ಬಾಬಾ ಸಾಹೇಬರ ದಾರಿಯಲ್ಲಿ ನಾವು ಹೊರಟರೆ ನಮ್ಮ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ- ಸಮಾಜ ಸೇವಕ ಜಿ. ರಾಜಗೋಪಾಲ್

ನಿಜವಾದ ಜ್ಞಾನಿಗಳು ಬಾಬಾ ಸಾಹೇಬರ ನಡೆ ಹಾಗೂ ಬುದ್ಧನ ದಾರಿಯಲ್ಲಿ ಅರಿತು ಹೊರಟರೆ ಇಡೀ ಜಗತ್ತೇ ಬುದ್ಧನ ಧಮ್ಮಕ್ಕೆ ಪರಿವರ್ತನೆ ಹೊಂದಿದರೂ ಆಶ್ಚರ್ಯ ವೇನಿಲ್ಲ ಎಂದು ಸಮಾಜ ಸೇವಕ ಜಿ. ರಾಜಗೋಪಾಲ್ ಅಭಿಪ್ರಾಯಪಟ್ಟರು.

ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ 68ನೇ ಬಾಬಾ ಸಾಹೇಬರ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತಾಡಿದ ಅವರು, ನಿಜವಾಗಿ ಬಾಬಾ ಸಾಹೇಬರ ದಾರಿಯಲ್ಲಿ ನಾವು ಹೊರಟರೆ ನಮ್ಮೆಲ್ಲರ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಇಂದಿನ ಜಗತ್ತಿಗೆ ಬಾಬಾ ಸಾಹೇಬರ ಜ್ಞಾನ, ಬುದ್ಧನ ಮೈತ್ರಿ ಹಾಗೂ ಬಸವಣ್ಣನ ಕ್ರಾಂತಿ ಪ್ರಸ್ತುತವಾಗಿವೆ ಎಂದು ವಿದ್ಯಾರ್ಥಿಗಳಿಗೆ ಪರಿನಿರ್ವಾಣದ ಮಹತ್ವವನ್ನು ತಿಳಿಸಿದರು.

ಈ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಂಡಿಸಿದ ಡಾ.ಪ್ರಕಾಶ್ ಮಂಟೇದ ಬುದ್ಧನ ಪರಿನಿಬ್ಬಾಣವು ಬಹುಶಹ ಇಂದಿನ ಅನುಭೋಗ ಜಗತ್ತಿನ ರೋಗಗ್ರಸ್ಥ ಜನಕ್ಕೆ ಮದ್ದಾಗಬಲ್ಲದು ಹಾಗೂ ಬಾಬಾ ಸಾಹೇಬರು ಬುದ್ಧನನ್ನು ಕುರಿತು ಚಿಂತಿಸಿದ ಬಗೆ ಸರ್ವರ ಸುಖ ಶಾಂತಿಯ ನೆಮ್ಮದಿ ತತ್ವವನ್ನು ಹೇಳುತ್ತದೆ‌. ಅವರು ಹೇಳಿದಂತೆ, ನಾವು ತ್ಯಾಗ, ತಾಳ್ಮೆ ಮತ್ತೂ ನಿಶ್ವಾರ್ಥತೆಯಿಂದ ನಮ್ಮ ಬಲವನ್ನೆಲ್ಲ ಒಗ್ಗೂಡಿಸಿ ಕಾರ್ಯನಿರ್ವಹಿಸಬೇಕಿದೆ. ಈ ದಿಶೆಯಲ್ಲಿ ಮುಂದೆ ಅಂಬೇಡ್ಕರ್ ಅಧ್ಯಯನ ಕೇಂದ್ರವು ಬಾಬಾ ಸಾಹೇಬರ ಸಮಾಜೋರ್ಥಿಕ ಆಧ್ಯಾತ್ಮಿಕ ವಿಚಾರಗಳನ್ನು ಯುವ ಜನತೆಯ ಜೊತೆ ಹಂಚುವ ಪ್ರಯತ್ನವನ್ನು ಮಾಡುತ್ತದೆ ಎಂದರು..

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ, ಬಾಬಾ ಸಾಹೇಬರ ಜ್ಞಾನ ಮೇಧಾಶಕ್ತಿ ಎಲ್ಲವೂ ನಮ್ಮ ನಡೆ ನುಡಿ ಒಳಗೆ ಪ್ರಕಟವಾಗಬೇಕೆಂದು ಆಗ್ರಹಪಡಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಬಿ. ಆರ್ ಗಂಗಾಧರಯ್ಯ, ಪ್ರೊ.ಡೊರೀನ್ ಸ್ನೇಹಲತಾ, ಪ್ರೊ. ಲಲಿತಮ್ಮ ಹಾಗೂ ಡಾ. ಸತೀಶ್ ಇಟಗಿ, ಪ್ರೊ. ನೀರಜಾ ದೇವಿ, ಡಾ. ಶೋಭಾ ಮಲ್ಹಾರಿ, ವಿನೋದ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Ramesh Babu

Journalist

Recent Posts

ಶ್ರಾವಣ ಮಾಸದ ಕೊನೆಯ ಸೋಮವಾರ: ದಿನ್ನೆ ಬಯಲು ಬಸವಣ್ಣ ದೇವಾಲಯದಲ್ಲಿ ಹೂವಿನ ಆರತಿ ಸೇವೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಎಸ್.ಎಂ.ಗೊಲ್ಲಹಳ್ಳಿ ಗ್ರಾಮದ ದಿನ್ನೆ ಬಯಲು ಬಸವಣ್ಣ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ವಿಶೇಷ ಪೂಜೆ…

10 hours ago

ಅಗ್ನಿ ಅವಘಡದ ವೇಳೆ ತುರ್ತು ಕ್ರಮಗಳ ಕುರಿತು ಅಣಕು ಪ್ರದರ್ಶನ: ಯುವ ಆಪ್ತಮಿತ್ರ ತರಬೇತಿ ಶಿಬಿರದಲ್ಲಿ ರೋವರ್ಸ್–ರೇಂಜರ್ಸ್‌ಗೆ ಜಾಗೃತಿ

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ವತಿಯಿಂದ ಹಮ್ಮಿಕೊಂಡಿರುವ ‘ಯುವ ಆಪ್ತಮಿತ್ರ’ ತರಬೇತಿ ಶಿಬಿರದ ಅಂಗವಾಗಿ ನಗರದ…

12 hours ago

ಘಾಟಿ ಸುಬ್ರಹ್ಮಣ್ಯ ತೇರಿನ ಬೀದಿಯಲ್ಲಿದ್ದ ಪೂಜಾ ಸಾಮಗ್ರಿ ಅಂಗಡಿಗಳ ತೆರವು

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿರುವ ತೇರಿನ ಬೀದಿಯ ಇಕ್ಕೆಲಗಳಲ್ಲಿ ಇಟ್ಟುಕೊಂಡಿದ್ದ ಪೂಜಾ ಸಾಮಗ್ರಿ ಅಂಗಡಿಗಳನ್ನು…

18 hours ago

ಅಂಗನವಾಡಿ ಕೇಂದ್ರದ ಬಳಿ ಚರಂಡಿ ನೀರು; ಪುಟಾಣಿ ಮಕ್ಕಳ ಪರದಾಟ: ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ: ರೋಗ ಹರಡುವ ಭೀತಿ

ದೊಡ್ಡಬಳ್ಳಾಪುರ: ನಗರದ ಕನಕದಾಸ ರಸ್ತೆ, ದೇವರಾಜನಗರದಲ್ಲಿರುವ ಅಂಗನವಾಡಿ ಕೇಂದ್ರದ ಬಳಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಪುಟಾಣಿ ಮಕ್ಕಳು…

18 hours ago

‘ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು’

ದೊಡ್ಡಬಳ್ಳಾಪುರ: ಇಂದಿನ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಶಿಕ್ಷಕರಿಗೆ ಜ್ಞಾನವಷ್ಟೇ ಸಾಕಾಗುವುದಿಲ್ಲ. ಅಪಾರ ತಾಳ್ಮೆ, ಸಹನೆ, ನಯ-ವಿನಯ ಹಾಗೂ ಮಕ್ಕಳ ಮನಸ್ಸನ್ನು…

2 days ago

ಬೆಸ್ಕಾಂ ವಿರುದ್ಧ ಒಣ ಮೆಣಸಿನಕಾಯಿ ಹೊಗೆ ಹೋರಾಟಕ್ಕೆ ರೈತರ ನಿರ್ಧಾರ

ಕೋಲಾರ : ಬರ ಹಾಗೂ ಬಿಸಿಲಿನ ತಾಪದಿಂದ ರೈತರ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ…

2 days ago