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಸೋಲು ಖಾತರಿಯಾಗುತ್ತಿದ್ದಂತೆಯೇ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಹೊಸಬರಿಗೆ ಮಣೆ ಹಾಕುವ “ಗುಜರಾತ್ ಮಾದರಿ” ಎಂದು ಬಣ್ಣ ಬದಲಿಸಿದ್ದು ಬಹುಶಃ ಟಿಕೆಟ್ ಮಾರಾಟಕ್ಕಾಗಿಯೇ ಇರಬಹುದು.
ಈ ಬಗ್ಗೆ “ಸಂತೋಷ”ದಿಂದಿರುವವರೇ ಸ್ಪಷ್ಟಪಡಿಸಬೇಕು. ಕಮಿಷನ್ ಎನ್ನುವುದು ಬಿಜೆಪಿಯ ಜೀವಾಳ, ಗುತ್ತಿಗೆದಾರರೇ ಆಗಿರಲಿ, ಟಿಕೆಟ್ ಆಕಾಂಕ್ಷಿಗಳೇ ಆಗಿರಲಿ, ಕಮಿಷನ್ ನೀಡಲೇಬೇಕು. ಏಕೆಂದರೆ ಜಗನ್ನಾಥ ಭವನ ಎಂಬುದು ‘ಕೇಶವ ಕೃಪಾ’ ಪೋಷಿತ ಸುಂಕ ವಸೂಲಿ ಮಾಡುವ ‘ಸುಂಕದ ಕಟ್ಟೆ’ ಎಂದಿದ್ದಾರೆ.
ಖಾಯಂ ನೇಮಕಾತಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪರವಾನಗಿ…
2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ…
ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಕರಡಿ ಹಾವಳಿ ಮುಂದುವರಿದಿದೆ.. ರಾತ್ರೋರಾತ್ರಿ ರೈತರ ಹೊಲಗಳಿಗೆ ನುಗ್ಗಿ ಬಾಳೆ, ಹಲಸಿನ…
ಹಾಡಹಗಲೇ ಮನೆ ಬೀಗ ಮುರಿದು ಲಕ್ಷ ಲಕ್ಷ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ ಮಾಡಿರುವ ಘಟನೆ ಏ.20ರಂದು ದೊಡ್ಡಬಳ್ಳಾಪುರ…
ಇಂದು ಬೆಳ್ಳಬೆಳಗ್ಗೆ ಸರಗಳನ್ನ ಕೈಚಳಕ ಕಂಡುಬಂದಿದೆ. ಬೆಳಗ್ಗೆ ಸುಮಾರು 5:30ರ ಸಮಯದಲ್ಲಿ ಮಹಿಳೆ ವಾಕಿಂಗ್ ಮಾಡುವ ವೇಳೆ ಕಳ್ಳನೋರ್ವ ಏಕಾಏಕಿ…