ಬಾಶೆಟ್ಟಿಹಳ್ಳಿ ವಿಎಸ್‍ಎಸ್‍ಎನ್ ಚುನಾವಣೆ: ಅಭ್ಯರ್ಥಿಗಳಿಗೆ ಕಿಡಿಗೇಡಿಗಳು ಪದ ಬಳಕೆಗೆ ಜನಧ್ವನಿ ವೇದಿಕೆ ಖಂಡನೆ

ದೊಡ್ಡಬಳ್ಳಾಪುರ : ತಾಲೂಕಿನ ಬಾಶೆಟ್ಟಿಹಳ್ಳಿ ವಿವಿದೋದ್ದೇಶ  ಸಹಕಾರ ಸಂಘದ ಚುನಾವಣೆ ಉಮೇದುವಾರರನ್ನು ಕಿಡಿಗೇಡಿಗಳು ಎಂದು ಕರೆದಿರುವ ಬಿಜೆಪಿ ಮುಖಂಡರ ಹೇಳಿಕೆ ಖಂಡನೀಯವಾಗಿದ್ದು, ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆದ್ದ ಇವರು, ಸಂಘದ ಏಳಿಗೆಯ ಮನೋಭಾವವಿರುವವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಿಲ್ಲ ಎಂದು ಜನಧ್ವನಿ ವೇದಿಕೆಯ ಸದಸ್ಯರು ದೂರಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜನಧ್ವನಿ ವೇದಿಕೆಯ ಬಾಶೆಟ್ಟಿಹಳ್ಳಿ ಕೃಷ್ಣ ಮೂರ್ತಿ, ನಾರಾಯಣಸ್ವಾಮಿ, ಜ.19 ರಂದು ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಸಹಕಾರ ಸಂಘದ ಚುನಾವಣೆ ನಡೆಯಿತು. ಇಲ್ಲಿ ಚುನಾವಣೆಯು ನಡೆದು 30 ವರ್ಷಗಳು ಆಗಿದೆ. ಈಗಲೂ ಮೂರು ಪಕ್ಷಗಳು ಸೇರಿ ಅಪವಿತ್ರ ಮೈತ್ರಿಯೊಂದಿಗೆ, ರೈತರಿಗೆ ಯಾವುದೇ ಮಾಹಿತಿ ನೀಡದೇ  ಅವಿರೋಧ ಆಯ್ಕೆ ಎಂದು ಅವರಿಗೆ ಬೇಕಾದವರನ್ನೇ ಆಯ್ಕೆ ಮಾಡಲು ಹೋರಟಾಗ ಜನಧ್ವನಿ ವೇದಿಕೆಯ ಮುಖಂಡರು ಖಂಡಿಸಿ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಇದರ ಪರಿಣಾಮ ಚುನಾವಣೆ ನಡೆದು ಎನ್‍ಡಿಎ ಬೆಂಬಲಿತ ಅಭ್ಯರ್ಥಿಗಳು 9 ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 2 ಸದಸ್ಯರು ಜಯಗಳಿಸಿದ್ದಾರೆ. ಸಂಘದಲ್ಲಿ ಒಟ್ಟು ಮತದಾರರ ಸಂಖ್ಯೆ 242,ಅಷ್ಟೇ. ಸಂಘಕ್ಕೆ ಆಯ್ಕೆಯಾಗಲು ಹತ್ತಾರು ಲಕ್ಷಗಳು ಖರ್ಚು ಮಾಡಿ ಗೆಲ್ಲುವ ಅವಶ್ಯಕತೆ ಇತ್ತಾ. ಜನಧ್ವನಿ ವೇದಿಕೆಯಿಂದ ಐದು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ನೀಡಿದ ಎಲ್ಲಾ ಮತಬಾಂಧವರಿಗೂ ತಮ್ಮ ಮೂಲಕ ವಂದನೆಗಳು ಅರ್ಪಿಸುತ್ತೇವೆ ಎಂದರು.

ಈ ಸಮಯದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಪ್ರೇಮ್ ಕುಮಾರ್, ಚುನಾವಣೆ ನಡೆಸಲು ಕಾರಣರಾದವರು ಕಿಡಿಕೇಡಿಗಳು ಎಂದು ಕರೆದಿದ್ದಾರೆ. ಇದು ಖಂಡನೀಯ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವವನ್ನು ಉಳಿಸುವ, ಗೌರವಿಸುವ ಹಾಗೂ ಘನತೆಯನ್ನು ಹೆಚ್ಚಿಸುತ್ತದೆ. ಆದರೆ, ಚುನಾವಣೆಗೆ ಸ್ಪರ್ಧಿಸುವುದು ಮತ್ತು ಮತದಾನ ಮಾಡುವುದನ್ನು ವಿರೋಧಿಸುವ ಇವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಚುನಾವಣೆಯನ್ನು  ವಾಮಮಾರ್ಗದಲ್ಲಿ ಗೆದ್ದ ಇವರು ಮತ್ತೊಬ್ಬರನ್ನು ಕಿಡಿಗೇಡಿಗಳು ಎನ್ನಲು ಯಾವ ನೈತಿಕತೆ ಇದೆ.  ಹಲವಾರು ವರುಷಗಳಿಂದ ಏಳು ಊರಿನ ರೈತರುಗಳಿಗೆ ಮಾಹಿತಿ ನೀಡದೆ ಕತ್ತಲಲ್ಲಿ ಇಟ್ಟು ಸಂಘದ ಸದಸ್ಯತ್ವವನ್ನು ಹೆಚ್ಚು ಮಾಡದೆ ಕೇಲವೇ ಮತದಾರರನ್ನು ಉಳಿಸಿಕೊಂಡು ಅವಿರೋಧವಾಗಿ ಆಯ್ಕೆಯಾಗಲು ಸಂಚು ರೂಪಿಸುತ್ತಿದ್ದರು. ಇದನ್ನು ಗಮನಿಸಿದ ಜನಧ್ವನಿ ವೇದಿಕೆಯು ಇನ್ನು ಇರುವ ನೂರಾರು ರೈತರನ್ನು ಸಹಕಾರ ಸಂಘಕ್ಕೆ ಸದಸ್ಯರನ್ನಾಗಿಸಲು ಈ ಚುನಾವಣೆಯ ನಿರ್ಣಯವನ್ನು ತೆಗೆದುಕೊಂಡ ಕಾರಣ ವೇದಿಕೆಯನ್ನು ಕಿಡಿಗೇಡಿಗಳೆಂದು ಸಂಭೋಧಿಸಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ 30 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗಿ ತಮ್ಮ ನಿರ್ದೇಶಕರು ಸಂಘವನ್ನು ಅಭಿವೃದ್ಧಿ ಮಾಡಲು ರೈತರಿಗೆ ಸವಲತ್ತುಗಳನ್ನು ನೀಡಲು ಏನು ಪ್ರಯತ್ನಪಟ್ಟಿದ್ದಾರೆ ಎಂದು ನಾವು ಪ್ರಶ್ನೆ ಮಾಡಬೇಕಾಗಿದೆ ಎಂದರು.

ಈ ವೇಳೆ ರಾಜ್ಯ ಮತ್ತು ತಾಲೂಕು ವೇದಿಕೆ ಮುಖಂಡರಾದ ರಮೇಶ ಸಂಕ್ರಾಂತಿ,  ಮತ್ತು ಕೊನಘಟ್ಟ ಚಂದ್ರಪ್ಪ, ಕೆಸ್ತೂರು ಗಿರೀಶ್, ತಿಪ್ಪೂರು ನರಸಿಂಹ ಮೂರ್ತಿ, ಮತ್ತು  ರಾಮಮೂರ್ತಿ. ನಾಗದೇನಹಳ್ಳಿ ಚಂದ್ರಣ್ಣ ಏಕಾಶಿಪುರ ರಾಜಣ್ಣ , ಬಾಶೆಟ್ಟಹಳ್ಳಿ ಕೃಷ್ಣ ಮೂರ್ತಿ, ಸದಾನಂದ, ಅರಹಳ್ಳಿ ಗುಡದಹಳ್ಳಿ ವೆಂಕಟೇಶ, ಓಬದೇನಹಳ್ಳಿ ರಾಜೇಂದ್ರ ಎಳ್ಳುಪುರ ಮಹೇಶ, ಬೈರಸಂದ್ರ ಗಂಗಾದರ್, ಜಿಂಕೆಬಚ್ಚಹಳ್ಳಿ ದುರ್ಗೇಶ್ ಹಾಜರಿದ್ದರು.

Ramesh Babu

Journalist

Recent Posts

ಮಳೆಗಾಗಿ ಆಚರಣೆಗಳ ಮೊರೆ: ಬರದ ನಡುವೆ ಭರವಸೆಯ ಸಂಪ್ರದಾಯಗಳು

ಮಳೆ ಎನ್ನುವುದು ರೈತನ ಬದುಕಿನ ಜೀವನಾಡಿ. ಮುಂಗಾರು ವಿಳಂಬವಾದಾಗ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಮಾತ್ರವಲ್ಲ, ಗ್ರಾಮೀಣ ಜೀವನವೇ…

27 minutes ago

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

23 hours ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

2 days ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

2 days ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

2 days ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

3 days ago